ಹುಬ್ಬಳ್ಳಿ: ಸರ್ವಾಂಗೀಣ ನಿರ್ವಹಣೆ ತೋರಿದ ಆತಿಥೇಯ ಕರ್ನಾಟಕ ತಂಡ 19 ವಯೋಮಿತಿಯ ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪ್ರವಾಸಿ ತಂಡ ಮಧ್ಯಪ್ರದೇಶ ವಿರುದ್ಧ 9 ವಿಕೆಟ್ಗಳಿಂದ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ.
ರಾಜನಗರ ಕೆಎಸ್ಸಿಎ ಮೈದಾನದಲ್ಲಿ ನಡೆದ ಪಂದ್ಯದ 4ನೇ ದಿನವಾದ ಸೋಮವಾರ 7 ವಿಕೆಟ್ಗೆ 113 ರನ್ಗಳಿಂದ ದ್ವಿತೀಯ ಇನಿಂಗ್ಸ್ ಮುಂದುವರಿಸಿದ ಮಧ್ಯಪ್ರದೇಶ 187ರನ್ಗಳಿಗೆ ಆಲೌಟ್ ಆಯಿತು. ಹಾರ್ದಿಕ್ ರಾಜ್ (45ಕ್ಕೆ 5)ಪ್ರವಾಸಿ ತಂಡಕ್ಕೆ ಕಡಿವಾಣ ಹಾಕಿದರು. ಗೆಲುವಿಗೆ ದ್ವಿತೀಯ ಇನ್ನಿಂಗ್ಸ್ನಲ್ಲಿ 41ರನ್ ಗುರಿ ಪಡೆದ ಕರ್ನಾಟಕ, 7.1 ಓವರ್ಗಳಲ್ಲಿ 1 ವಿಕೆಟ್ಗೆ ಕಳೆದುಕೊಂಡು ಯಶಸ್ವಿ ಚೇಸಿಂಗ್ ನಡೆಸಿತು. ಜ.5 ರಂದು ಆರಂಭವಾಗಲಿರುವ ಮೊದಲ ಸೆಮಿಫೈನಲ್ನಲ್ಲಿ ಕರ್ನಾಟಕ, ತಮಿಳುನಾಡು ತಂಡದ ಸವಾಲು ಎದುರಿಸಲಿದೆ.
ಮಧ್ಯಪ್ರದೇಶ: 269 ಮತ್ತು 187(ಧನಂಜಯ್ ದೀಕ್ಷಿತ್ 54, ವಿಷ್ಣು ಭಾರಧ್ವಾಜ್ 25, ಸಮಿತ್ ದ್ರಾವಿಡ್ 24ಕ್ಕೆ 3, ಹಾರ್ದಿಕ್ ರಾಜ್ 45ಕ್ಕೆ 5, ಸಮರ್ಥ ಎನ್. 18ಕ್ಕೆ 1, ಧೀರಜ್ ಗೌಡ 79ಕ್ಕೆ1). ಕರ್ನಾಟಕ: 416 ಮತ್ತು 1 ವಿಕೆಟ್ಗೆ 41 (ಪ್ರಕರ ಚತುರ್ವೇದಿ 29*, ಹರಿ ರಾಜೀವ್ 6*, ವಿಷ್ಣು ಬರದ್ವಾಜ್ 14ಕ್ಕೆ 7).