More

    16 ಎಕರೆ ಜಮೀನು ಖರೀದಿ ಸಿಪಿಎಂ ಹೋರಾಟಕ್ಕೆ ಸಂದ ಜಯ

    ಕುರುಗೋಡು: ಸಿಪಿಎಂ ಪಕ್ಷ ಹಲವಾರು ವರ್ಷಗಳಿಂದ ನಡೆಸಿದ ಹೋರಾಟದ ಫಲವಾಗಿ ನಿವೇಶನ ಒದಗಿಸಲು ಸರ್ಕಾರ 16 ಎಕರೆ ಜಮೀನು ಖರೀದಿಸಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವಿ.ಎಸ್.ಶಿವಶಂಕರ್ ಹೇಳಿದರು.

    ಪಟ್ಟಣದ ಪುರಸಭೆ ಕಚೇರಿ ಮುಂದೆ ಮಂಗಳವಾರ ಪಕ್ಷದ ತಾಲೂಕು ಘಟಕದ ಕಾರ್ಯಕರ್ತರು ನಿರ್ಗತಿಕ ಬಡ ಕುಟುಂಬಗಳಿಗೆ ನಿವೇಶನದ ಸೂರು ಒದಗಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಯ ಎರಡನೇ ದಿನವಾದ ಮಂಗಳವಾರ ಮಾತನಾಡಿದರು.

    ನಿವೇಶನ ಹಂಚಿಕೆ ಆಗೋವರೆಗೂ ಧರಣಿ ಮುಂದುವರಿಸುತ್ತೇವೆ. ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜನರ ಮನವೊಲಿಸಲು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ನಿವೇಶನ ಕೊಡುವ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಬಡ ನಿರ್ಗತಿಕರನ್ನು ಪರಿಗಣಿಸಿ, ಫಲಾನುಭವಿಗಳ ಆಯ್ಕೆಮಾಡಬೇಕು. ಉಳ್ಳವರಿಗೆ ಹಂಚಿಕೆ ಮಾಡಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

    ಪ್ರಮುಖರಾದ ಗಾಳಿ ಬಸವರಾಜ, ಮಹಮ್ಮದ್ ಖಾನ್, ಯಂಕಮ್ಮ, ಕೆಂಚಪ್ಪ, ಹುಲುಗಪ್ಪ, ಮಂಜುನಾಥ, ಸಿ.ರಾಮಣ್ಣ, ಜೈತುನ್ ಬಿ, ರಾಣೆಮ್ಮ, ಸುಜಾತಾ, ಹೊಳೆಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts