ಮುಂಬೈ: ಬಾಲಿವುಡ್ನ ಸ್ವಯಂಘೋಷಿತ ನಂಬರ್ ಒನ್ ವಿಮರ್ಶಕ ಕಮಾಲ್ ಆರ್ ಖಾನ್ ಅಲಿಯಾಸ್ ಕೆಆರ್ಕೆ ಧಮಕಿ ಹಾಕಿದ್ದಾರೆ. ಚಿತ್ರರಂಗದ ಮಂದಿ ತಮಗೆ ಕಿರುಕುಳ ಕೊಟ್ಟರೆ, ಎಂ.ಎಫ್. ಹುಸೇನ್ ಅವರ ತರಹ ಈ ದೇಶವನ್ನೇ ಬಿಟ್ಟು ಹೋಗುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಮತ್ತೆ ಅಮಿತಾಭ್ ಬಚ್ಚನ್ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ರಾಮ್ಗೋಪಾಲ್ ವರ್ಮಾ!
ಕೆಆರ್ಕೆ ಕಳೆದ ಒಂದು ತಿಂಗಳನಿಂದ ನಿರಂತರ ಸುದ್ದಿಯಲ್ಲಿದ್ದಾರೆ. ಮೇ 13ಕ್ಕೆ ಸಲ್ಮಾನ್ ಅಭಿನಯದ ‘ರಾಧೇ’ ಚಿತ್ರವು ಬಿಡಗುಡೆಯಾಗಿತ್ತು. ಈ ಚಿತ್ರದ ವಿಮರ್ಶೆ ಮಾಡಿದ್ದ ಕೆಆರ್ಕೆ, ಚಿತ್ರಕ್ಕೆ ಸಿಕ್ಕಾಪಟ್ಟೆ ಬೈದಿದ್ದರು. ಇದಕ್ಕೆ ಪ್ರತಿಯಾಗಿ ಸಲ್ಮಾನ್ ಖಾನ್, ಕೆಆರ್ಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇನ್ನು ಮುಂದೆ, ಸಲ್ಮಾನ್ ಅಭಿನಯದ ಚಿತ್ರಗಳನ್ನು ವಿಮರ್ಶೆ ಮಾಡುವುದಿಲ್ಲ ಎಂದು ಪ್ರತಿಜ್ಱ ಮಾಡಿದ್ದ ಅವರು, ಆ ನಂತರ ಉಲ್ಟಾ ಹೊಡೆದಿದ್ದರು. ಇದೀಗ ಬಾಲಿವುಡ್ ಮಂದಿ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೆಆರ್ಕೆ, ‘ಒಂದು ಹಂತದಲ್ಲಿ ಇನ್ನು ಮುಂದೆ ಚಿತ್ರವಿಮರ್ಶೆ ಮಾಡಬಾರದು ಎಂದು ತೀರ್ಮಾನಿಸಿದ್ದೆ. ಆದರೆ, ಇದೀಗ ಮನಸ್ಸು ಬದಲಾಯಿಸಿದ್ದೇನೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಚಿತ್ರವಿಮರ್ಶೆ ಮಾಡುವುದನ್ನು ನಿಲ್ಲಿಸುವುದಿಲ್ಲ. ಆದರೆ, ಬಾಲಿವುಡ್ ಮಂದಿ ಕಿರುಕುಳ ನೀಡುತ್ತಿದ್ದು, ಇದು ಮುಂದುವರೆದರೆ, ನಾನು ಸಹ ಎಂ.ಎಫ್. ಹುಸೇನ್ ಸಹ ದೇಶ ಬಿಟ್ಟು ಹೋಗಬೇಕಾಗಬಹುದು. ದೇಶ ಬಿಟ್ಟು ಹೋದರೆ, ನಾನು ಯಾವುದೇ ಕೇಸ್ಗಳನ್ನು ಎದುರಿಸಬೇಕಾಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ಹಿರಿಯ ನಟ ದಿಲೀಪ್ಕುಮಾರ್
ಈ ವಿಷಯವಾಗಿ ಇನ್ನೂ ಮುಂದುವರೆಸಿರುವ ಅವರು, ‘ಬಾಲಿವುಡ್ ಮಂದಿ ಒಂದು ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು. ಒಮ್ಮೆ ದೇಶ ಬಿಟ್ಟು ಹೋದರೆ, ನನ್ನನ್ನು ಯಾರೂ ತಡೆಯುವುದಕ್ಕಾಗುವುದಿಲ್ಲ. ಯಾವುದೇ ಕಾನೂನು ಸಹ ನಾನು ಸಿನಿಮಾ ವಿಮರ್ಶೆ ಮಾಡುವುದನ್ನು ತಡೆಯುವುದಕ್ಕೆ ಆಗುವುದಿಲ್ಲ. ಹಾಗಾಗಿ, ದಯವಿಟ್ಟು ನಾನು ದೇಶ ಬಿಟ್ಟು ಹೋಗುವಂತೆ ಮಾಡಬೇಡಿ. ಒಂದು ಪಕ್ಷ ಒತ್ತಡ ಹಾಕಿದರೆ, ನಾನು ಸುಮ್ಮನಿರುವುದಿಲ್ಲ. ನನ್ನ ಹತ್ತಿರ ಸಾಕಷ್ಟು ರಹಸ್ಯಗಳಿವೆ. ಅವೆಲ್ಲವನ್ನು ತೆರೆದಿಟ್ಟು ಹಲವರ ಚಡ್ಡಿ ಬಿಚ್ಚಿಸುತ್ತೇನೆ’ ಎಂದು ಧಮ್ಕಿ ಹಾಕಿದ್ದಾರೆ.