ಕನಕಗಿರಿ: ಪಟ್ಟಣದ ಪೊಲೀಸ್ ಠಾಣೆ ಹಿಂಭಾಗ ಕೊಳಚೆ ನೀರು ನಿಲ್ಲದಂತೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ 4 ಹಾಗೂ 5ನೇ ವಾರ್ಡ್ ನಿವಾಸಿಗಳು ಪಪಂ ಪ್ರಭಾರ ಮುಖ್ಯಾಧಿಕಾರಿ ರೆಡ್ಡಿ ರಾಯನಗೌಡಗೆ ಮಂಗಳವಾರ ಮನವಿ ಸಲ್ಲಿಸಿದರು.
ಪೊಲೀಸ್ ಠಾಣೆ ಮುಂದೆ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಲಾಗಿದೆ. ಇದರಿಂದಾಗಿ ಠಾಣೆ ಹಿಂಭಾಗದಲ್ಲಿ ಕೊಳಚೆ ನೀರು ನಿಲ್ಲುತ್ತಿದೆ. ಸ್ಥಳೀಯರಿಗೆ ರೋಗಗಳು ಕಾಡುತ್ತಿವೆ. ಯುವಕನೊಬ್ಬ ಡೆಂೆಗೆ ಬಲಿಯಾಗಿದ್ದಾನೆ. ಶೀಘ್ರ ವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿ ಕೊಳಚೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಬಸವರಾಜ ನಾಯಕ್, ಅನಿಲ್ ಬಿಜ್ಜಳ, ಸಂತೋಷ, ನಾಗರಾಜ ಕಿನ್ನಾಳ, ಪರಶುರಾಮ ಸೂಡಿ ಇತರರಿದ್ದರು.