More

    ಮನುಷ್ಯನ ಅಂತರಾಳವನ್ನು ಹಿಡಿಯುವ ಪ್ರಯತ್ನವೇ ‘ಕ್ಷೇಮಗಿರಿಯಲ್ಲಿ ಕರ್ ನಾಟಕ’

    ಬೆಂಗಳೂರು: ಕನ್ನಡದಲ್ಲಿ ಮೆಡಿಕಲ್​ ಮಾಫಿಯಾ ಕುರಿತಾದ ಹಲವು ಚಿತ್ರಗಳು ಇದುವರೆಗೂ ಬಂದಿವೆ. ಆ ಸಾಲಿಗೆ ಈ ಶುಕ್ರವಾರ (ಡಿ.9) ಇನ್ನೊಂದು ಚಿತ್ರ ಹೊಸದಾಗಿ ಸೇರ್ಪಡೆಯಾಗಲಿಎ. ಅದೇ ‘ಕ್ಷೇಮಗಿರಿಯಲ್ಲಿ ಕರ್ ನಾಟಕ’.

    ಇದನ್ನೂ ಓದಿ: ‘ತಿಮ್ಮನ ಮೊಟ್ಟೆಗಳು’ ಚಿತ್ರೀಕರಣ ಪೂರ್ಣ; ಇದು ಮಲೆನಾಡಿನ ಇನ್ನೊಂದು ಕಥೆ …

    ಮನುಷ್ಯನ ಅಂತರಾಳವನ್ನು ಹಿಡಿಯುವ ಪ್ರಯತ್ನವೇ 'ಕ್ಷೇಮಗಿರಿಯಲ್ಲಿ ಕರ್ ನಾಟಕ'ಈ ಚಿತ್ರವನ್ನು ಪೀಟರ್​ ರಾಜಣ್ಣ ನಿರ್ದೇಶನ ಮಾಡಿದ್ದು, ಅವರ ತಾಯಿ ಮೈಕಲ್​ ರಾಣಿ ನಿರ್ಮಿಸಿದ್ದಾರೆ. ಚಿತ್ರ ಮಾಡಬೇಕು ಎಂಬ ಮಗನ ಕನಸನ್ನು ತಾಯಿ ನನಸು ಮಾಡಿರುವುದು ವಿಶೇಷ.

    ಈ ಚಿತ್ರದ ಕುರಿತು ಮಾತನಾಡುವ ಪೀಟರ್ ರಾಜಣ್ಣ, ‘ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಸೈಕಾಲಜಿಯಲ್ಲಿ ಮಾಸ್ಟರ್ಸ್ ಮಾಡಿ, ಪ್ರೇಗ್​ನಲ್ಲಿ ನಿರ್ದೇಶನದ ಕುರಿತು ತರಬೇತಿ ಪಡೆದಿದ್ದೇನೆ. ಆ ಅನುಭವದಿಂದ ಈ ಚಿತ್ರ ಮಾಡಿದ್ದು. ಜಗದೀಶ್​ ನಾಯಕನಾಗಿ, ಶ್ರದ್ಧಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಮನುಷ್ಯನ ಅಂತರಾಳವನ್ನು ತೆರೆದಿಡುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದೇವೆ. ಯಕ್ಷಗಾನವನ್ನು ‌ಪೂರ್ಣಪ್ರಮಾಣದಲ್ಲಿ ಬಳಸಿಕೊಂಡಿದ್ದೇವೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಶಾಲೆಯ ಪ್ರತಿಭೆಗಳು ಈ ಚಿತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಟಿಸಿದ್ದಾರೆ’ ಎಂದು ಮಾಹಿತಿ ಕೊಡುತ್ತಾರೆ.

    ಇಲ್ಲಿ ‘ಕ್ಷೇಮಗಿರಿ’ ಎಂದರೆ ಊರಿನ ಹೆಸರಂತೆ. ಜತೆಗೆ ಮೆಡಿಕಲ್​ ಮಾಫಿಯಾ ಬಗ್ಗೆಯೂ ಒಂದಿಷ್ಟು ವಿಷಯಗಳಿವೆಯಂತೆ. ಚಿತ್ರದಲ್ಲಿ ಹತ್ತು ಹಾಡುಗಳಿದೆ. ರವಿಶಂಕರ್ ಗುಂಡ್ಮಿ ಸಂಗೀತ ನೀಡಿದ್ದಾರೆ. ವಿ.ಮನೋಹರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.

    ಇದನ್ನೂ ಓದಿ: ಖತರ್​ನಾಕ್​ ‘ರಾಕ್ಷಸರ’ನ್ನು ಬೇಟೆ ಆಡಲು ಹೊರಟ ಸಾಯಿಕುಮಾರ್​ …

    ‘ಕ್ಷೇಮಗಿರಿಯಲ್ಲಿ ಕರ್ ನಾಟಕ’ ಚಿತ್ರದಲ್ಲಿ ವಿನುತಾ, ನೀನಾಸಂ ಚೇತನ್ ಮುಂತಾದವರು ನಟಿಸಿದ್ದಾರೆ. ಈ ಚಿತ್ರವು 30ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್​ಗಳಲ್ಲಿ ಬಿಡುಗಡೆಯಾಗುತ್ತಿದೆ.

    ಹಾಡಿನೊಂದಿಗೆ ಮುಕ್ತಾಯವಾಯಿತು ಪೃಥ್ವಿ ಅಂಬರ್​, ಮಿಲನಾ ಅಭಿನಯದ ಹೊಸ ಚಿತ್ರ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts