ಲಖನೌ: ಉತ್ತರಪ್ರದೇಶ ಸರ್ಕಾರದ ಸಾಮೂಹಿಕ ವಿವಾಹ ಯೋಜನೆಯಲ್ಲಿ ವಂಚನೆ ನಡೆದಿರುವುದು ಇತ್ತೀಚೆಗೆ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ತಡೆಗೆ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದೆ. ವಂಚನೆ ತಡೆಯುವ ನಿಟ್ಟಿನಲ್ಲಿ ಸ್ಥಳದಲ್ಲೇ ವಿವಾಹ ನೋಂದಣಿ, ಫೋಟೋಗ್ರಫಿ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಅಸೀಮ್ ಅರುಣ್ ತಿಳಿಸಿದ್ದಾರೆ.
ಸ್ಥಳದಲ್ಲೇ ವಿವಾಹ ನೋಂದಣಿ ಮಾಡಿಸಿ ಪ್ರಮಾಣಪತ್ರ ವಿತರಿಸಲಾಗುತ್ತದೆ. ನವವಿವಾಹಿತರ ಮಾಹಿತಿ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ರ್ ಮತ್ತು ಆಧಾರ್ ಜತೆ ಲಿಂಕ್ ಮಾಡಲಾಗುತ್ತದೆ. ಎಲ್ಲ ವಿಧಿ&ವಿಧಾನಗಳನ್ನು ವಿಡಿಯೋ ಮಾಡಿ ಸಂಗ್ರಹಿಸಿಟ್ಟುಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಅಲ್ಲದೆ “ವಧು&ವರರು ಈಗಾಗಲೇ ಮದುವೆ ಆಗಿದ್ದರೇ?’ ಎಂಬುದನ್ನು ಸ್ಥಳಿಯ ಪಂಚಾಯತ್ ಕಾರ್ಯದರ್ಶಿಯಿಂದ ಪರಿಶೀಲಿಸುವ ಜತೆಗೆ ವಿವಿಧ ಹಂತದಲ್ಲಿ ದೃಢೀಕರಿಸಲಾಗುತ್ತದೆ ಎಂದೂ ತಿಳಿಸಿದ್ದಾರೆ.
ಸದ್ಯ ಸಾಮೂಹಿಕ ವಿವಾಹದಲ್ಲಿ ಒಮ್ಮೆಗೆ 100ಕ್ಕಿಂತ ಹೆಚ್ಚು ಮದುವೆ ಆಯೋಜಿಸುವಂತಿಲ್ಲ. ಒಂದು ವೇಳೆ ಸಾಮೂಹಿಕ ವಿವಾಹದಲ್ಲಿ ಸಿಎಂ&ಸಚಿವರು ಅತಿಥಿ ಆಗಿ ಆಗಮಿಸುವುದಿದ್ದರೆ ಈ ಮಿತಿಯಲ್ಲಿ ಸ್ವಲ್ಪ ವಿನಾಯಿತಿ ಇರುತ್ತದೆ ಎಂದಿದ್ದಾರೆ.