More

    ಬನ್ನಿಮಹಾಂಕಾಳಿಗೆ ರುದ್ರಾಭಿಷೇಕ

    ಲಿಂಗಸುಗೂರು: ಪಟ್ಟಣದ 17ನೇ ವಾರ್ಡ್‌ನ ಭೈರವಿ ಬನ್ನಿಮಹಾಂಕಾಳಿ ಹಾಗೂ ಗಣಪತಿ ದೇವಸ್ಥಾನದ 15 ನೇ ವಾರ್ಷಿಕೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಶುಕ್ರವಾರ ನಡೆದವು.

    ಬೆಳಗ್ಗೆ ಭೈರವಿ ಬನ್ನಿಮಹಾಂಕಾಳಿ ಹಾಗೂ ಗಣೇಶ ಮೂರ್ತಿಗೆ ರುದ್ರಾಭಿಷೇಕ, ಹೋಮ-ಹವನ ಸೇರಿ ನಾನಾ ಪೂಜಾ ಕೈಂಕರ್ಯಗಳು ನಡೆದವು. ದೇವಸ್ಥಾನ ಸಮಿತಿಯಿಂದ ಮುತ್ತೈದೆಯರಿಗೆ ಉಡಿ ತುಂಬಲಾಯಿತು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ್, ಪದಾಧಿಕಾರಿಗಳಾದ ಈರಣ್ಣ ಗುರುಸ್ವಾಮಿ, ಕೆ.ಶರಣಬಸವ ವಕೀಲ, ರಾಜು ಮಹೇಂದ್ರಕರ್, ವೀರೇಶ, ಚನ್ನಪ್ಪ ಮಾಗಿ, ಉದಯ ಕುಮಾರ, ಹನುಮಂತ, ಸೂಗೂರೇಶ, ಮನೋಹರ, ರಾಜೇಶ, ಕೃಷ್ಣ, ಸುನೀಲ್ ರಡ್ಡಿ, ಮುರಳಿ ರಡ್ಡಿ, ಎ.ಬಿ.ಪಾಟೀಲ್, ಕಸ್ತೂರೆಪ್ಪ, ಸುಧೀರ್, ಶಾರದಾ ಪಾಟೀಲ್, ಶಕುಂತಲಾ, ಸುಲೋಚನಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts