More

    ದರ್ಶನ್ ಇರ್ತಾರೆ ಅಂತ ನಂಗೆ ಮೊದಲೇ ಗೊತ್ತಿತ್ತು: ಎಲ್ಲವೂ ಸರಿ ಹೋಗುತ್ತದೆ ಎಂದ ಕಿಚ್ಚ

    ಬೆಂಗಳೂರು: ಬದುಕಿನ ಪಯಣದಲ್ಲಿ ಇಂದು (ಸೆ.02) 50ನೇ ವಸಂತಕ್ಕೆ ಕಾಲಿಟ್ಟಿರುವ ನಟ ಸುದೀಪ್, ಅಭಿಮಾನಿಗಳ ಪ್ರೀತಿ, ಸಿನಿಮಾ ಮೇಲಿನ ಹುಚ್ಚು ಹಾಗೂ ನಟ ದರ್ಶನ ಸ್ನೇಹದ ಬಗ್ಗೆ ಮಾತನಾಡುವ ಮೂಲಕ ಹಲವರ ಗಮನ ಸೆಳೆದಿದ್ದಾರೆ.

    ಬರ್ತಡೆ ಆಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುದೀಪ್​, ಅಭಿಮಾನಿಗಳ ಪ್ರೀತಿಗೆ ಏನು ಹೇಳಲಿ. ಎಲ್ಲವೂ ಸರ್ಪ್ರೈಸ್ ಆಗಿ ಬರುತ್ತಿದೆ. ಮುಂದೇನು ಅಂತ ಯೋಚಿಸಿದ್ದಕ್ಕೆ ಇವತ್ತು ಉತ್ತರ ಸಿಕ್ತಿದೆ. ಅಭಿಮಾನಿಗಳ ರಚಿಸಿದ 1 ಫೋಟೋ ಹಿಂದೆ ಸಾವಿರ ಕತೆ ಇರುತ್ತದೆ ಎಂದು ಹೇಳಿದರು.

    ನಾನು ರಾತ್ರಿಯಿಂದ ಎದ್ದೇ ಇದೀನಿ. ನನ್ನ ಹಂಡತಿ ಪ್ರಿಯಾ ನನ್ನ ಸಂಪೂರ್ಣ ಪ್ರಯಾಣವನ್ನು ನೋಡಿದ್ದಾರೆ. ನಿನ್ನೆ ಬರ್ತಡೆ ಆಚರಣೆ ವೇಳೆ ನಡೆದ ಲೈಟ್ ಶೋಗೂ ಒಂದು ತೂಕ ಸಿಕ್ತು ಮತ್ತು ಅರ್ಥ ಸಿಕ್ತು ಹಾಗೂ ನನಗೆ ಖುಷಿಯಾಯ್ತು. ಮನೆಯಲ್ಲಿರುವವರು ನಮ್ಮನ್ನು ಗೌರವಿಸ್ತಾರೆ. ನನ್ನ ಕ್ಷಣವನ್ನು ಎಲ್ಲರು ಸೆಲೆಬ್ರೆಟ್ ಮಾಡಿದ್ದಾರೆ ಎಂದರು. ಇಂದು ನಾನು ನಿಮ್ಮಿಂದಲೇ ತಾಳ್ಮೆ ಕಲಿತಿದ್ದೀನಿ. ನಾನು ಹೇಗೆ ಬೇಕಾದ್ರು ಇರ್ತೀನಿ ಅನ್ನೋಕೆ ಆಗಲ್ಲ. ಕಲಾವಿದರಾಗಿ ನಾವು ಸೇವಕರಾಬೇಕು. ಸಾವಿರ ನೋವಿರಲಿ ಎಲ್ಲರನ್ನು ಭೇಟಿಯಾಗಬೇಕು ಎಂದರು.

    ಸ್ಪಷ್ಟತೆ ಇದೆ

    ನಿರ್ದೇಶನದ ಬಗ್ಗೆ ನನಗೆ ಸ್ಪಷ್ಟತೆ ಇದೆ. ಅಲ್ಲದೆ, ತುಂಬಾ ತಯಾರಿ ಸಹ ನಡೆದಿದೆ. ತುಂಬಾ ದಿನಗಳಿಂದ ಸಿನಿಮಾ ನಿರ್ದೇಶನ ಮಾಡುವ ಐಡಿಯಾ ಇತ್ತು. ನಾವು ಸಿನಿಮಾ ಜಗತ್ತಿನಲ್ಲಿ ಬದಲಾಗಬೇಕು ಎಂದು ನಿರ್ದೇಶನದ ಕುರಿತು ಹೇಳಿದರು.

    ಕೇವಲ ಕಲ್ಪನೆ

    ಇದೇ ಸಂದರ್ಭದಲ್ಲಿ ದರ್ಶನ್ ಬಗ್ಗೆ ಮಾತನಾಡಿದ ಸುದೀಪ್, ಸುಮಲತಾ ಅವರ ಪಾರ್ಟಿಗೆ ಹೋಗಿದ್ದೆ. ದರ್ಶನ್ ಇರ್ತಾರೆ ಅಂತ ನಂಗೆ ಮೊದಲೇ ಗೊತ್ತಿತ್ತು. ಕಿತ್ತಾಡಿಕೊಂಡರು ಮತ್ತು ಜಗಳ ಮಾಡಿಕೊಂಡರು ಅನ್ನೋದು ಕೇವಲ ಕಲ್ಪನೆ. ಆದರೆ ಕಲ್ಪನೆ ಇರಬಾರದು. ನನ್ನ ಕಣ್ಣಲ್ಲಿ ಕಣ್ಣಿಟ್ಟು ಹೇಳಿದ್ರೆ ನಾನು ಒಪ್ಪುತ್ತೇನೆ. ಪ್ರಶ್ನೆಗಳು ಬರ್ತಾವೆ, ಒಳ್ಳೇದು ಮತ್ತು ಕೆಟ್ಟದ್ದು ಇರ್ತಾವೆ. ನಮ್ಮಿಬ್ಬರಿಗೂ ತಿಳುವಳಿಕೆ ಇದೆ. ಎಲ್ಲವೂ ಸರಿ ಹೋಗ್ಬೇಕು ಅಂದಾಗ ಸರಿ ಹೋಗುತ್ತದೆ ಎಂದು ಹೇಳಿದರು.

    ಮಾಟ ಮಾಡಿದ್ದಾಳೆಂಬ ಅನುಮಾನದ ಮೇಲೆ 65 ವರ್ಷದ ವೃದ್ಧೆಯ ದಾರುಣ ಹತ್ಯೆ..

    ಪ್ರಮಾಣಪತ್ರಗಳ ಮೇಲೆ ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಸಂಖ್ಯೆ ಮುದ್ರಿಸಬೇಡಿ: ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದ ಯುಜಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts