ಪ್ರತಿಪಕ್ಷ ನಾಯಕ ಹೇಳಿದಂತೆ ರಾಜಕಾರಣ ಮಾಡಕ್ಕೆ ಆಗಲ್ಲ; ಸಚಿವ ಗೋವಿಂದ ಕಾರಜೋಳ

ಬೆಂಗಳೂರು: ಗಡಿ ವಿಚಾರವಾಗಿ ಸರ್ವಪಕ್ಷಗಳ ಸಭೆ ಕರೆಯುವ ಸಂದರ್ಭ ಬಂದಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದಂತೆ ರಾಜಕಾರಣ ಮಾಡಲಾಗದು ಎಂದು ಜಲ ಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದರು. ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು‌ ‘ಆಡಳಿತ ನಡೆಸುವವರಿಗೆ ಯಾವಾಗ ಏನು ಮಾಡಬೇಕೆಂದು ಗೊತ್ತಿದೆ. ಅವರು ನಾಟಕ ಮಾಡುತ್ತಾರೆ ಎಂದರೆ ನಾವು ಪಾತ್ರಧಾರಿಗಳಾಗಬೇಕಾದ ಅಗತ್ಯವಿಲ್ಲ’ ಎಂದರು. ‘ಅಂತಹ ಸಮಸ್ಯೆ ಉದ್ಭವಿಸಿದಾಗ ಸರ್ವಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಡಿಯಿಡುತ್ತೇವೆ. ಗಡಿ ವಿಷಯದಲ್ಲಿ ಮಹಾಜನ್ ವರದಿಯೇ … Continue reading ಪ್ರತಿಪಕ್ಷ ನಾಯಕ ಹೇಳಿದಂತೆ ರಾಜಕಾರಣ ಮಾಡಕ್ಕೆ ಆಗಲ್ಲ; ಸಚಿವ ಗೋವಿಂದ ಕಾರಜೋಳ