ರಾಂಚಿ: ಮಾಟ ಮಾಡಿದ್ದಾಳೆ ಎಂಬ ಅನುಮಾನದ ಮೇಲೆ 65 ವರ್ಷದ ವೃದ್ಧೆಯನ್ನು ಹತ್ಯೆಗೈದಿರುವ ಹೃದಯ ವಿದ್ರಾವಕ ಘಟನೆ ಝಾರ್ಖಂಡ್ನ ರಾಜಧಾನಿ ರಾಂಚಿ ಬಳಿಯ ಸರ್ಜಾಮಕೈರ್ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ಕೇವಲ 6000ರೂ.ಗೆ ಮಗುವಿನ ಮಾರಾಟಕ್ಕೆ ಯತ್ನಿಸಿದ ಹೆತ್ತ ತಾಯಿ..
ಮೃತ ಮಹಿಳೆಯನ್ನು ಮುಘಲಿ ದೇವಿ ಎಂದು ಗುರುತಿಸಲಾಗಿದ್ದು, ಮಂಗಲ್ ಮುಂಡಾ ಎಂಬಾತನೇ ಕೃತ್ಯ ಎಸಗಿರುವ ಆರೋಪಿಯಾಗಿದ್ದಾನೆ. ವಾಮಾಚಾರದ ಆರೋಪದ ಮೇಲೆ ವೃದ್ಧೆಯು ತನ್ನ ಮನೆಯಲ್ಲಿ ಮಲಗಿದ್ದ ವೇಳೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದ್ದು, ಘಟನೆ ವೇಳೆ ಆರೋಪಿ ಮಂಗಲ್ ಮುಂಡಾ ಮದ್ಯದ ಅಮಲಿನಲ್ಲಿದ್ದ ಎಂದು ಹೇಳಲಾಗುತ್ತಿದೆ.
ಘಟನೆಯ ಬಗ್ಗೆ ಮಾಹಿತಿ ಲಭಿಸಿದ ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ, ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದೇ ವೇಳೆ ಆರೋಪಿಯನ್ನು ಬಂಧಿಸಲಾಗಿದ್ದು, ಈತ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಗಣೇಶ ಚತುರ್ಥಿ ಹಬ್ಬಕ್ಕೆ ಕೌಂಟ್ಡೌನ್: ಮಾರ್ಗಸೂಚಿ ಬಿಡುಗಡೆ ಮಾಡಿದ ಬಿಬಿಎಂಪಿ
ಮುಘಲಿ ದೇವಿ ಆಗಾಗ್ಗೆ ತನ್ನ ಮನೆಯ ಮಕ್ಕಳನ್ನು ವಾಮಾಚಾರ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಳು. ಈ ನಡುವೆ ತನ್ನ ಮೊಮ್ಮಗನ ಆರೋಗ್ಯವು ನಿರಂತರವಾಗಿ ಕ್ಷೀಣಿಸುತ್ತಿತ್ತು. ವೃದ್ಧೆಯು ಮಾಟಗಾತಿಯಾಗಿದ್ದು, ಆಕೆ ವಾಮಾಚಾರ ಮಾಡಿದ್ದಾಳೆ ಎಂದು ಶಂಕಿಸಿ ಹತ್ಯೆಗೈದಿರುವುದಾಗ ಆರೋಪಿಯು ಪೊಲೀಸರಿಗೆ ತಿಳಿಸಿದ್ದಾನೆ.(ಏಜೆನ್ಸೀಸ್)