More

    ಸಂಯುಕ್ತಾ ಕ್ಷಮೆ ಕೋರಿದ ಕವಿತಾ ರೆಡ್ಡಿ

    ಬೆಂಗಳೂರು: ಕಳೆದೆರೆಡು ದಿನಗಳಿಂದ ಸಾಕಷ್ಟು ಸುದ್ದಿಯಾಗಿದ್ದ ಸಂಯುಕ್ತಾ ಹೆಗ್ಡೆ ಮತ್ತು ಕವಿತಾ ರೆಡ್ಡಿ ಪ್ರಕರಣ, ಇದೀಗ ಸುಖಾಂತ್ಯಗೊಂಡಿದೆ. ತಾವು ಮಾಡಿದ್ದು ತಪ್ಪು ಎಂದು ಕವಿತ ರೆಡ್ಡಿ ಅವರು ಹೇಳಿಕೊಂಡಿದ್ದು, ಅವರನ್ನು ಕ್ಷಮಿಸಿರುವ ಸಂಯುಕ್ತಾ ಹೆಗ್ಡೆ, ಹಳೆಯದನ್ನು ಮರೆತು ಮುಂದಕ್ಕೆ ಹೋಗೋಣ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ರಾಗಿಣಿ ಮನೆಯಲ್ಲಿತ್ತು ಗಾಂಜಾ ತುಂಬಿದ್ದ ಸಿಗರೇಟ್ !

    ಶುಕ್ರವಾರ ಸಂಜೆ ನಗರದ ಅಗರ ಕೆರೆ ಬಳಿ ಇರುವ ಪಾರ್ಕ್​ನಲ್ಲಿ ಸಂಯುಕ್ತಾ ಹೆಗ್ಡೆ ಮತ್ತವರ ಸ್ನೇಹಿತರು ಕ್ರೀಡಾ ಉಡುಗೆ ತೊಟ್ಟು ಹುಲಾ ಹೂಪ್ ಡಾನ್ಸ್ ಮಾಡಿದ್ದಾರೆ. ಹಾಗೆ ಬಟ್ಟೆ ತೊಟ್ಟು ನೃತ್ಯ ಮಾಡಿದ್ದಕ್ಕೆ ಸ್ಥಳೀಯರು ಗರಂ ಆಗಿದ್ದಾರೆ. ಇನ್ನು ಕವಿತಾ ರೆಡ್ಡಿ ಎನ್ನುವವರು ಸಂಯುಕ್ತಾ ಮತ್ತವರ ತಂಡವನ್ನು ತರಾಟೆಗೆ ತೆಗೆದುಕೊಳ್ಳುವುದರ ಜತೆಗೆ, ನೈತಿಕ ಪೊಲೀಸ್​ಗಿರಿ ಪ್ರದರ್ಶಿಸಿದ್ದರು.

    ಈ ವಿಷಯವಾಗಿ ತಮ್ಮದೇನೂ ತಪ್ಪಿಲ್ಲ, ಕ್ರೀಡೆಯ ಉಡುಗೆ ತೊಟ್ಟು ಹುಲಾ ಪ್ರಾಕ್ಟಿಸ್ ಮಾಡಿದ್ದೇ ತಪ್ಪಾ ಎಂದು ಕಣ್ಣೀರಿಟ್ಟಿದ್ದರು. ಈ ವಿಷಯವಾಗಿ ಸಾಕಷ್ಟು ಸೆಲೆಬ್ರಿಟಿಗಳು ಸಂಯುಕ್ತಾ ಹೆಗ್ಡೆಗೆ ತಮ್ಮ ಬೆಂಬಲವನ್ನು ಘೋಷಿಸಿದ್ದರು. ಜಗ್ಗೇಶ್​, ರಮ್ಯಾ, ಮೇಘನಾ ಗಾಂವ್ಕರ್​, ಸಿಂಪಲ್​ ಸುನಿ ಅಲ್ಲದೆ, ಬಾಲಿವುಡ್​ ನಟಿ ರಿಚಾ ಚಡ್ಢಾ ಸೇರಿದಂತೆ ಹಲವರು ಸಂಯುಕ್ತಾಗೆ ತಮ್ಮ ಬೆಂಬಲ ಸೂಚಿಸಿದ್ದರು.

    ಈಗ ಕವಿತಾ ರೆಡ್ಡಿ ಅವರು ಸೋಷಿಯಲ್​ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ತಾವು ಹಾಗೆ ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ. ‘ನೈತಿಕ ಪೊಲೀಸ್​ಗಿರಿಯನ್ನು ಯಾವಾಲೂ ಖಂಡಿಸಿದ್ದೇನೆ. ಅಚಾತುರ್ಯದಿಂದ ಈಗ ನಾನೇ ಹಾಗೆ ಮಾಡಿದ್ದೇನೆ. ವಾದ-ಪ್ರತಿವಾದದಿಂದ ಈ ಪ್ರಕರಣ ಎಲ್ಲಿಗೋ ಹೋಯಿತು. ನನ್ನಿಂದ ತಪ್ಪಾಗಿದೆ. ಒಬ್ಬ ಜವಾಬ್ದಾರಿಯುತ ಮತ್ತು ಪ್ರಗತಿಪರ ಮಹಿಳೆಯಾಗಿ ಈ ತಪ್ಪನ್ನು ಒಪ್ಪಿಕೊಂಡಿದ್ದೇನೆ’ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ವಿಚಾರಣೆಗೆ ಸಹಕರಿಸದ ರಾಗಿಣಿ

    ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಸಂಯುಕ್ತಾ ಹೆಗ್ಡೆ, ‘ಹಳೆಯದನ್ನೆಲ್ಲಾ ಮರೆತು ಮುಂದಕ್ಕೆ ಹೋಗೋಣ’ ಎಂದು ಕ್ಷಮಿಸಿದ್ದಾರೆ.

    ಸುದೀಪ್​ ಬಿಡುಗಡೆ ಮಾಡಿರುವ ಈ ಹೊಸ ವಿಡಿಯೋ ನೋಡಿದ್ರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts