More

    ಸುಶಾಂತ್​ ಜೀವನ ಹಾಳು ಮಾಡಿದ ಕರಣ್​ ಜೋಹರ್​ಗೇಕೆ ಪದ್ಮಶ್ರೀ; ಮರಳಿ ಪಡೆಯುವಂತೆ ಸರ್ಕಾರಕ್ಕೆ ಕಂಗನಾ ಮನವಿ

    ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ನಟಿ ಕಂಗನಾ ರಣಾವತ್​ ಇದೀಗ ಮತ್ತೊಂದು ಹೇಳಿಕೆ ನೀಡಿ ಸದ್ದು ಮಾಡುತ್ತಿದ್ದಾರೆ. ಕರಣ್​ ಜೋಹರ್​ ವಿರುದ್ಧ ತಿರುಗುಬಿದ್ದಿದ್ದ ನಟಿ, ಇದೀಗ ಮತ್ತೆ ಕರಣ್​ ಅವರ ವಿಚಾರವನ್ನೇ ಕೈಗೆತ್ತಿಕೊಂಡಿದ್ದಾರೆ.

    ಕರಣ್​ ಜೋಹರ್​ಗೆ ನೀಡಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಮರಳಿ ಪಡೆಯುವಂತೆ ಟ್ವಿಟರ್​ನಲ್ಲಿ ಪೋಸ್ಟ್ ಮಾಡಿಕೊಂಡು ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ ಕರಣ್​ ವಿರುದ್ಧ ಒಂದಷ್ಟು ಆರೋಪಗಳನ್ನೂ ಮಾಡಿದ್ದಾರೆ. ಸುಶಾಂತ್​ ಸಿನಿ ಜೀವನವನ್ನು ಹಾಳು ಮಾಡಲು ಯತ್ನಿಸಿದ್ದಾರೆ. ಉರಿ ದಾಳಿ ವೇಳೆ ಪಾಕಿಸ್ತಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಇದೀಗ ಸೈನ್ಯದ ವಿರುದ್ಧವೇ ಸಿನಿಮಾ ಮಾಡಿದ್ದಾರೆ’ ಎಂದು ದೂರಿದ್ದಾರೆ.

    ಇದನ್ನೂ ಓದಿ: ಮತ್ತೆ ಶುರುವಾಯ್ತು ‘ಭಜರಂಗಿ 2’ ಚಿತ್ರದ ಚಿತ್ರೀಕರಣ …


    ಇತ್ತೀಚೆಗಷ್ಟೇ ನೆಟ್​ಫ್ಲಿಕ್ಸ್​​ನಲ್ಲಿ ಗುಂಜನ್​ ಸಕ್ಸೆನಾ; ದಿ ಕಾರ್ಗಿಲ್​ ಗರ್ಲ್​ ಸಿನಿಮಾ ತೆರೆಕಂಡಿತ್ತು. ಸಿನಿಮಾ ಬಿಡುಗಡೆ ಆದಾಗಿನಿಂದ ಒಂದಲ್ಲ ಒಂದು ರೀತಿಯ ಕಾಂಟ್ರವರ್ಸಿ ಸೃಷ್ಟಿಸಿತ್ತು. ಗುಂಜನ್​ಗೂ ಮುನ್ನ ಶ್ರೀವಿದ್ಯಾ ರಾಜನ್​ ಕಾರ್ಗಿಲ್​ ಯುದ್ಧದಲ್ಲಿ ಭಾಗವಹಿಸಿರುವ ಬಗ್ಗೆ ಹೇಳಿಕೊಂಡಿದ್ದರು. ಇದೆಲ್ಲವನ್ನು ಅಸ್ತ್ರವಾಗಿಟ್ಟುಕೊಂಡ ಕಂಗನಾ, ಇದೀಗ ಕರಣ್​ ವಿರುದ್ಧ ಮತ್ತೆ ತಿರುಗಿ ಬಿದ್ದಿದ್ದಾರೆ.

    ಇದನ್ನೂ ಓದಿ: ಮಾಕ್​ಟೇಲ್​ ಕೃಷ್ಣ- ಮಿಲನಾ ನಾಗರಾಜ್​ ಕಲ್ಯಾಣ ಯಾವಾಗ ಗೊತ್ತಾ?

    ಅಂದಹಾಗೆ, ಇದೇ ವರ್ಷ ಜನವರಿ 26ರಂದು ಕರಣ್​ ಜೋಹರ್​, ಕಂಗನಾ ರಣಾವತ್​, ಏಕ್ತಾ ಕಪೂರ್​ ಸೇರಿ ಹಲವು ಬಾಲಿವುಡ್​ ಮಂದಿಗೆ ಪದ್ಮಶ್ರಿ ನೀಡಲಾಗಿತ್ತು. (ಏಜೆನ್ಸೀಸ್​)

    ಇದ್ಯಾರ್​ ಗುರು? ರಿಷಭ್​ ಶೆಟ್ಟಿ ಬ್ರದರ್​ ಇದ್ದಂಗೆ ಅವ್ರೆ ….

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts