ಲಿಂಗಸುಗೂರು: ಪ್ರಸಕ್ತ ವರ್ಷದಲ್ಲಿ ಪೆಬ್ರವರಿ ತಿಂಗಳಿನಿಂದಲೇ ಸುಡು ಬಿಸಿಲು ಆರಂಭವಾಗಿದೆ. ಬಿಸಿಲಿನ ತಾಪ ತಾಳದೆ ಜನತೆ ಹಣ್ಣು, ತಂಪು ಪಾನೀಯಗೆ ಮೊರೆ ಹೋಗುತ್ತಿದ್ದಾರೆ.
ಇದನ್ನೂ ಓದಿ: ಈತನ ಹೆಸರು ಸಚಿನ್, ಇಷ್ಟದ ಕ್ರಿಕೆಟಿಗ ವಿರಾಟ್ ಕೊಹ್ಲಿ!: ಭಾರತ ಕಿರಿಯರ ತಂಡದ ಗೆಲುವಿನ ರೂವಾರಿ
ರಾಯಚೂರು ಅತಿಹೆಚ್ಚು ದಾಖಲೆ ಬಿಸಿಲಿನ ತಾಪಮಾನಕ್ಕೆ ಹೆಸರುವಾಸಿ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ವರುಣನ ಅವಕೃಪೆಯಿಂದ ತೀವ್ರ ಬರಗಾಲ ಆವರಿಸಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಕಲ್ಲಂಗಡಿ, ಕರಬೂಜ್ ಹಣ್ಣುಗಳ ಸೇವನೆ ಹಾಗೂ ಎಳೆನೀರು, ಕಬ್ಬಿನ ಹಾಲು, ವಿವಿಧ ಹಣ್ಣಿನ ಜ್ಯೂಸ್, ಶರಬತ್, ಮಜ್ಜಿಗೆ, ಲಸ್ಸಿ, ಐಸ್ಕ್ರೀಮ್ ನಾನಾ ಕಂಪನಿಯ ತಂಪು ಪಾನೀಯಗಳ ಮೊರೆ ಹೋಗುವಂತೆ ಬಿಸಿಲಿನ ತಾಪ ಮಾಡಿದೆ.