ಕುಷ್ಟಗಿ: ಪಟ್ಟಣದ ಆರಾಧ್ಯ ದೈವ ಅಡವಿ ಮುಖ್ಯ ಪ್ರಾಣೇಶ (ಅಡವಿರಾಯ) ಜಾತ್ರಾ ಮಹೋತ್ಸವ ನಿಮಿತ್ತ ಗುರುವಾರ ಸಂಜೆ ಅದ್ದೂರಿ ರಥೋತ್ಸವ ಜರುಗಿತು.
ರಥೋತ್ಸವಕ್ಕೆ ಎಲ್ಲ ತಯಾರಿ ನಡೆಸುತ್ತಿರುವಾಗಲೇ ಮಳೆ ಶುರುವಾಯಿತು. ಈ ಕಾರಣಕ್ಕೆ ಭಕ್ತರು ದೇವಸ್ಥಾನದತ್ತ ಸುಳಿಯಲಿಲ್ಲ. ಸೂರ್ಯಸ್ತಕ್ಕೂ ಮುನ್ನ ಮಳೆ ನಿಂತು ಭಕ್ತರು ದೇವಸ್ಥಾನದತ್ತ ಬರಲಾರಂಭಿಸಿದರು.
ಬ್ರಾಹ್ಮಣ ಸಮುದಾಯ ಸೇರಿದಂತೆ ಪಟ್ಟಣದ ವಿವಿಧ ಸಮುದಾಯಗಳ ನೂರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾದರು.