ಬೆಂಗಳೂರು: ಬೆಂಗಳೂರು ಕೋಟ್ಯಂತರ ಜನರಿಗೆ ವಾಸಸ್ಥಾನ. ಈ ಊರಿನ ಕುರಿತು ಆಗಾಗ ಚಿತ್ರಗಳು ಬಂದಿದ್ದುಂಟು. ಈಗ ಹೊಸಬರ ತಂಡವೊಂದು ‘ಮೇಡ್ ಇನ್ ಬೆಂಗಳೂರು’ ಎಂಬ ಚಿತ್ರವನ್ನು ಸದ್ದಿಲ್ಲದೆ ಮುಗಿಸಿದ್ದು, ಇದೇ ಮ0ರಂದು ಬಿಡುಗಡೆ ಮಾಡವುದಕ್ಕೆ ಸಜ್ಜಾಗಿದೆ.
ಇದನ್ನೂ ಓದಿ: ಚಂದನವನದಲ್ಲಿ ಮುಂದುವರೆದ ದಾಸ ಪರಂಪರೆ; ಜಗನ್ನಾಥ ದಾಸರ ನಂತರ ವೆಂಕಟದಾಸರ ಕುರಿತ ಚಿತ್ರ
ಈ ಚಿತ್ರವನ್ನು ನಿರ್ಮಿಸಿರುವುದು ಬಾಲಕೃಷ್ಣ ಬಿ.ಎಸ್. ಈ ಚಿತ್ರದ ಕುರಿತು ಮಾತನಾಡುವ ಅವರು, ‘ನಾವು ಮೂರು ಜನ ಸ್ನೇಹಿತರು ಸೇರಿ ಇಪ್ಪತ್ತೈದು ವರ್ಷಗಳ ಹಿಂದೆ ಒಂದು ಕಂಪನಿ ಆರಂಭಿಸಿದ್ದೆವು. ನಿರ್ದೇಶಕ ಪ್ರದೀಪ್ ಶಾಸ್ತ್ರಿ ಸ್ಟಾರ್ಟ್ ಅಪ್ ಹಾಗೂ ಬೆಂಗಳೂರಿನ ಮೇಲಿರುವ ಎಮೋಷನ್ ಕುರಿತಾದ ಈ ಚಿತ್ರದ ಕಥೆ ಹೇಳಿದರು. ನನಗೆ ನಾವು ಕಂಪನಿ ಆರಂಭಿಸಿದ ದಿನಗಳು ನೆನಪಾದವು. ಕಥೆ ಇಷ್ಟವಾಗಿ ಸಿನಿಮಾ ಆರಂಭ ಮಾಡಿದ್ದೆವು’ ಎನ್ನುತ್ತಾರೆ.
ಬೆಂಗಳೂರು ಎಂದರೆ ಎಮೋಷನ್ ಎಂದು ವ್ಯಾಖ್ಯಾನಿಸುವ ನಿರ್ದೇಶಕ ಪ್ರದೀಪ್ ಶಾಸ್ತ್ರಿ, ‘ಈ ಊರು ಅನೇಕರಿಗೆ ಜೀವನ ನೀಡಿದೆ. ಬೆಂಗಳೂರು ಹಾಗೂ ಸ್ಟಾರ್ಟ್ ಅಪ್ ಸುತ್ತ ನಮ್ಮ ಚಿತ್ರದ ಕಥೆ ಸಾಗುತ್ತದೆ. ಅನಂತನಾಗ್, ಸಾಯಿಕುಮಾರ್, ಪ್ರಕಾಶ್ ಬೆಳವಾಡಿ ಮುಂತಾದ ಹಿರಿಯ ಕಲಾವಿದರು ಹಾಗೂ ಮಧುಸೂದನ್, ಪುನೀತ್ ಮಾಂಜಾ, ವಂಶೀಧರ್, ಹಿಮಾಂಶಿ ಅವರಂತಹ ಕಿರಿಯ ಕಲಾವಿದರ ತಾರಾಬಳಗ ಈ ಚಿತ್ರದಲ್ಲಿದೆ’ ಎನ್ನುತ್ತಾರೆ.
ಇದನ್ನೂ ಓದಿ: ಕೊನೆಗೂ ಸುದ್ದಿ ನಿಜವಾಯ್ತು; ಧನ್ಯಾಗೆ ಒಂದು ವರ್ಷದ ಹಿಂದೆಯೇ ಮದುವೆಯಾಗಿತ್ತಂತೆ!
ತಾನು ಕೂಡಾ ಮೇಡ್ ಇನ್ ಬೆಂಗಳೂರು ಎನ್ನುವ ಹಿರಿಯ ನಟ ಸಾಯಿಕುಮಾರ್, ‘ನಾನು ಹುಟ್ಟಿದ್ದು ಆಂಧ್ರದಲ್ಲಿ. ಆದರೆ, ಜೀವನ ನೀಡಿದ್ದು ಬೆಂಗಳೂರು. ಈ ಚಿತ್ರದಲ್ಲಿ ಗ್ಯಾಂಗ್ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ’ ಎಂದು ಮಾಹಿತಿ ನೀಡುತ್ತಾರೆ.
‘ನಾಗಕನ್ಯೆ ಶ್ರೀವಾಸವಿ’ಯಾದ ನಿಮಿಕಾ ರತ್ನಾಕರ್; ಕಿರುಚಿತ್ರದಲ್ಲಿ ನಟನೆ …