ಬೆಂಗಳೂರು: ಪೊಲೀಸ್ ಆಯುಕ್ತರಿಗೆ ದೂರು ನೀಡಲು ನೂರಾರು ಜನರೊಂದಿಗೆ ದೂರು ನೀಡಲು ಬಂದಿದ್ದರು.
ಈ ಸಂದರ್ಭ ಎಲ್ಲರನ್ನೂ ಒಳಗೆ ಬೀಡುವುದಿಲ್ಲ ಅಂತ ಗೇಟ್ ಬಳಿಯೇ ಪೊಲೀಸರು ತಡೆದರು. ದೂರು ಕೊಡಲು ಇಬ್ಬರನ್ನು ಮಾತ್ರವೇ ಒಳಗೆ ಹೋಗಿ ಎಂದು ಪೊಲೀಸರು ಸೂಚಿಸಿದರು. ಕೆಜಿಎಫ್ ಬಾಬು , ಆರ್.ವಿ.ದೇವರಾಜ್, ಪುತ್ರ ಯುವರಾಜ್ ಹಾಗೂ ಆಲಂ ಪಾಷಾ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದ.
‘ಆರ್.ವಿ.ದೇವರಾಜ್ ಪ್ರಭಾವದಿಂದ ಆಲಂ ಪಾಷಾ ದೂರು ನೀಡಿದ್ದಾರೆ. ಹೀಗಾಗಲೇ ಆಲಂ ಪಾಷಾ ವಿರುದ್ದವೂ ನಾನು ದೂರು ನೀಡಿದ್ದೇನೆ. ಆರ್.ವಿ ದೇವರಾಜ್ ವಿರುದ್ಧವೂ ಪ್ರಕರಣ ದಾಖಲಾಗಬೇಕು’ ಎಂದು ಕೆಜಿಎಫ್ ಬಾಬು ಹೇಳಿದ್ದಾರೆ. ದೂರು ನೀಡಲು ಕೆಜಿಎಫ್ ಬಾಬು ನೂರಾರು ಜನರ ಜೊತೆ ಬಂದಿದ್ದರೂ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಪೊಲೀಸರು ತಿಳಿ ಹೇಳಿದರು.
ಕೆಜಿಎಫ್ ಬಾಬು, ಆಲಂ ಪಾಷ ಮೇಲೆ ಬೆದರಿಕೆ ಒಪ್ಪಿರುವ ಆರೋಪ ಮಾಡಿದ್ದು ಈ ಬಗ್ಗೆ ತನಿಖೆ ಮಾಡುವಂತೆ ಒತ್ತಾಯಿಸಿದ್ದಾರೆ. ಜೊತೆಗೆ ಆಲಂಪಾಷ ಬಗ್ಗೆಯೂ ತನಿಖೆ ಮಾಡಿ ಅಂತ ದೂರು ನೀಡಲು ಕೆಜಿಎಫ್ ಬಾಬು ಬಂದಿದ್ದರು.