More

    ಆನ್​ಲೈನ್​ ರಮ್ಮಿ ಚಟಕ್ಕೆ ಬಿದ್ದು 3 ಲಕ್ಷ ರೂ. ಕಳ್ಕೊಂಡ ಯುವಕ: ನಂತ್ರ ಹಣಕ್ಕಾಗಿ ಮಾಡಿದ್ದು ನೀಚ ಕೃತ್ಯ!

    ಪಟ್ಟಣಂತಿಟ್ಟ: ಇತ್ತೀಚಿನ ದಿನಗಳಲ್ಲಿ ಸಾಲದ ಆ್ಯಪ್​ಗಳು​ ಮತ್ತು ರಮ್ಮಿಯಂತಹ ಆನ್​ಲೈನ್​ ಜೂಜಾಟಗಳು ಬಡ ಮತ್ತು ಮಧ್ಯಮ ಕುಟುಂಬಗಳ ಕತ್ತು ಹಿಸುಕುತ್ತಿವೆ. ಆನ್​ಲೈನ್​ನಲ್ಲಿ ನಡೆಯುವ ಈ ವಂಚನೆಯ ಚಕ್ರವ್ಯೂಹಕ್ಕೆ ಸಿಲುಕಿ ಸಾಕಷ್ಟು ಮಂದಿ ಮನೆ, ಜಮೀನು ಮಾರಿಕೊಂಡು ಬೀದಿಗೆ ಬಿದ್ದಿದ್ದಾರೆ. ಅಲ್ಲದೆ, ಸಾಲದ ಕಿರುಕುಳ ತಾಳಲಾರದೇ ಬಲಿಯಾಗುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆಲ್ಲ ಕೂಡಲೇ ಕಡಿವಾಣ ಹಾಕದಿದ್ದರೆ, ಇನ್ನುಷ್ಟು ಅಮಾಯಕ ಜೀವಗಳು ಬಲಿಯಾಗುತ್ತವೆ.

    ಕೆಲವರು ಕಿರುಕುಳ ತಾಳಲಾರದೆ ಸಾವಿನ ಮನೆ ಕದ ತಟ್ಟಿದರೆ, ಇನ್ನೂ ಕೆಲವರು ಹಣ ಕಳೆದುಕೊಂಡ ಹತಾಶೆಯಲ್ಲಿ ಕಳ್ಳತನದ ಹಾದಿಯನ್ನು ಹುಡುಕಿಕೊಳ್ಳುತ್ತಾರೆ. ಇದೀಗ ಅಂಥದ್ದೇ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆನ್​ಲೈನ್​ ರಮ್ಮಿ ಜೂಜಾಟದಲ್ಲಿ 3 ಲಕ್ಷ ರೂ. ಹಣ ಕಳೆದುಕೊಂಡ ಯುವಕನೊಬ್ಬ, ಕೆಟ್ಟರೂ ಬುದ್ಧಿ ಕಲಿಯದೇ ರಮ್ಮಿ ಗೀಳಿಗೆ ಬಿದ್ದು, ಕಳ್ಳತನಕ್ಕೆ ಇಳಿದು ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ.

    ಬಂಧಿತ ಖದೀಮನನ್ನು ಅಮಲ್​ ಅಗಸ್ಟಿನ್​ ಎಂದು ಗುರುತಿಸಲಾಗಿದೆ. ಈತ ಕೇರಳದ ಕೊಟ್ಟಾಯಂ ಜಿಲ್ಲೆಯ ಪಲಾದ ಭರಂಗನಮ್​ ನಿವಾಸಿ. ರಮ್ಮಿ ಆಡಿ 3 ಲಕ್ಷ ರೂ. ಕಳೆದುಕೊಂಡಿದ್ದ ಅಮಲ್​, ಕಳೆದುಕೊಂಡ ಹಣವನ್ನು ಮರು ಹೊಂದಿಸಲು ಕಳ್ಳತನಕ್ಕೆ ಇಳಿದಿದ್ದ.

    ಇತ್ತೀಚೆಗೆ ನೆಡಿಯಕಲಾದಲ್ಲಿ 80 ವರ್ಷದ ವೃದ್ಧೆಯ ಕುತ್ತಿಗೆ ಮೇಲೆ ಚಾಕು ಇಟ್ಟು ಚಿನ್ನಾಭರಣವನ್ನು ಕದ್ದಿದ್ದ. ಇದೇ ಪ್ರಕರಣದಲ್ಲಿ ಪಟ್ಟಣಂತಿಟ್ಟದ ಎಲವಂತಿಟ್ಟ ಠಾಣಾ ಪೊಲೀಸರು ಆರೋಪಿ ಅಮಲ್​ನನ್ನು ಬಂಧಿಸಿದ್ದರು. ವಿಚಾರಣೆ ನಡೆಸಿದ ಬಳಿಕ ಆತನ ಮುಖವಾಡ ಕಳಚಿತು. ಆನ್​​​ಲೈನ್​ ರಮ್ಮಿ ಜೂಜಾಟದ ಗೀಳು ಅಂಟಿಸಿಕೊಂಡಿದ್ದ ಅಮಲ್​, ಕೆಟ್ಟ ದಾರಿ ಹಿಡಿದಿರುವುದು ಬೆಳಕಿಗೆ ಬಂದಿದೆ.

    ರಮ್ಮಿ ಉಂಟುಮಾಡುತ್ತಿರುವ ಅವಾಂತರ ಒಂದೆರೆಡಲ್ಲ. ಸಾಕಷ್ಟು ಮಂದಿ ಇದರ ಜಾಲಕ್ಕೆ ಸಿಲುಕಿ ಮನೆ-ಮಠ ಮಾರಿಕೊಂಡಿದ್ದಾರೆ. ಅಲ್ಲದೆ, ಕೆಲವರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ಯುವಕನೊಬ್ಬ ರಮ್ಮಿ ಆಟದಲ್ಲಿ ಹಣ ಕಳೆದುಕೊಂಡು ಅದೇ ನೋವಿನಲ್ಲಿ ಸಾವಿಗೆ ಶರಣಾಗಿದ್ದ. ಮೃತ ಯುವಕನನ್ನು ಪಿ.ಕೆ. ರೋಶ್​ (23) ಎಂದು ಗುರುತಿಸಲಾಗಿದೆ.

    ರೋಶ್​ ಪಲ್ಲಿವಾಸಲ್​ ಅಟ್ಟುಕಾಡುವಿನ ವಾಟರ್​ಫಾಲ್ಸ್​ ಬಳಿಯ ರೆಸಾರ್ಟ್​ ಒಂದರಲ್ಲಿ ಉದ್ಯೋಗಿಯಾಗಿದ್ದ. ತಾನು ಕೆಲಸ ಮಾಡುತ್ತಿದ್ದ ರೆಸಾರ್ಟ್​ನ ಕೋಣೆಯೊಂದರಲ್ಲಿ ನೇಣು ಬಿಗಿದು ಸಾವಿಗೆ ಶರಣಾದನು. ಇದೇ ರೀತಿ ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಆನ್​ಲೈನ್​ ರಮ್ಮಿ ಜೂಜಾಟದ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಜನರಲ್ಲೂ ರಮ್ಮಿ ಆಟದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. (ಏಜೆನ್ಸೀಸ್​)

    ‘ಚಮ್ಮಕ್​ ಚಲ್ಲೋ…’ ಹಾಡಿಗೆ ಸೊಂಟ ಬಳುಕಿಸಿದ ಮಹಿಳೆಯರು; ಚಳಿಗಾಲದ ಚಳಿ ಹಾರಿಹೋಯ್ತು ಎಂದ ನೆಟ್ಟಿಜನ್ಸ್

    ‘2023 ಅವರಿಗೆ ಅತ್ಯುತ್ತಮ ವರ್ಷವಾಗಿತ್ತು’; ಸ್ಟಾರ್​ ಕ್ರಿಕೆಟಿಗನ ಬಗ್ಗೆ ವೆಂಕಟೇಶ್ ಪ್ರಸಾದ್ ಗುಣಗಾನ

    2024 ರಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ, ಬೆಳ್ಳಿ ದರ…ತಜ್ಞರು ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts