ಬೆಂಗಳೂರು: ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಕರೆ ನೀಡಿರುವ ರಾಜ್ಯಾದ್ಯಂತ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮೆರವಣಿಗೆ ಆರಂಭವಾಗಿದೆ.
ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂಪಾರ್ಕ್ವರೆಗೂ ಪ್ರತಿಭಟನಾ ಮೆರವಣಿಗೆ ತಲುಪಲಿದೆ. ಮೆರವಣಿಗೆ ಹಿನ್ನೆಲೆಯಲ್ಲಿ ಡಿಸಿಪಿ ರಮೇಶ್ ಬಾನೋತ್ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಎಸಿಪಿ 1, ಇನ್ಸೆಪೆಕ್ಟರ್-5 , ಎಸ್ಐ 10, 300 ಮಂದಿ ಪೋಲಿಸರು. 8 ಕೆಎಸ್ಆರ್ಪಿ ತುಕಡಿಗಳು ಬಂದೋಬಸ್ತ್ನಲ್ಲಿ ನಿಯೋಜನೆಗೊಂಡಿವೆ,
ಬಂದ್ಗೆ ಬೆಂಬಲಿಸದಿರಿ ಅಂತ ಕೆಲ ಕನ್ನಡ ಸಂಘಟನೆ ಕಾರ್ಯಕರ್ತರಿಂದ ವಿಶೇಷ ಜಾಥಾ ನಡೆಸಿದ್ದಾರೆ. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಗುಲಾಬಿ ಹೂ ನೀಡುವ ಮುಖಾಂತರ ಬಂದ್ಗೆ ಬೆಂಬಲಿಸದಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ.ಕರುನಾಡ ಸಂಘಟನೆಗಳ ಒಕ್ಕೂಟ ಸಂಘಟನೆ ಬಂದ್ ವಿರೋಧ ವ್ಯಕ್ತಪಡಿಸಿದೆ.