ಬೆಂಗಳೂರು: ನೀಲಗಿರಿ ತೋಪಿನಲ್ಲಿ ಪತ್ತೆಯಾಗಿದ್ದ ಅಪಚಿತ ಶವ ಮತ್ತು ಹಣದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಇದು ರಾಬರಿಗಾಗಿ ನಡೆದ ಕೊಲೆಯಲ್ಲ, 50 ಲಕ್ಷ ರೂಪಾಯಿ ಆಸ್ಪತ್ರೆ ಖರ್ಚಿನ ಕಹಾನಿ ಎಂಬುದು ಬಯಲಾಗಿದೆ.
ಬುಧವಾರ ಬೆಳಗ್ಗೆ 7.30ರಲ್ಲಿ ಕೆ.ನಾರಾಯಣಪುರ ಮುಖ್ಯರಸ್ತೆಯ ನೀಲಗಿರಿ ತೋಪಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿದ್ದ ಅಪರಿಚಿತ ಶವ ಪತ್ತೆಯಾಗಿತ್ತು. ಕಾರಿಗೆ ಹೊದಿಸುವ ಕವರ್ ಹಾಗೂ ಹಾಸಿಗೆಯಲ್ಲಿ ಕಟ್ಟಿದ್ದರು. ಸಂಚು ರೂಪಿಸಿ ಹತ್ಯೆ ಮಾಡಿರುವುದು ಕಂಡುಬಂದಿತ್ತು. ಶವದ ಬಳಿ 4-5 ಸಾವಿರ ಹಣ ಬಿಸಾಡಿ, ಇದು ರಾಬರಿಗಾಗಿ ನಡೆದ ಕೊಲೆ ಎನ್ನುವಂತೆ ಬಿಂಬಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಕೊತ್ತನೂರು ಪೊಲೀಸರು ತನಿಖೆ ಕೈಗೊಂಡಿದ್ದರು. ಕೊಲೆಯಾದ ಯುವಕ ಭಾರತಿನಗರದ ಹರೀಶ್(25) ಎಂದು ಗೊತ್ತಾಗಿದ್ದು, ಕುಟುಂಬಸ್ಥರು ಸಹ ಗುರುತಿಸಿದ್ದರು.
ಎಲೆಕ್ಟ್ರಿಷನ್ ಕೆಲಸ ಮಾಡಿಕೊಂಡಿದ್ದ ಹರೀಶ್ ಮತ್ತು ಜೀವ ಎಂಬಾತನ ನಡುವೆ ನಾಲ್ಕೈದು ತಿಂಗಳ ಹಿಂದೆ ಗಲಾಟೆಯಾಗಿತ್ತು. ಜೀವ ಮೇಲೆ ಹರೀಶ್ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದ. ಗಂಭೀರ ಗಾಯಗೊಂಡಿದ್ದ ಜೀವ ಆಸ್ಪತ್ರೆಗೆ ದಾಖಲಾಗಿದ್ದ. ಚಿಕಿತ್ಸೆಗಾಗಿ ಸುಮಾರು 50 ಲಕ್ಷ ರೂ. ಖರ್ಚಾಗಿತ್ತು ಎನ್ನಲಾಗಿದೆ. ಈ ಪ್ರಕರಣದಲ್ಲಿ ಭಾರತಿನಗರ ಪೊಲೀಸರು ಹರೀಶ್ನನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದರು. ಜೀವ ಮೇಲೆ ಹಲ್ಲೆ ನಡೆಸಿದ ಸೇಡು ಮತ್ತು ಆಸ್ಪತ್ರೆಗೆ 50 ಲಕ್ಷ ರೂ. ಖರ್ಚಾಯ್ತು ಅನ್ನೋ ದ್ವೇಷ ಹರೀಶ್ ಮೇಲೆ ಜೀವ ಸಹೋದರರಿಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ಹರೀಶ್ನನ್ನು ಕೊಲ್ಲಲು ಸಂಚು ರೂಪಿಸಿದ್ದರು.
ಮಂಗಳವಾರ ರಾತ್ರಿ ಹರೀಶ್ನನ್ನು ಕಾರಿನಲ್ಲಿ ಕರೆದೊಯ್ದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿ ನೀಲಗಿರಿ ತೋಪಿನಲ್ಲಿ ಎಸೆದು ಪರಾರಿಯಾಗಿದ್ದರು. ಸಿಸಿ ಕ್ಯಾಮರಾ ದೃಶ್ಯ ಪರಿಶೀಲನೆ ಹಾಗೂ ಹರೀಶ್ಗೆ ಬಂದಿದ್ದ ಫೋನ್ ಕರೆಗಳ ವಿವರ ಪರಿಶೀಲಿಸಿದಾಗ ಆರೋಪಿಗಳ ಸುಳಿವು ಸಿಕ್ಕಿತ್ತು. ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೃತ್ಯದ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಹರೀಶ್ ಕೊಲೆ ಆರೋಪಿಗಳಾದ ಫ್ರೇಜರ್ಟೌನ್ ನಿವಾಸಿ ದೀಪು ಅಲಿಯಾಸ್ ದೀಪಕ್ (28), ಸುರೇಂದ್ರ (25), ರವಿ (27) ಮತ್ತು ಕಾತಿರ್ಕ್ (28) ಬಂಧಿತರು. ಆರೋಪಿಗಳನ್ನು ಕೋರ್ಟ್ಗೆ ಹಾಜರುಪಡಿಸಿ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ರಾತ್ರೋರಾತ್ರಿ ಮನೆಗೆ ಬಂದ ಪರ ಪುರುಷನೊಂದಿಗೆ ಸೊಸೆ ಲವ್ವಿ-ಡವ್ವಿ! ಎಚ್ಚರಗೊಂಡ ಅತ್ತೆಗೆ ಕಾದಿತ್ತು ಗಂಡಾಂತರ
ನಿನ್ನ ಹೆಂಡ್ತಿ-ಮಕ್ಕಳನ್ನು ನನಗೇ ಬಿಟ್ಟುಕೊಡು ಎಂದು ಮನೆಗೆ ಬಂದ ಭೂಪ! ಆ ರಾತ್ರಿ ನಡೆದೇ ಹೋಯ್ತು ಘೋರ ಕೃತ್ಯ
ಹೆಂಡತಿ ಪ್ರೀತಿಯಿಂದ ಮಾಡಿಕೊಟ್ಟ ಟೀ ಕುಡಿದ ಪತಿ ಸಾವು, ಸ್ವಲ್ಪ ಹೊತ್ತಲ್ಲೇ ಆಸ್ಪತ್ರೆ ಸೇರಿದ ಪತ್ನಿ