blank

ಕುಡತಿನಿ ತಾಲೂಕು ಕೇಂದ್ರ ಮಾಡಿ: ವಿವಿಧ ಸಂಘಟನೆಗಳ ಮುಖಂಡರ ಆಗ್ರಹ

blank

ಕುರುಗೋಡು: ಕುಡತಿನಿಯನ್ನು ತಾಲೂಕು ಕೇಂದ್ರ ಮಾಡಬೇಕೆಂದು ಆಗ್ರಹಿಸಿ ಪಟ್ಟಣದ ವಿವಿಧ ಸಂಘಟನೆಗಳ ಮುಖಂಡರು ಗುರುವಾರ ಪಪಂ ಅಧ್ಯಕ್ಷ ವಿ.ರಾಜಶೇಖರ ಹಾಗೂ ಮುಖ್ಯಾಧಿಕಾರಿ ಸತ್ಯನಾರಾಯಣ ರಾವ್‌ಗೆ ಮನವಿ ಸಲ್ಲಿಸಿದರು.

ಮುಖಂಡರಾದ ಬಿ.ಸಂಪನ್ನ, ಬಾವಿ ಶಿವಕುಮಾರ ಮಾತನಾಡಿ, ಕುಡಿತಿನಿ ಪಟ್ಟಣ ವೇಗವಾಗಿ ಬೆಳೆಯುತ್ತಿದ್ದು, 28 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಅಲ್ಲದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 15ಕ್ಕೂ ಹೆಚು ಗ್ರಾಮಗಳು ಒಳಪಡುತ್ತವೆ. ಹಳ್ಳಿ ಜನರಿಗೆ ವ್ಯಾಪಾರ, ವ್ಯವಹಾರ ನಡೆಸಲು ಅನುಕೂಲವಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ 11 ಕೈಗಾರಿಕೆಗಳು, ಹುಬ್ಬಳ್ಳಿ-ಗುಂತಕಲ್ ರೈಲ್ವೆ ಜಂಕ್ಷನ್, 6 ರಾಷ್ಟ್ರೀಕೃತ ಬ್ಯಾಂಕ್‌ಗಳು, ಎರಡು ಪದವಿ ಕಾಲೇಜು, ಮೂರು ಪದವಿ ಪೂರ್ವ ಕಾಲೇಜು, ಎರಡು ಐಟಿಐ ಕಾಲೇಜು, 50 ಕ್ಕೂ ದೇವಸ್ಥಾನಗಳಿವೆ. ಪಟ್ಟಣದ ಮಧ್ಯಭಾಗದಲ್ಲಿ ಎನ್‌ಎಚ್-63 ಚತುಷ್ಪಥ ರಸ್ತೆ ಹಾದು ಹೋಗಿದೆ. ತಾಲೂಕು ಕೇಂದ್ರವಾಗಲು ಎಲ್ಲ ಅರ್ಹತೆ ಹೊಂದಿದ್ದು, ಸರ್ಕಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಮುಖಂಡರಾದ ಮಂಜುನಾಥ, ಕೆ.ಹುಚ್ಚಯ್ಯ, ಕೆ.ಭೀಮಯ್ಯ, ವಿನೋದ್, ಎಂ.ರೆಡೆಪ್ಪ, ಯಡವಲಿ ಮರಿಸ್ವಾಮಿ, ಬುಡಗ ಜಂಗಮ ಶ್ರೀನಿವಾಸ್, ಕೆ.ಸೀನ, ಎಂ.ಶೇಖರ್ ಇತರರಿದ್ದರು.

Share This Article

ವೇಜ್​, ನಾನ್​ವೆಜ್ ಖಾದ್ಯ​ ‘ಟೊಮ್ಯಾಟೋ’ ಇಲ್ಲದೆ ಆಗೋದೆ ಇಲ್ವಾ? ಹೆಚ್ಚು Tomato ತಿನ್ನುವ ನಿಮಗಾಗಿ ಈ ಸುದ್ದಿ!

Tomato :  ನಾವು ನಮ್ಮ ದೈನಂದಿನ ಅಡುಗೆಗಳಲ್ಲಿ ಟೊಮ್ಯಾಟೋವನ್ನು ಬಳಸುತ್ತೇವೆ. ಟೊಮ್ಯಾಟೋಗಳನ್ನು  ಕರಿ, ಗ್ರೇವಿ, ಸೂಪ್…

ಈ ಕೆಲಸಗಳನ್ನು ಎಂದಿಗೂ ಒಬ್ಬಂಟಿಯಾಗಿ ಮಾಡಬೇಡಿ..! ಅಪಾಯ ಎದುರಾಗುತ್ತದೆ ಹುಷಾರ್​… vidura niti

vidura niti: ಮಹಾಭಾರತದಲ್ಲಿ ಬರುವ ಅತ್ಯಂತ ಬುದ್ಧಿವಂತ ಮತ್ತು ನೀತಿವಂತ ವ್ಯಕ್ತಿ ವಿದುರ. ಅವರು ಬೋಧಿಸಿದ…

ಬೇಸಿಗೆಯಲ್ಲಿ ಮೀನು, ಕೋಳಿ ಮಾಂಸ ತಿನ್ನುವುದನ್ನು ಬಿಡುವುದು ಒಳ್ಳೆಯದು! Nonveg Food

Nonveg Food :   ಬೇಸಿಗೆ ಮಾತ್ರ ಆರೋಗ್ಯ ಮತ್ತು ಆಹಾರದ ವಿಷಯದಲ್ಲಿ ಬಹಳ ಜಾಗರೂಕರಾಗಿರಬೇಕಾದ ಸಮಯ.…