ಚಾಮರಾಜನಗರ: ಅಪರೂಪದ ಪ್ರಾಣಿ ‘ಕಾಡುಪಾಪ’ಗಳನ್ನು ಸೆರೆ ಹಿಡಿದು ಮಾರಾಟಕ್ಕಾಗಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ.
ಮಲೆ ಮಹದೇಶ್ವರ ಬೆಟ್ಟದ ಗುರುಬಸಪ್ಪನೊಡ್ಡು ನಿವಾಸಿ ವೀರಭದ್ರ (58), ಮೈಸೂರಿನ ದೊಣ್ಣನಾಯಕಾನ್ಯ ಗ್ರಾಮದ ಪಿ.ರಾಜು ಬಂಧಿತರು. ಮತ್ತೊಬ್ಬ ಆರೋಪಿ ಮಹದೇಶ್ವರ ಬೆಟ್ಟದ ಆನೆಗೊಲದ ಮಹದೇವ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಬಂಧಿತರು ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಅರಿಶಿಣ ಫ್ಯಾಕ್ಟರಿ ಮುಂದೆ ಬುಧವಾರ ರಾತ್ರಿ ಬೈಕ್ನಲ್ಲಿ ಎರಡು ಕಾಡುಪಾಪಗಳನ್ನು ಕಬ್ಬಿಣದ ಪಂಜರ ಸಮೇತ ಚೀಲದಲ್ಲಿ ಹಾಕಿಕೊಂಡು ಬೆಂಗಳೂರು ಕಡೆ ಮಾರಾಟ ಮಾಡುವುದಕ್ಕೆ ಕೊಳ್ಳೇಗಾಲದತ್ತ ಬರುತ್ತಿದ್ದರು.
ಈ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಳದ ಪಿಎಸ್ಐ ವಿಜಯರಾಜ್ ತಂಡ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅರಣ್ಯ ಸಂಚಾರಿದಳದ ಹೆನ್ ಕಾನ್ಸ್ಟೇಬಲ್ ರಾಮಚಂದ್ರ, ತಕ್ಕಿವುಲ್ಲಾ, ಶಂಕರ್, ಬಸವರಾಜು, ಸ್ವಾಮಿ, ಕಾನ್ಸ್ಟೇಬಲ್ ಬಸವರಾಜು, ಚಾಲಕ ಪ್ರಭಾಕರ್ ಇದ್ದರು.
ಮಗನಿಂದಲೇ ತಾಯಿಗೆ ಮಹಾ ಮೋಸ: ಮಂಚದ ಮೇಲೆ ಮಲಗಿಕೊಂಡೇ ಎಸಿ ಕೋರ್ಟ್ಗೆ ಬಂದ ವೃದ್ಧೆ! ಕೊಳ್ಳೇಗಾಲದಲ್ಲಿ ಘಟನೆ
ಪತ್ನಿಯ ಕಿರುಕುಳ: ಮದ್ವೆಯಾದ ಮೂರೇ ತಿಂಗಳಿಗೆ ಸಾವಿನ ಮನೆಯ ಕದ ತಟ್ಟಿದ ಪತಿ