ಬಳ್ಳಾರಿ: ಸಾರಿಗೆ ಸಚಿವ ಶ್ರೀರಾಮುಲು ತವರಲ್ಲೇ ಬಸ್ ಡ್ರೈವರ್ ಮತ್ತು ಕಂಡಕ್ಟರ್ ಮೇಲೆ ಅಧಿಕಾರಿಯ ದಬ್ಬಾಳಿಕೆ ನಡೆದಿದೆ. “ಸೂ… ಮಗನೇ.. ಎಲ್ಲಿ ಹೋಗಿದ್ಯಲೇ..? ಕೆರ (ಚಪ್ಪಲಿ) ತಗೊಂಡ್ ಹೊಡಿತೀನಿ.. ಆ ಲಾಠಿ ತಗೊಂಡ್ ಬನ್ರೋ ಇಲ್ಲಿ…” ಎನ್ನುತ್ತಾ ಸಂಡೂರಿನ ಸಾರಿಗೆ ಡಿಪೋ ಮ್ಯಾನೇಜರ್ ವೆಂಕಟೇಶ್ ಎಂಬಾತ ಡ್ರೈವರ್ಗೆ ಬೈದಿರುವ ವಡಿಯೋ ವೈರಲ್ ಆಗಿದೆ.
ಕಳೆದ ವಾರ ಸಂಡೂರಿನ ಡಿಪೋದಲ್ಲಿ ಈ ಘಟನೆ ನಡೆದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ. ಕಲೆಕ್ಷನ್ ಟಾರ್ಗೆಟ್ ಎನ್ನುವುದು ಸಾರಿಗೆ ನಿಗಮಗಳಲ್ಲಿ ಸಾಮಾನ್ಯ ಪ್ರಕ್ರಿಯೆ. ಆದ್ರೆ ಬಸ್ ಕೊಂಡೊಯ್ಯುವ ಡ್ರೈವರ್ಸ್-ಕಂಡಕ್ಟರ್ಗಳಿಗೆ ರೂಟ್ಗಳ ಆಧಾರದ ಮೇಲೆ ಇಂತಿಷ್ಟು ಟಾರ್ಗೆಟ್ ಎಂದು ಫಿಕ್ಸ್ ಮಾಡಲಾಗಿರುತ್ತೆ. ಟಾರ್ಗೆಟ್ ರೀಚ್ ಮಾಡದ ಸಿಬ್ಬಂದಿಯನ್ನು ಡಿಪೋ ಮ್ಯಾನೇಜರ್ ತರಾಟೆ ತೆಗೆದುಕೊಳ್ಳುವುದು ಕೂಡ ಸಾಮಾನ್ಯ. ಆದ್ರೆ ಇಲ್ಲಿ ಡ್ರೈವರ್-ಕಂಡಕ್ಟರ್ ಅವರೊಂದಿಗೆ ಅಮಾನವೀಯವಾಗಿ ವರ್ತಿಸಿದ್ದಷ್ಟೇ ಅಲ್ಲ, ಅವಾಚ್ಯ ಶಬ್ದದಿಂದ ಡಿಪೋ ಮ್ಯಾನೇಜರ್ ನಿಂದಿಸಿದ್ದಾರೆ. ಅಷ್ಟು ಸಾಲದ್ದಕ್ಕೆ ಬೆತ್ತ ತೋರಿಸಿ ಡ್ರೈವರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
ಇಂದಿನಿಂದ ಗುರುವಾರ ಮಧ್ಯಾಹ್ನದ ವರೆಗೆ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ಬಂದ್
40 ಮಂದಿಯನ್ನ ಕಚ್ಚಿದ ಹುಚ್ಚುನಾಯಿ! ರಾತ್ರಿಯಿಂದ ಬೆಳಗ್ಗೆವರೆಗೂ ಸಿಕ್ಕಸಿಕ್ಕವರ ಮೇಲೆ ದಾಳಿ