More

    ಜೆಡಿಎಸ್‌ನ ‘ಜನತಾ ಜಲಧಾರೆ’ಗೆ ಹರಿದುಬಂದ ಜನಸಾಗರ!

    ಬೆಂಗಳೂರು: ರಾಜ್ಯದಲ್ಲಿ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡುವುದಕ್ಕೆ ಸಂಕಲ್ಪ ಮಾಡುವ ದೃಷ್ಟಿಯಿಂದ ಜೆಡಿಎಸ್ ಏ. 16ರಂದು ಆರಂಭಿಸಿದ್ದ ‘ಜನತಾ ಜಲಧಾರೆ’ ಸರಣಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ನೆಲಮಂಗಲದಲ್ಲಿ ಇಂದು ಯಶಸ್ವಿಯಾಗಿ ನಡೆಯಿತು.

    ಈ ಸಮಾರಂಭದಲ್ಲಿ ಭಾಗಿಯಾಗಲು ರಾಜ್ಯದ ನಾನಾ ಕಡೆಗಳಿಂದ ಸಾವಿರಾರು ಜೆಡಿಎಸ್ ಕಾರ್ಯಕರ್ತರು ನೆಲಮಂಗಲಕ್ಕೆ ಆಗಮಿಸಿದ್ದರಿಂದ ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಕೇವಲ ಹಾಸನ ಜಿಲ್ಲೆ ಒಂದರಿಂದಲೇ 547 ಸರ್ಕಾರಿ ಸಾರಿಗೆ ಬಸ್ ಮತ್ತು 600 ಖಾಸಗಿ ವಾಹನಗಳು ಬಂದಿವೆ. ರಾಜ್ಯದ ಇತರ ಭಾಗಗಳಿಂದಲೂ ಸಾವಿರಾರು ಬಸ್-ಟೆಂಪೋಗಳಲ್ಲಿ ಕಾರ್ಯಕರ್ತರು ಬಂದಿದ್ದಾರೆ.

    ಜೆಡಿಎಸ್‌ನ ‘ಜನತಾ ಜಲಧಾರೆ’ಗೆ ಹರಿದುಬಂದ ಜನಸಾಗರ!

    ಸುಮಾರು ಐದು ಲಕ್ಷ ಜನರಿಗೆ ಊಟೋಪಚಾರದ ವ್ಯವಸ್ಥೆಯನ್ನು ಸಮಾರೋಪ ಸಮಾರಂಭದಲ್ಲಿ ಮಾಡಲಾಗಿದ್ದು, ಸುಮಾರು 3 ಸಾವಿರ ಬಾಣಸಿಗರು ಇದರಲ್ಲಿ ತೊಡಗಿಕೊಂಡಿದ್ದಾರೆ. ಊಟ ಬಡಿಸಲು 2 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪಲಾವ್, ಜಿಲೇಬಿ, ಕೇಸರಿಬಾತ್, ಮಜ್ಜಿಗೆಯನ್ನು ಕಾರ್ಯಕರ್ತರಿಗೆ ವಿತರಿಸಲಾಗಿದೆ.

    ಜೆಡಿಎಸ್‌ನ ‘ಜನತಾ ಜಲಧಾರೆ’ಗೆ ಹರಿದುಬಂದ ಜನಸಾಗರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts