More

    ಮತ್ತೆ ಮಾರಣಾಂತಿಕವಾದ ಕೆಎಸ್​ಆರ್​ಟಿಸಿ: ಭೀಕರ ಅಪಘಾತ, ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವು…

    ಚಾಮರಾಜನಗರ: ಮೊನ್ನೆಮೊನ್ನೆಯಷ್ಟೇ ಅಪ್ಪ-ಮಗ ಹಾಗೂ ಅಂಗವಿಕಲೆಯೊಬ್ಬಳನ್ನು ಬಲಿ ತೆಗೆದುಕೊಂಡಿದ್ದ ಕೆಎಸ್​ಆರ್​ಟಿಸಿ, ಇಂದು ಒಂದೇ ಕುಟುಂಬದ ಮೂವರನ್ನು ಬಲಿ ಪಡೆದಿದೆ.

    ತಾಲೂಕಿನ ಮರಿಯಾಲ ಬಳಿಯ ಚಾಮರಾಜನಗರ- ಮೈಸೂರು ಹೆದ್ದಾರಿಯಲ್ಲಿ‌ ಕೆಎಸ್​ಆರ್​​ಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕಟುಂಬದ ಮೂವರು ಸಾವಿಗೀಡಾಗಿದ್ದಾರೆ. ಮೃತಪಟ್ಟವರು ಗಂಡ-ಹೆಂಡತಿ ಮತ್ತು ಮಗ.

    ಇದನ್ನೂ ಓದಿ: ಭೀಕರ ಅಪಘಾತ, ಕೆಎಸ್​ಆರ್​ಟಿಸಿಗೆ ಒಟ್ಟು ಮೂವರು ಬಲಿ: 7 ವರ್ಷದ ಬಾಲಕ, ಆತನ ಅಪ್ಪ, 17 ವರ್ಷದ ಅಂಗವಿಕಲೆ ಸ್ಥಳದಲ್ಲೇ ಸಾವು

    ಮೈಸೂರಿನಿಂದ ಚಾಮರಾಜನಗರ ಕಡೆಗೆ ಬರುತ್ತಿದ್ದ ಬಸ್ ಮರಿಯಾದ ಬಳಿ ಇರುವ ರೈಲ್ವೆ ಸೇತುವೆ ಮೇಲೆ ಬರುತ್ತಿರುವಾಗ ಚಾಮರಾಜನಗರ ಕಡೆಯಿಂದ ಮರಿಯಾಲ ಕಡೆಗೆ ತೆರಳುತ್ತಿದ್ದ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್​ನಲ್ಲಿದ್ದ ಮೂವರು ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವಿಗೀಡಾದರು.

    ಇದನ್ನೂ ಓದಿ: ಕಾರು-ಟ್ರ್ಯಾಕ್ಟರ್ ಭೀಕರ ಅಪಘಾತ: ತಾಯಿ, ಮಗ, 6 ವರ್ಷದ ಮೊಮ್ಮಗು ಸ್ಥಳದಲ್ಲೇ ಸಾವು, ಇನ್ನೊಬ್ಬಾಕೆಯ ಸ್ಥಿತಿ ಚಿಂತಾಜನಕ…

    ಮೃತರು ಚಾಮರಾಜನಗರ ಪಟ್ಟಣದ ಚನ್ನೀಪುರಮೋಳೆ ಬಡಾವಣೆಯ ಅಶೋಕ್, ಮತ್ತಿಬ್ಬರ ಗುರುತು ಪತ್ತೆಯಾಗಿಲ್ಲ‌‌. ಪೊಲೀಸರು ಗುರುತು ಪತ್ತೆಯಲ್ಲಿ ತೊಡಗಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    ಐಪಿಎಸ್​ ಆಫೀಸರ್​ ಆಗಿದ್ದ ಇವರೀಗ ಸೆಕ್ಯುರಿಟಿ ಆಫೀಸರ್!: ನಿರಪರಾಧಿ ಆರ್​ಎಸ್​ಎಸ್ ಕಾರ್ಯಕರ್ತರ ಪರ ನಿಂತಿದ್ದೇ ಮುಳುವಾಯ್ತು..

    ಮುದ್ದಾದ ಗಂಡು ಮಗುವಿಗೆ ಜನ್ಮವಿತ್ತ ಮೂರೇ ದಿನಕ್ಕೆ ಅಮ್ಮ ಇನ್ನಿಲ್ಲ; ಸಿಜೇರಿಯನ್ ಮಾಡಿದ ವೈದ್ಯರ ನಿರ್ಲಕ್ಷ್ಯ ಎಂದು ಪಾಲಕರ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts