ಹೈದರಾಬಾದ್: ವಯಸ್ಸಾದರೂ ಮದುವೆ ಆಗಲು ಸಾಧ್ಯವಾಗುತ್ತಿಲ್ಲ ಎಂಬ ಚಿಂತೆಯಲ್ಲೇ ಮನನೊಂದು ಮಹಿಳಾ ಕಾನ್ಸ್ಟೆಬಲ್ ಸಾವಿಗೆ ಶರಣಾಗಿರುವ ಘಟನೆ ಹೈದರಾಬಾದ್ನಲ್ಲಿ ಬುಧವಾರ ನಡೆದಿದೆ.
ಸುರೇಖಾ (28) ಮೃತ ಲೇಡಿ ಕಾನ್ಸ್ಟೆಬಲ್. ಈಕೆ ತೆಲಂಗಾಣದ ಕಂದಕುರ ಮಂಡಲದ ಜೈತವರಮ್ ಗ್ರಾಮದ ನಿವಾಸಿ. ಹೈದರಾಬಾದ್ನ ಛತ್ರಿನಕ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಳು. ಸಾಲಿಬಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಶಮ್ಶಿರಾಗಂಜ್ ಕಾಲ್ವಗಡ್ಡದಲ್ಲಿ ತನ್ನ ಅಕ್ಕನ ಮನೆಯಲ್ಲಿ ಸುರೇಖಾ ವಾಸವಿದ್ದಳು.
ಇದನ್ನೂ ಓದಿ: ‘ಮದುವೆ ಆದ ಮೇಲೆ ಹಿಂದೂ ಧರ್ಮಕ್ಕೆ ಮತಾಂತರ ಆದ್ರಾ?’ ಪ್ರಶ್ನೆಗೆ ಬಿಜೆಪಿ ನಾಯಕಿಯ ಖಡಕ್ ಉತ್ತರ
ಜಾತಕ ಸರಿಯಿಲ್ಲ
ಸುರೇಖಾ 2018ನೇ ಬ್ಯಾಚಿನ ಕಾನ್ಸ್ಟೆಬಲ್. ಛತ್ರಿನಕ ಪೊಲೀಸ್ ಠಾಣೆಯಲ್ಲಿ ಕಳೆದ ಒಂದು ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದರು. ಒಂದು ವರ್ಷದ ಹಿಂದಷ್ಟೇ ನಿಶ್ಚಿತಾರ್ಥ ನೆರವೇರಿತ್ತು. ಆದರೆ, ಕಾರಣಾಂತರಗಳಿಂದ ನಿಶ್ಚಿತಾರ್ಥ ಮುರಿಬಿದ್ದಿತ್ತು. ಇಬ್ಬರ ಜಾತಕ ಸರಿಯಿಲ್ಲ ಅಂತ ಮದುವೆ ರದ್ದಾಗಿತ್ತು. ತನ್ನ ಮದುವೆ ಎಂದಿಗೂ ನಡೆಯುವುದಿಲ್ಲ ಎಂದು ಸುರೇಖಾ ಮನನೊಂದಿದ್ದಳು.
ಈ ತಿಂಗಳ 2ನೇ ತಾರೀಖಿನಂದು ಸುರೇಖಾ ಅವರ ಅಕ್ಕ ಕೆಲಸಕ್ಕೆ ಹೋಗಿ 3ನೇ ತಾರೀಖಿನಂದು ಬೆಳಗ್ಗೆ 11 ಗಂಟೆಗೆ ಮನೆ ಬಂದರು. ಈ ವೇಳೆ ಮನೆಯ ಬಾಗಿಲು ಒಳಗಡೆಯಿಂದ ಲಾಕ್ ಆಗಿತ್ತು. ಎಷ್ಟೇ ಬಡಿದರೂ ತೆಗೆಯದಿದ್ದಾಗ ಅನುಮಾನ ಬಂದು ಅಕ್ಕಪಕ್ಕದವರನ್ನು ಕರೆದರು. ಬಳಿಕ ಬಾಗಿಲು ಮುರಿದು ನೋಡಿದಾಗ ಒಳಗಡೆ ಸುರೇಖಾ ನೇಣಿಗೆ ಶರಣಾಗಿದ್ದಳು.
ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ. ಸುರೇಖಾ ಮೃತದೇಹವನ್ನು ಹೈದರಾಬಾದ್ನ ಒಸ್ಮಾನಿಯಾ ಆಸ್ಪತ್ರೆಯೆ ಶವಗಾರಕ್ಕೆ ಸ್ಥಳಾಂತರಿಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಕ್ಕೆ ಹಸ್ತಾಂತರ ಮಾಡಲಾಗಿದೆ. (ಏಜೆನ್ಸೀಸ್)
ಮತ್ತೆ ಮೈಕ್ರೋ ಬಿಕಿನಿ ಫೋಟೋ ಹರಿಬಿಟ್ಟ ಕಿರಿಕ್ ಬ್ಯೂಟಿ: ಫೋಟೋ, ವಿಡಿಯೋ ವೈರಲ್