ಚಿತ್ರದುರ್ಗ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಜಿಲ್ಲಾ ನ್ಯಾಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಲೋಕಅದಾಲತ್ ಕಾರ್ಯಕ್ರಮ ಅರ್ಥಪೂರ್ಣವಾಗಿ ಯಶಸ್ಸು ಕಂಡಿದೆ.
ವಿಮಾ ಕ್ಲೈಮ್ ಮೊತ್ತ ವಿಷಯಕ್ಕೆ ಸಂಬಂಧಿಸಿದಂತೆ ಉಂಟಾಗಿದ್ದ ಅತ್ತೆ ಸೊಸೆ ನಡುವಿನ ಮನಸ್ತಾಪವನ್ನು ಈ ಲೋಕಅದಾಲತ್ ಕೊನೆಯಾಗಿಸಿದೆ. ಆದಾಲತ್ಗೆ ಅತ್ತೆ-ಸೊಸೆಯಂತೆ ಹಾಜರಾಗಿದ್ದವರು ರಾಜೀ ಬಳಿಕ ತಾಯಿ- ಮಗಳಂತೆ ಒಂದಾಗಿ ತೆರಳಿದ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ. ಇದನ್ನೂ ಓದಿರಿ ಜಾರಕಿಹೊಳಿ ಸಿಡಿ ಪ್ರಕರಣ ಲೈಂಗಿಕ ಶೋಷಣೆಯೋ, ಷಡ್ಯಂತ್ರವೋ, ಹನಿಟ್ರ್ಯಾಪೋ?
ಮಾಡನಾಯಕನಹಳ್ಳಿ ಕರಿಬಸಮ್ಮರ ಪುತ್ರ ಚಿದಾನಂದಪ್ಪ ಅಪಘಾತದಲ್ಲಿ ನಿಧನ ಹೊಂದಿದ್ದು, ವಿಮೆ ಪಾಲಿಸಿ ಮೊತ್ತ 8 ಲಕ್ಷ ರೂ. ಹಂಚಿಕೆ ವಿಷಯದಲ್ಲಿ ಅತ್ತೆ-ಸೊಸೆ ನಡುವೆ ಉಂಟಾದ ಮನಸ್ತಾಪ ಬಗೆಹರಿಯದೆ ಒಂದೂವರೆ ವರ್ಷದ ಹಿಂದೆ ಕೋರ್ಟ್ ಮೆಟ್ಟಿಲೇರಿತ್ತು.
ಅದಾಲತ್ನಲ್ಲಿದ್ದ ಹಿರಿಯ ನ್ಯಾಯಾಧೀಶರಾದ ಜಿತೇಂದ್ರನಾಥ್, ಗಿರೀಶ್, ವಾದಿ-ಪ್ರತಿವಾದಿ ವಕೀಲರಾದ ವಿಶ್ವನಾಥಯ್ಯ, ಎಚ್.ಎಸ್.ಮಂಜುನಾಥ್, ಎಲ್ಐಸಿ ಅಧಿಕಾರಿ ಮಧುಸೂದನ್, ಮಧ್ಯಸ್ಥಗಾರ ಚಂದ್ರಪ್ಪ ಮತ್ತಿರರ ಸಮ್ಮುಖದಲ್ಲಿ ಅತ್ತೆ-ಸೊಸೆ ಪರಸ್ಪರ ಹಾರ ಬದಲಾಯಿಸಿಕೊಂಡು ಕೇಸಿನ ರಾಜಿಗೆ ಸಮ್ಮತಿಸಿದರು.
ಅಕ್ಕಿ ಪಡೆಯಲು ಬಾಗಿಲು ತೆಗೆದ ಯುವತಿಯನ್ನ ಬೆತ್ತಲೆ ಮಾಡಿ ಚಿತ್ರೀಕರಿಸಿದ! ಮುಂದೆ ಆಗಿದ್ದೆಲ್ಲವೂ ಅವಾಂತರ