More

    ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಶಾಕ್​ ಕೊಡಲು ಸಚಿವ ರಮೇಶ್​ ಜಾರಕಿಹೊಳಿಯಿಂದ ಲಂಚ್​ ಪಾಲಿಟಿಕ್ಸ್!​

    ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಣಿಯಲು ಸಚಿವ ರಮೇಶ್​ ಜಾರಕಿಹೊಳಿ ಗ್ರಾಮೀಣ ಕ್ಷೇತ್ರದಲ್ಲಿ ಲಂಚ್ ಪಾಲಿಟಿಕ್ಸ್ ಮೊರೆ ಹೋಗಿದ್ದಾರೆ. ಬೆಳಗಾವಿಯಲ್ಲಿ ಮತ್ತಷ್ಟು ಹಿಡಿತ‌ ಸಾಧಿಸುವ ಯೋಜನೆ ರೂಪಿಸಿದ್ದಾರೆ.

    ಬೆಳಗಾವಿಯ ನಾವಗೆ ಕ್ರಾಸ್ ಬಳಿಯ ಇರುವ ಗಣೇಶ್ ಭಾಗದಲ್ಲಿ ಸ್ನೇಹ ಭೋಜನ ಕೂಟ ಕಾರ್ಯಕ್ರಮ ಏರ್ಪಡಿಸಲಾಗಿದೆ. ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆದ್ದ ನೂತನ ಸದಸ್ಯರಿಗೆ ಸತ್ಕಾರ ಮಾಡುವ ಮೂಲಕ ಗ್ರಾಮೀಣ ಕ್ಷೇತ್ರವನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಯೋಜನೆ ರೂಪಿಸಿದ್ದಾರೆ.

    ಇದನ್ನೂ ಓದಿ: ದೇಶದ ಕಿರಿಯ ಮಹಿಳಾ ಬಸ್​ ಡ್ರೈವರ್: 8 ವರ್ಷದಿಂದಲೇ ಬಸ್​ ಓಡಿಸೋ ಈಕೆಯ ಕತೆ ಕೇಳಿದ್ರೆ ಹಮ್ಮೆ ಪಡ್ತಿರಾ!

    ಬಿಜೆಪಿಯ ಯುವ ಮುಖಂಡ ಧನಂಜಯ ಜಾಧವ್​ ಅವರು ಆಯೋಜಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕ ಅನಿಲ್ ಬೆನಕೆ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದಾರೆ.

    ಸತ್ಕಾರ ಸಮಾರಂಭದ ಬಳಿಕ ನೂತನ ಸದಸ್ಯರಿಗೆ ಹಾಗೂ ಕಾರ್ಯಕರ್ತರಿಗೆ ಭೋಜನ ಕೂಟ ಆಯೋಜಿಸಲಾಯಿತು. ಈ ಮೂಲಕ ನಿಧಾನವಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ತಮ್ಮ ಹಿಡಿತ ಸಾಧಿಸಲು ಸಚಿವ ರಮೇಶ್ ಜಾರಕಿಹೊಳಿ‌ ಪ್ಲಾನ್ ಮಾಡಿದ್ದಾರೆಂದು ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)

    ಮದ್ವೆಯಾಗದೇ ಪಾಪು ಕೊಟ್ಟ… ಹೆಂಡ್ತಿ ಜತೆ ಅತ್ತೆಯನ್ನೂ ಕೊಲೆ ಮಾಡ್ದ- ದೇವನಹಳ್ಳಿಯಲ್ಲಿ ಭೀಕರ ಘಟನೆ

    ಅಮ್ಮಾ ಚಾಮುಂಡಿ … ಉರುಳು ಸೇವೆ ಮಾಡ್ತೀನಿ… ನಮ್​ ನೆಚ್ಚಿನ ನಟಿಗೆ ಏನೂ ಮಾಡಬೇಡಮ್ಮಾ…

    ಗಾಂಜಾ ವ್ಯಸನಿಯ ಪ್ರೀತಿಯ ಬಲೆಯಲ್ಲಿ ಬಿದ್ದವಳ ದುರಂತ ಅಂತ್ಯ: ತಾಯಿ ಬೆನ್ನಲ್ಲೆ ಯುವತಿಯೂ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts