ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ, ನೆಪೋಟಿಸಂ (ಸ್ವಜನಪಕ್ಷಪಾತ) ಮತ್ತು ಬಾಲಿವುಡ್ ಮಾಫಿಯಾ ಬಗ್ಗೆ ನಿರಂತರವಾಗಿ ಮಾತನಾಡಿಕೊಂಡು ಬಂದವರು ನಟಿ ಕಂಗನಾ ರಣಾವತ್. ಆದರೆ, ಇದೀಗ ಈ ಪ್ರಕರಣ ಬೇರೆಯದೇ ತಿರುವು ಪಡೆಯುತ್ತಿದೆ. ಸುಶಾಂತ್ಗೆ ಗೆಳತಿ ರಿಯಾ ಚಕ್ರವರ್ತಿ ಡ್ರಗ್ಸ್ ಕೊಡುತ್ತಿದ್ದರು ಎಂಬ ಹೊಸ ಆಂಗಲ್ ಈ ಪ್ರಕರಣಕ್ಕೆ ಸಿಕ್ಕಿದೆ.
ಇದನ್ನೂ ಓದಿ: ಇನ್ಮುಂದೆ ಇಬ್ಬರಲ್ಲ ಮೂವರು ಎಂದ ಅನುಷ್ಕಾ: ಹಾಸ್ಯಭರಿತ ಮೀಮ್ಸ್ನಿಂದ ಟ್ರೆಂಡ್ ಆದ್ರು ವಿರೂಷ್ಕಾ!
ಈ ವಿಷಯವಾಗಿ ಮಾತನಾಡಿರುವ ಅವರು, ಬಾಲಿವುಡ್ನ ಕೆಲವು ರಹಸ್ಯಗಳು ಸುಶಾಂತ್ ಬಾಯಿಬಿಡಬಾರದು ಎಂಬ ಕಾರಣಕ್ಕೆ ಅವರನ್ನು ಕೊಲ್ಲಲಾಗಿದೆ ಎಂದು ಹೊಸ ಬಾಂಬ್ ಹಾಕಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಸುಶಾಂತ್ ಸಿಂಗ್ ರಜಫುತ್ ಅವರನ್ನು ಕೊಲ್ಲಲಾಗಿದೆ. ಕಾರಣ, ಅವರಿಗೆ ಬಾಲಿವುಡ್ನ ಕೆಲವು ರಹಸ್ಯಗಳು ಗೊತ್ತಿದ್ದವು. ಅದನ್ನು ಅವರೆಲ್ಲೂ ಬಾಯಿಬಿಡಬಾರದು ಎಂಬ ಕಾರಣಕ್ಕೆ ಅವರನ್ನು ಕೊಲ್ಲಲಾಗಿದೆ. ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋಗೆ ಈ ವಿಷಯದಲ್ಲಿ ಸಹಾಯ ಮಾಡುವುದಕ್ಕೆ ನನಗೆ ಆಸೆ ಇದೆ. ಆದರೆ, ಅದಕ್ಕೂ ಮುನ್ನ, ನನಗೆ ಕೇಂದ್ರ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು’ ಎಂದು ಕಂಗನಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ‘ರತ್ನನ್ ಪ್ರಪಂಚ’ ಚಿತ್ರಕ್ಕೆ ಹೀರೋಯಿನ್ ಆಯ್ಕೆ … ಕನ್ನಡಕ್ಕೆ ಬಂದ ರೆಬಾ
ಇನ್ನು ಅಮೇರಿಕಾದಲ್ಲಿ ನೆಲೆಸಿರುವ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಸಹ ಕಂಗನಾ ಅವರ ಈ ವಾದಕ್ಕೆ ಸಪೋರ್ಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ನಾಕೋರ್ಟಿಕ್ಸ್ ಬ್ಯೂರೋಗೆ ಕಂಗನಾ ಸಹಕಾರ ಕೊಡುವುದಾಗಿ ಹೇಳಿರುವ ನಿಟ್ಟಿನಲ್ಲಿ, ಅವರಿಗೆ ಸೂಕ್ತ ಭದ್ರತೆ ಕೊಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ವೀಟ್ ಮೂಲಕ ವಿನಂತಿಸಿಕೊಂಡಿದ್ದಾರೆ ಶ್ವೇತಾ.
I am more than willing to help @narcoticsbureau but I need protection from the centre government, I have not only risked my career but also my life, it is quiet evident Sushanth knew some dirty secrets that’s why he has been killed.
— Kangana Ranaut (@KanganaTeam) August 26, 2020