More

    ಸುಶಾಂತ್​ಗೇನೋ ರಹಸ್ಯ ಗೊತ್ತಿತ್ತು, ಅದಕ್ಕೆ ಕೊಲೆ ಆಯ್ತು … ಕಂಗನಾ ಹೊಸ ಬಾಂಬ್​

    ಸುಶಾಂತ್​ ಸಿಂಗ್ ರಜಪೂತ್​ ಸಾವಿನ ನಂತರ, ನೆಪೋಟಿಸಂ (ಸ್ವಜನಪಕ್ಷಪಾತ) ಮತ್ತು ಬಾಲಿವುಡ್​ ಮಾಫಿಯಾ ಬಗ್ಗೆ ನಿರಂತರವಾಗಿ ಮಾತನಾಡಿಕೊಂಡು ಬಂದವರು ನಟಿ ಕಂಗನಾ ರಣಾವತ್​. ಆದರೆ, ಇದೀಗ ಈ ಪ್ರಕರಣ ಬೇರೆಯದೇ ತಿರುವು ಪಡೆಯುತ್ತಿದೆ. ಸುಶಾಂತ್​ಗೆ ಗೆಳತಿ ರಿಯಾ ಚಕ್ರವರ್ತಿ ಡ್ರಗ್ಸ್​ ಕೊಡುತ್ತಿದ್ದರು ಎಂಬ ಹೊಸ ಆಂಗಲ್​ ಈ ಪ್ರಕರಣಕ್ಕೆ ಸಿಕ್ಕಿದೆ.

    ಇದನ್ನೂ ಓದಿ: ಇನ್ಮುಂದೆ ಇಬ್ಬರಲ್ಲ ಮೂವರು ಎಂದ ಅನುಷ್ಕಾ: ಹಾಸ್ಯಭರಿತ ಮೀಮ್ಸ್​ನಿಂದ ಟ್ರೆಂಡ್​​​ ಆದ್ರು ವಿರೂಷ್ಕಾ!

    ಈ ವಿಷಯವಾಗಿ ಮಾತನಾಡಿರುವ ಅವರು, ಬಾಲಿವುಡ್​ನ ಕೆಲವು ರಹಸ್ಯಗಳು ಸುಶಾಂತ್​ ಬಾಯಿಬಿಡಬಾರದು ಎಂಬ ಕಾರಣಕ್ಕೆ ಅವರನ್ನು ಕೊಲ್ಲಲಾಗಿದೆ ಎಂದು ಹೊಸ ಬಾಂಬ್​ ಹಾಕಿದ್ದಾರೆ.

    ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ಸುಶಾಂತ್​ ಸಿಂಗ್​ ರಜಫುತ್​ ಅವರನ್ನು ಕೊಲ್ಲಲಾಗಿದೆ. ಕಾರಣ, ಅವರಿಗೆ ಬಾಲಿವುಡ್​ನ ಕೆಲವು ರಹಸ್ಯಗಳು ಗೊತ್ತಿದ್ದವು. ಅದನ್ನು ಅವರೆಲ್ಲೂ ಬಾಯಿಬಿಡಬಾರದು ಎಂಬ ಕಾರಣಕ್ಕೆ ಅವರನ್ನು ಕೊಲ್ಲಲಾಗಿದೆ. ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋಗೆ ಈ ವಿಷಯದಲ್ಲಿ ಸಹಾಯ ಮಾಡುವುದಕ್ಕೆ ನನಗೆ ಆಸೆ ಇದೆ. ಆದರೆ, ಅದಕ್ಕೂ ಮುನ್ನ, ನನಗೆ ಕೇಂದ್ರ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು’ ಎಂದು ಕಂಗನಾ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ‘ರತ್ನನ್​ ಪ್ರಪಂಚ’ ಚಿತ್ರಕ್ಕೆ ಹೀರೋಯಿನ್​ ಆಯ್ಕೆ … ಕನ್ನಡಕ್ಕೆ ಬಂದ ರೆಬಾ

    ಇನ್ನು ಅಮೇರಿಕಾದಲ್ಲಿ ನೆಲೆಸಿರುವ ಸುಶಾಂತ್​ ಸಿಂಗ್​ ರಜಪೂತ್​ ಅವರ ಸಹೋದರಿ ಶ್ವೇತಾ ಸಿಂಗ್​ ಕೀರ್ತಿ ಸಹ ಕಂಗನಾ ಅವರ ಈ ವಾದಕ್ಕೆ ಸಪೋರ್ಟ್​ ಮಾಡಿದ್ದಾರೆ. ಅಷ್ಟೇ ಅಲ್ಲ, ನಾಕೋರ್ಟಿಕ್ಸ್​ ಬ್ಯೂರೋಗೆ ಕಂಗನಾ ಸಹಕಾರ ಕೊಡುವುದಾಗಿ ಹೇಳಿರುವ ನಿಟ್ಟಿನಲ್ಲಿ, ಅವರಿಗೆ ಸೂಕ್ತ ಭದ್ರತೆ ಕೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್​ ಮೂಲಕ ವಿನಂತಿಸಿಕೊಂಡಿದ್ದಾರೆ ಶ್ವೇತಾ.

    ಸುದೀಪ್​ ಹುಟ್ಟುಹಬ್ಬಕ್ಕೆ ‘ಕೋಟಿಗೊಬ್ಬ 3’ ಚಿತ್ರದ ಇನ್ನೊಂದು ಟೀಸರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts