More

    ಶಾಲಾಭಿವೃದ್ಧಿಗೆ ಜನರ ಸಹಕಾರ ಬೇಕು

    ಕೊಂಡ್ಲಹಳ್ಳಿ: ಶಾಲಾಭಿವೃಧ್ಧಿಗೆ ಸಮುದಾಯದ ಪಾತ್ರ ಪ್ರಮುಖ ಎಂದು ಸಂಪನ್ಮೂಲವ್ಯಕ್ತಿ ಬಿ.ಆರ್.ತಿಪ್ಪೇಸ್ವಾಮಿ ತಿಳಿಸಿದರು.

    ಸಮೀಪದ ಮುತ್ತಿಗಾರಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಸದಸ್ಯರಿಗೆ ಇತ್ತೀಚೆಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರದ ವೇಳೆ ಮಾತನಾಡಿ, ಶಾಲೆಯ ಸರ್ವಾಂಗೀಣ ಪ್ರಗತಿಗೆ ಎಸ್‌ಡಿಎಂಸಿ ಸದಸ್ಯರ ಸಹಕಾರ ಅತ್ಯಗತ್ಯ ಎಂದರು.

    ಶಿಬಿರಾರ್ಥಿಗಳಿಗೆ ನಡೆದ ಆಟೋಟಗಳಲ್ಲಿ ವಿಜೇತರಾದವರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು. ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ಬಿ.ಜಿ.ಕೆರೆ ಆರೋಗ್ಯ ಕೇಂದ್ರದ ಡಾ.ಮಹಾಂತೇಶ್ ಆರೋಗ್ಯ ತಪಾಸಣೆ ಮಾಡಿದರು.

    ಮುಖ್ಯ ಶಿಕ್ಷಕ ಎಚ್.ಜಿ.ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಬಿ. ಮಹಾಂತೇಶ್, ಉಪಾಧ್ಯಕ್ಷ ರಾಜೇಶ್, ಬಿಆರ್‌ಸಿ ಉಮೇಶಯ್ಯ, ಸಂಪನ್ಮೂಲ ವ್ಯಕ್ತಿಳಾದ ಬಿ.ಎಸ್.ನಾಗರಾಜ್,ಸಹ ಶಿಕ್ಷಕರಾದ ವನಿತಾ ಅಬ್ಬಿಗೇರಿ, ತಿಮ್ಮಕ್ಕ, ಬಿ.ಎಸ್.ನಾಗರಾಜ್, ಕೆ.ಎಸ್.ರಾಜಮ್ಮ ಇತರರಿದ್ದರು.ಮುತ್ತಿಗಾರಹಳ್ಳಿ, ಮ್ಯಾಸರಹಟ್ಟಿ,ಓಬಯ್ಯನಹಟ್ಟಿ, ಕಾಮಯ್ಯನಹಟ್ಟಿ ಶಾಲೆಗಳ ಎಸ್‌ಡಿಎಂಸಿ ಸದಸ್ಯರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts