ಕುಡಚಿ: ಕಲಿಕೆ ನಿಂತ ನೀರಾಗಬಾರದು. ಸದಾ ಹರಿಯುವ ನೀರಿನಂತಾಗಬೇಕು. ಶಿಕ್ಷಣದ ಜತೆಗೆ ಸಂಸ್ಕಾರ ಬೆಳೆಸಿಕೊಳ್ಳುವ ಮೂಲಕ ಉತ್ತಮ ಜ್ಞಾನ ಗಳಿಸಬೇಕು ಎಂದು ಸಾಹಿತಿ ಡಾ.ಎಲ್.ಎಸ್.ಚೌರಿ ಹೇಳಿದರು.
ಪಟ್ಟಣದ ಅಜಿತ ಬಾನೆ ಶಾಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಶಿಕ್ಷಣ ಸಂಸ್ಥೆ ಹಾಗೂ ಎಸ್ಬಿಜಿ ಗ್ರೂಪ್ ಸಂಯುಕ್ತ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಶೈಕ್ಷಣಿಕ ಸಾಲಿನ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನಿವೃತ್ತ ಪ್ರಾಚಾರ್ಯ ಎಂ.ಎನ್.ದಾನನ್ನವರ, ಬಾಬಾಲಾಲ ಪಿನ್ನಿತೋಡ, ಎ.ಎಸ್.ಟೊಣ್ಣೆ, ಎ.ಬಿ.ಪಾಟೀಲ, ಸತೀಶ ನಾಯಿಕ, ಶಂಕರ ಮಾಂಗ ಇತರರಿದ್ದರು.