ಹೈದರಾಬಾದ್: ಉಪ್ಪೇನಾ ಸಿನಿಮಾ ಖ್ಯಾತಿಯ ಕೃತಿ ಶೆಟ್ಟಿ ಸದಾ ವಿವಾದಗಳಿಂದ ದೂರುವಿರುತ್ತಾರೆ. ಸಂದರ್ಶನಗಳಲ್ಲಿ ಕೆಲವೊಮ್ಮೆ ವಿವಾದಾತ್ಮಕ ಪ್ರಶ್ನೆಗಳನ್ನು ಕೇಳಿದಾಗಲೂ ಅದಕ್ಕೆ ಡಿಪ್ಲೊಮ್ಯಾಟಿಕ್ ಉತ್ತರ ನೀಡುವ ಮೂಲಕ ವಿವಾದಗಳಿಂದ ನುಣುಚಿಕೊಳ್ಳುತ್ತಾರೆ. ಆದರೆ, ಇದೀಗ ವೈರಲ್ ಸುದ್ದಿ ಒಂದರಿಂದಾಗಿ ಕೃತಿ ಮುಜುಗರ ಅನುಭವಿಸಿರುವಂತೆ ಕಾಣುತ್ತಿದೆ. ಸ್ಟಾರ್ ನಟನ ಪುತ್ರ ಕೃತಿಗೆ ಕಿರುಕುಳ ನೀಡಿದ್ದಾರೆ ಎಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಕೆಲ ದಿನಗಳಿಂದ ಹರಿದಾಡುತ್ತಿದ್ದು, ಇದೀಗ ಸ್ವತಃ ಕೃತಿ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿವಾದಾತ್ಮಕ ಪೋಸ್ಟ್ ಅನ್ನು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡು ಕೃತಿ ಸ್ಪಷ್ಟನೆ ನೀಡಿದ್ದಾರೆ. ಆ ಸ್ಪಷ್ಟನೆ ಏನು ಎಂಬುದಕ್ಕೂ ಮುನ್ನ ವೈರಲ್ ಪೋಸ್ಟ್ನಲ್ಲಿ ಏನಿತ್ತು ಎಂಬುದನ್ನು ಮೊದಲು ತಿಳಿಯೋಣ.
ಇದನ್ನೂ ಓದಿ: ಸಾರ್ವಜನಿಕರ ವಾಹನ ತಡಿಬೇಡಿ; ಜೀರೋ ಟ್ರಾಫಿಕ್ ಬೇಡ ಪೊಲೀಸ್ ಅಧಿಕಾರಿಗಳಿಗೆ ಮಂತ್ರಿಗಳ ಸೂಚನೆ
ಕೃತಿ ಅವರು ಇತ್ತೀಚೆಗೆ ಕಾಲಿವುಡ್ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ವಿಷಯ ಬಹಲ ಸಂಚಲನ ಸೃಷ್ಟಿಸಿದೆ. ಕೃತಿ ಅವರು ಸ್ಟಾರ್ ಹೀರೋ ಪುತ್ರನ ಮಗನಿಂದ ಕಿರುಕುಳ ಅನುಭವಿಸಿದ್ದಾರಂತೆ. ಕೃತಿ ಭಾಗವಹಿಸುತ್ತಿದ್ದ ಪ್ರತಿ ಈವೆಂಟ್ನಲ್ಲೂ ಕಿರುಕುಳ ನೀಡುತ್ತಿದ್ದ. ಆತ ಎಲ್ಲಿಗೇ ಹೋದರು ಕರೆ ಮಾಡಿ ತನ್ನಲ್ಲಿಗೆ ಬರುವಂತೆ ಕೃತಿಯನ್ನು ಪೀಡಿಸುತ್ತಿದ್ದನಂತೆ. ಕೃತಿಯ ಸ್ನೇಹ ಬೆಳೆಸಲು ಹವಣಿಸುತ್ತಿದ್ದ ಆದರೆ, ಕೃತಿ ಮಾತ್ರ ಆತನನ್ನು ಸಂಪೂರ್ಣ ನಿರ್ಲಕ್ಷಿಸಿದರು ಎಂದು ವೈರಲ್ ಆಗಿರುವ ಪೋಸ್ಟ್ನಲ್ಲಿ ಬರೆಯಲಾಗಿದೆ.
ಇದೀಗ ಈ ಪೋಸ್ಟ್ಗೆ ಕೃತಿ ಸ್ಪಷ್ಟನೆ ನೀಡಿದ್ದು, ಸುಳ್ಳು ಸುದ್ದಿಗಳನ್ನು ಸೃಷ್ಟಿ ಮಾಡುವುದನ್ನು ಮತ್ತು ತಪ್ಪು ಮಾಹಿತಿಯನ್ನು ಹರಡುವುದನ್ನು ನಿಲ್ಲಿಸಿ. ಇದು ಜಾಲತಾಣದಲ್ಲಿ ಕಾಣಿಸಿಕೊಂಡಾಗಿನಿಂದ ಇದೊಂದು ಆಧಾರವಿಲ್ಲದ ವದಂತಿ, ನಿರ್ಲಕ್ಷಿಸುವುದು ಸರಿ ಎಂದು ಚಿಂತಿಸಿದ್ದೆ ಆದರೆ, ಇದು ಹೆಚ್ಚು ಸುದ್ದಿಯಾಗಿ ಎಲ್ಲೆ ಮೀರಿ ಹೋಗಿದ್ದರಿಂದ ನಾನು ಪ್ರತಿಕ್ರಿಯೆ ನೀಡಬೇಕಾಯಿತು ಎಂದು ಹೇಳಿದ್ದಾರೆ.
— KrithiShetty (@IamKrithiShetty) July 6, 2023
ಅಲ್ಲಿಗೆ ಯಾವುದೇ ಸ್ಟಾರ್ ಹೀರೋ ಪುತ್ರ ತನಗೆ ಕಿರುಕುಳ ನೀಡಿಲ್ಲ ಎಂಬುದನ್ನು ಕೃತಿ ಸ್ಪಷ್ಟಪಡಿಸಿದ್ದಾರೆ. ಸಿನಿಮಾ ವಿಚಾರಕ್ಕೆ ಬಂದರೆ, ಕೃತಿ ಬಂಗಾರಾಜು ಸಿನಿಮಾದಿಂದ ಬ್ಯಾಕ್ ಟು ಬ್ಯಾಕ್ 4 ಸೋಲನ್ನು ಅನುಭವಿಸಿದ್ದಾರೆ. ಸದ್ಯ ಅಜಾಯನ್ತೇ ರಂದಂ ಮೋಷನಮ್ ಎಂಬ ಮಲಾಯಳಂ ಸಿನಿಮಾ ಮತ್ತು ತಮಿಳಿನ ಜಿನೀ ಸಿನಿಮಾದಲ್ಲಿ ನಟಿಸಲಿದ್ದಾರೆ. (ಏಜೆನ್ಸೀಸ್)
ಎಷ್ಟು ಕೋಟಿ ಬೇಕಾದ್ರು ಕೊಡ್ತೀನಿ ಬಾ…ಕೃತಿ ಶೆಟ್ಟಿಗೆ ಆಹ್ವಾನ ಕೊಟ್ಟ ಸ್ಟಾರ್ ನಟನ ಮಗ