More

    ಕೆಜಿಎಫ್​ನಲ್ಲಿ ಕುಮಾರಸ್ವಾಮಿ ಕೊಟ್ಟ ಆಶ್ವಾಸನೆ ಹೀಗಿದೆ

    ಕೋಲಾರ: ರಾಜ್ಯಾದ ಅನೇಕ ಭಾಗಗಳಲ್ಲಿ ಜೆಡಿಎಸ್​ನ ಪಂಚರತ್ನ ರಥ ಯಾತ್ರೆ ಭರದಿಂದ ಸಾಗುತ್ತಿದೆ. ಅಲ್ಲಲ್ಲಿ ತಂಗಿ, ಗ್ರಾಮ ವಾಸ್ತವ್ಯ ಮಾಡುತ್ತಾ ಮತದಾರರ ಮನಸ್ಸನ್ನು ಗೆಲ್ಲಲು ಮಾಹಜಿ ಮುಖ್ಯಮಂತ್ರಿ ಶ್ರಮ ಪಡುತ್ತಿದ್ದಾರೆ. ಇದೀಗ ಕೋಲಾರ ಜಿಲ್ಲೆಯ ಕೋಲಾರ ಗೋಲ್ಡ್​ ಫೀಲ್ಡ್​ಗೆ ಪಂಚರತ್ನ ಯಾತ್ರೆ ತಲುಪಿದೆ. ಅಲ್ಲಿ ಕುಮಾರಸ್ವಅಮಿ ಜನರಿಗೆ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿ ಅನೇಕ ಆಶ್ವಾಸನೆ ನೀಡಿದ್ದಾರೆ.

    ಕೆಜಿಎಫ್​ ತಲುಪಿದ ಕುಮಾರಸ್ವಾಮಿ ‘ಹಿಂದೆ 2006 ರಲ್ಲಿ ಕೆಜಿಎಪ್ ಭಾಗಕ್ಕೆ ಮುಖ್ಯಮಂತ್ರಿಯಾಗಿದ್ದಾಗ ಬಂದಿದ್ದೆ. ಈಗ ಸಂಕಷ್ಟದಲ್ಲಿದ್ದೀರಿ, ಮುಂದಿನ ಬದುಕಿನ ಕನಸು ಕಾಣುತ್ತಿದ್ದೀರಿ. ಇಲ್ಲಿನ ಹಲವಾರು ಸಮಸ್ಯೆಗಳನ್ನ ತಿಳಿದುಕೊಂಡಿದ್ದೇನೆ. ಅದನ್ನ ಬಗೆಹರಿಸಲು ವಿಫಲವಾಗಿದ್ದೇನೆ. ಅದಕ್ಕೆ ಕಾರಣ ನನ್ನ ಕಡಿಮೆ ಅಧಿಕಾರವಧಿ, ಸ್ವತಂತ್ರ ಸರ್ಕಾರ ಇಲ್ಲದಿರುವುದು. ಆಗಿನ ರಾಜಕೀಯ ವ್ಯವಸ್ಥೆಗಳಲ್ಲಿ ಸಾಧ್ಯವಾಗಲಿಲ್ಲ. ಎರಡನೇ ಬಾರಿ ಸಿಎಂ ಆದಾಗ, ಪ್ರಮುಖ ಇಲಾಖೆಗಳಲ್ಲಿ ಕಾಂಗ್ರೆಸ್ ಸಚಿವರಿದ್ದರು. ನನಗೆ ಮುಖ್ಯಮಂತ್ರಿಯಾಗಿ ವೈಯಕ್ತಿಕ ತೀರ್ಮಾನ ತೆಗೆದುಕೊಳ್ಳಲು ಅವಕಾಶ ನೀಡಲಿಲ್ಲ’ ಎಂದು ತಮ್ಮ ಪರಿಸ್ಥಿತಿ ವಿವರಿಸಿದರು.

    ನಂತರ ಜನರಿಗೆ ವಿವಿಧ ಆಶ್ವಾಸನೆ ನೀಡಿದ ಮಾಜಿ ಸಿಎಂ ‘ಐದು ವರ್ಷದ ಸರ್ಕಾರವನ್ನ ನೀಡಿದರೆ ಕೆಜಿಎಫ್​ನ ಸಮಸ್ಯೆಗಳನ್ನ ಸಂಪೂರ್ಣವಾಗಿ ಬಗೆಹರಿಸುತ್ತೇನೆ. ನಿರೋದ್ಯೋಗ ಸಮಸ್ಯೆ ನಿವಾರಿಸಿ ಹಕ್ಕು ಪತ್ರಗಳನ್ನ ಕೊಡಿಸುತ್ತೇನೆ‌. ಈ ಪ್ರದೇಶದಲ್ಲಿ ಕೈಗಾರಿಕಾ ವಲಯವನ್ನ ದೊಡ್ಡ ಮಟ್ಟದಲ್ಲಿ ಬೆಳೆಸಲಾಗುವುದು. ನೀವು ತಮಿಳು ಭಾಷಕರಾದರೂ ಕನ್ನಡಿಗರಾಗಿದ್ದೀರಿ. ನೀವು ಕರ್ನಾಟಕದ ನನ್ನ ಅಣ್ಣ ತಮ್ಮಂದಿರರು‌. ಪಕ್ಕದ ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಜನತೆ‌ ಬೆಲೆ ನೀಡಲಿಲ್ಲ. ಇವತ್ತು ಅಲ್ಲಿ ಅಭಿವೃದ್ದಿ ಕಂಡಿದ್ರೆ ಅದು ಪ್ರಾದೇಶಿಕ ಪಕ್ಷಗಳಿಂದ ಮಾತ್ರ. ಒಂದು ಬಾರಿ ಜೆಡಿಎಸ್ ಆಯ್ಕೆ ಮಾಡಿ, ಕೆಜಿಎಫ್ ಸಮಗ್ರ ಸಮಸ್ಯೆಗಳನ್ನ ನಿವಾರಿಸುವ’ ಎಂದು ಮತಾರರನ್ನು ಸೆಳೆಯಲು ಪ್ರಯತ್ನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts