More

    ಅಮ್ಮನ ಆರೋಗ್ಯ ಚೆನ್ನಾಗಿದೆ … ಜಯಂತಿ ಪುತ್ರ ಕೃಷ್ಣ ಕುಮಾರ್ ಸ್ಪಷ್ಟನೆ

    ಲಾಕ್‌ಡೌನ್‌ನಿಂದಾಗಿ ಹಿರಿಯ ನಟಿ ‘ಅಭಿನಯ ಶಾರದೆ’ ಜಯಂತಿ ಅವರು ಹಂಪಿಯ ಕಮಲಾಪುರಂನಲ್ಲಿದ್ದಾರೆ. ಈ ಮಧ್ಯೆ, ಅವರಿಗೆ ಅಸ್ತಮಾ ಜಾಸ್ತಿಯಾಗಿದೆ, ಅವರು ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾರೆ ಎಂಬಂತಹ ಸುದ್ದಿಗಳು ಹರಿದಾಡುತ್ತಿವೆ. ಆದರೆ, ಅಮ್ಮನ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ, ಅವರು ಚೆನ್ನಾಗಿದ್ದಾರೆ ಎಂದು ಅವರ ಮಗ ಕೃಷ್ಣ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘ನಾವು ಕಮಲಾಪುರಕ್ಕೆ ಬಂದು 50 ದಿನಗಳ ಮೇಲಾಗಿವೆ. ಲಾಕ್‌ಡೌನ್ ಆಗಿರುವುದರಿಂದ ಬೆಂಗಳೂರಿಗೆ ವಾಪಸ್ಸು ಬರುವುದಕ್ಕೆ ಸಾಧ್ಯವಾಗಿಲ್ಲ. ಇಷ್ಟೊಂದು ದಿನಗಳಾದ್ದರಿಂದ ಸಹಜವಾಗಿಯೇ, ಮಂಗಳವಾರ ವೈದ್ಯರನ್ನು ಕರೆಸಿ ಪರೀಕ್ಷೆ ಮಾಡಿಸಲಾಯಿತು. ಅವರು ಇಲ್ಲಿದ್ದರೆ ಅನುಕೂಲವೋ, ವಾಪಸ್ಸು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕೋ ಎಂಬುದರ ಬಗ್ಗೆ ಬೆಂಗಳೂರು ಮತ್ತು ಬಳ್ಳಾರಿಯ ತಜ್ಞ ವೈದ್ಯರನ್ನು ಕೇಳಿದ್ದೇವೆ. ಅವರು ಇಂದು ಅಥವಾ ನಾಳೆ ವರದಿ ಕೊಡಲಿದ್ದಾರೆ. ಒಂದು ಪಕ್ಷ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಬೇಕು ಎಂದರೆ, ಆಗ ಅನುಮತಿ ಕೇಳುವ ಪ್ರಯತ್ನ ಮಾಡುತ್ತೇವೆ. ಸದ್ಯಕ್ಕಂತೂ ಅಮ್ಮನ ಆರೋಗ್ಯದಲ್ಲಿ ಸಮಸ್ಯೆ ಇಲ್ಲ, ಅವರು ಚೆನ್ನಾಗಿದ್ದಾರೆ’ ಎಂದು ಕೃಷ್ಣ ಕುಮಾರ್ ಸ್ಪಷ್ಟಪಡಿಸಿದ್ದಾರೆ.

    ಲಾಕ್‌ಡೌನ್: ಹಿರಿಯ ನಟಿ ಜಯಂತಿ ಎಲ್ಲಿದ್ದಾರೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts