More

    ಅವರ ಧರ್ಮಕ್ಕೆ ವಿರುದ್ಧವಾಗಿ ಅದನ್ನು ಮಾಡ್ತಾರಾ?; ಟಿಪ್ಪು ಪ್ರತಿಮೆ ವಿಚಾರವಾಗಿ ಸಚಿವ ಮಾಧುಸ್ವಾಮಿ ಪ್ರಶ್ನೆ

    ಹಾಸನ: ಟಿಪ್ಪು ಸುಲ್ತಾನ್ ಪ್ರತಿಮೆ ಸ್ಥಾಪನೆ ವಿಚಾರವಾಗಿ ರಾಜ್ಯದಲ್ಲಿ ವಿವಾದ ಉಂಟಾಗಿದ್ದು, ಇದೀಗ ಕಾನೂನು ಸಚಿವ ಮಾಧುಸ್ವಾಮಿ ಆ ಕುರಿತಂತೆ ಪ್ರತಿಕ್ರಿಯೆ ನೀಡಿದ್ದಷ್ಟೇ ಅಲ್ಲದೆ, ಪ್ರಶ್ನೆಯೊಂದನ್ನು ಎತ್ತಿದ್ದಾರೆ. ಅಷ್ಟಕ್ಕೂ ಟಿಪ್ಪು ಪ್ರತಿಮೆ ಸ್ಥಾಪಿಸುವಂಥ ಧರ್ಮಕ್ಕೆ ವಿರುದ್ಧವಾದ ಕೆಲಸ ಮಾಡುತ್ತಾರಾ ಎಂಬುದಾಗಿ ಅವರು ಪ್ರಶ್ನೆ ಮಾಡಿದ್ದಾರೆ.

    ಹಾಸನ ಜಿಲ್ಲೆಯ ಬೇಲೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಣ್ಣ ನೀರಾವರಿ, ಕಾನೂನು ಹಾಗೂ ಸಂಸದೀಯ ವ್ಯವಹಾರ ಸಚಿವ ಮಾಧುಸ್ವಾಮಿ, ಟಿಪ್ಪು ಪ್ರತಿಮೆ ಸ್ಥಾಪನೆ ವಿಚಾರವಾಗಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಟಿಪ್ಪು ಸುಲ್ತಾನ್ ಮುಸ್ಲಿಮರು, ನಮ್ಮ ನಾಯಕರು ಎಂದು ಅವರ ಪ್ರತಿಮೆ ಮಾಡಿದರೆ ನಮ್ಮ ತಕರಾರು ಇಲ್ಲ ಎಂದು ಅವರು ಹೇಳಿದ್ದಾರೆ.

    ಆದರೆ ಈವರೆಗೂ ಯಾವುದೇ ಮುಸ್ಲಿಮರ ಪ್ರತಿಮೆ ನಿರ್ಮಾಣವಾಗಿಲ್ಲ. ಏಕೆಂದರೆ ಮುಸ್ಲಿಮರಲ್ಲಿ ವಿಗ್ರಹ ಆರಾಧಾನೆ ಇಲ್ಲ. ಹೀಗಾಗಿ ಅವರ ಧರ್ಮಕ್ಕೆ ವಿರುದ್ಧವಾಗಿ ಪ್ರತಿಮೆ ಮಾಡುತ್ತಾರಾ? ಎಂಬ ಪ್ರಶ್ನೆಯೊಂದನ್ನು ಮಾಧುಸ್ವಾಮಿ ಎತ್ತಿದ್ದಾರೆ. ಮುಸ್ಲಿಮರನ್ನು ಓಲೈಸಲು ಇವರೇನಾದರೂ ಪ್ರತಿಮೆ ಮಾಡಲು ಹೊರಟರೆ ಜನರು ಉತ್ತರ ಹೇಳುತ್ತಾರೆ, ಬುದ್ಧಿ ಕಲಿಸುತ್ತಾರೆ. ಪ್ರತಿಮೆ ಮಾಡಿದವರು ಕಾಲ ಮೇಲೆ ಚಪ್ಪಡಿ ಎಳೆದುಕೊಂಡಂತಾಗುತ್ತದೆ ಎಂಬುದಾಗಿ ಮಾಧುಸ್ವಾಮಿ ಹೇಳಿದ್ದಾರೆ.

    ಶೂಟಿಂಗ್ ವೇಳೆ ಎಡವಟ್ಟು, ನಟಿ ರಾಗಿಣಿ ದ್ವಿವೇದಿಗೆ ಪೆಟ್ಟು!

    ಮತ್ತೆ ಬರುತ್ತೆ ಆರ್ಕುಟ್​?; ರಿಪ್​ ಟ್ವಿಟರ್​ ಟ್ರೆಂಡಿಂಗ್​ ಬೆನ್ನಿಗೇ ಗರಿಗೆದರಿದ ನಿರೀಕ್ಷೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts