ಕೋಲಾರ: ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿರುವ ಶ್ರೀ ಪಾದರಾಜ ಮಠದ ಹಿರಿಯ ಶ್ರೀಗಳಾದ ಶ್ರೀಶ್ರೀ ಕೇಶವನಿಧಿ ತೀರ್ಥರು ಇಂದು ಬೆಳಗ್ಗೆ (ಜ.28) ನಿಧನರಾದರು.
ಕಳೆದ ಕೆಲವು ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು. ಈ ಹಿನ್ನಲೆಯಲ್ಲಿ ಕಳೆದ ಆರು ತಿಂಗಳ ಹಿಂದಷ್ಟೇ ಕಿರಿಯ ಶ್ರೀಗಳಾದ ಸುಜಯ ನಿಧಿ ತೀರ್ಥಸ್ವಾಮಿಗಳಿಗೆ ಅಧಿಕಾರ ವಹಿಸಿಕೊಡಲಾಗಿತ್ತು.
ಬೆಂಗಳೂರಿನ ಚಾಮರಾಜಪೇಟೆಯ ಮಠದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆ ನಂತರ ಮುಳಬಾಗಿಲು ನರಸಿಂಹ ತೀರ್ಥದ ಶ್ರೀಪಾದರಾಜ ಮಠದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 2 ಗಂಟೆಯ ನಂತರ ಬೃಂದಾವನ ಕಾರ್ಯ ನೆರವೇರಲಿದೆ.
ಶ್ರೀಗಳು ಕಳೆದ ಹದಿನೈದು ವರ್ಷಗಳಿಂದ ಮಠದ ಹಿರಿಯ ಶ್ರೀಗಳಾಗಿ ಕಾರ್ಯ ನಿರ್ವಹಿಸಿದ್ದಾರೆ. ಶ್ರೀಶ್ರೀ ವಿಜ್ಞಾನ ನಿಧಿ ತೀರ್ಥರ ಶಿಷ್ಯರಾಗಿ ಅವರ ನಂತರ ಮಠದ ಅಧಿಕಾರ ವಹಸಿಕೊಂಡು ಸೇವೆ ಸಲ್ಲಿಸಿದರು. ಇಂದು ಕಿರಿಯ ಶ್ರೀಗಳ ಸುಜಯನಿಧಿ ತೀರ್ಥರಿಂದ ಅಂತಿಮ ವಿಧಿ ವಿಧಾನ ನಡೆಯಲಿದೆ. (ದಿಗ್ವಿಜಯ ನ್ಯೂಸ್)
ಪ್ರೇಯಸಿಗೆ ಜಾಮೀನು ಕೊಡಿಸಲು ಹೋಗಿ ಮರಣದಂಡನೆಗೆ ಗುರಿ: ವಿಷದ ಇಂಜೆಕ್ಸನ್ ನೀಡಿ ಪ್ರಿಯಕರನ ಹತ್ಯೆ
ನೀನೆ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ… ಉಗ್ರರ ದಾಳಿಗೆ ಪಾಕ್ನ 10 ಸೈನಿಕರ ಸಾವು