More

    ಯಶಸ್ಸು ಎಂಜಾಯ್​ ಮಾಡಿ, ರಾಜಕೀಯದಿಂದ ದೂರವಿರಿ: ಬಾಲಿವುಡ್​ ಮಂದಿಗೆ ಕಂಗನಾ ಎಚ್ಚರಿಕೆ

    ಮುಂಬೈ: ಕಳೆದೊಂದು ವರ್ಷದಿಂದ ಮಾತು ಕಡಿಮೆ ಮಾಡಿ, ‘ಎಮಜೆನ್ರ್ಸಿ’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರು ಬಾಲಿವುಡ್​ ನಟಿ ಕಂಗನಾ ರಣಾವತ್​. ಈಗ ಚಿತ್ರದ ಚಿತ್ರೀಕರಣವೂ ಮುಗಿದಿದೆ. ಇನ್ನೊಂದು ಕಡೆ ಅವರು ಟ್ವಿಟರ್​ಗೆ ವಾಪಸ್ಸಾಗಿದ್ದಾರೆ. ಬಿಡುವಿನಲ್ಲಿ ಸರಣಿ ಟ್ವೀಟ್​ಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಶಾರುಖ್​ ಖಾನ್​ ಅಭಿನಯದ ‘ಪಠಾಣ್​’ ಚಿತ್ರಕ್ಕೆ ಸಿಗುತ್ತಿರುವ ಯಶಸ್ಸು ಮತ್ತು ಉತ್ತೇಜನದ ಬಗ್ಗೆ ಸ್ವಲ್ಪ ಜಾಸ್ತಿಯೇ ಸಿಟ್ಟಾಗಿದ್ದಾರೆ.

    ಇದನ್ನೂ ಓದಿ: ಟಾಲಿವುಡ್​ಗೆ ನವಾಜುದ್ದೀನ್​; ವಿಕ್ಟರಿ ವೆಂಕಟೇಶ್​ ಅಭಿನಯದ 75ನೇ ಚಿತ್ರದಲ್ಲಿ ಅಭಿನಯ …

    ‘ಪಠಾಣ್​’ ಚಿತ್ರವು ‘ಬೇಷರಮ್​ ರಂಗ್​’ ಹಾಡಿನಿಂದಾಗಿ ಬಿಡುಗಡೆಗೂ ಮುನ್ನ ಸಾಕಷ್ಟು ವಿವಾದಕ್ಕೊಳಗಾಗಿತ್ತು. ಹಲವರು ಆ ಚಿತ್ರವನ್ನು ಬಾಯ್ಕಾಟ್​ ಮಾಡಬೇಕು ಎಂದು ಕರೆ ನೀಡಿದ್ದರು. ಆದರೆ, ಅದೆಲ್ಲವುಗಳ ನಡುವೆಯೂ ಚಿತ್ರ ಗೆದ್ದು, ಎರಡೇ ದಿನದಲ್ಲಿ 120 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಚಿತ್ರಕ್ಕೆ ಸಿಗುತ್ತಿರುವ ಯಶಸ್ಸು ನೋಡಿ, ಬಾಲಿವುಡ್​ ಮಂದಿಯೂ ಖುಷಿಯಾಗಿದ್ದಾರೆ. ದ್ವೇಷವನ್ನು ಪ್ರೀತಿ ಸೋಲಿಸುತ್ತದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಜ್ಯೂನಿಯರ್​ ಕರಾಟೆ ಚಾಂಪಿಯನ್​ ಆದ ‘ಗೋಲ್ಡನ್​ ಸ್ಟಾರ್​’ ಮಗ

    ಇದರಿಂದ ಕೆಂಡಮಂಡಲರಾಗಿರುವ ಕಂಗನಾ ಬಾಲಿವುಡ್​ ಮಂದಿಯ ವಿರುದ್ಧ ಹರಿಹಾಯ್ದಿದ್ದಾರೆ, ‘ಇನ್ನೊಂದು ಬಾರಿ ನಾನು ದ್ವೇಷ, ಪ್ರೀತಿ ಇಂಥ ಪದಗಳನ್ನೆಲ್ಲ ಕೇಳಿದರೆ, ಸುಮ್ಮನೆ ಇರುವುದಿಲ್ಲ. ಸರಿಯಾಗಿ ಕ್ಲಾಸ್​ ತೆಗೆದುಕೊಳ್ಳಬೇಕಾಗುತ್ತದೆ. ನಿಮಗೆ ಯಶಸ್ಸು ಸಿಕ್ಕಿರುವಾಗ ಅದನ್ನು ಸಂಭ್ರಮಿಸಿ. ಒಳ್ಳೆಯ ಕೆಲಸ ಮಾಡಿ. ರಾಜಕೀಯದಿಂದ ದೂರ ಇರಿ’ ಎಂದು ಎಚ್ಚರಿಕೆ ನೀಡಿದ್ದಾರೆ.

    30 ಅಂಡರ್​ 30 ಏಷ್ಯನ್​ ಸೆಲೆಬ್ರಿಟಿ ಪಟ್ಟಿಯಲ್ಲಿ ರಶ್ಮಿಕಾ ಮಂದಣ್ಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts