More

    ಪೊಲೀಸರಿಂದ ಆಗುವ ತೊಂದರೆ ನಿವಾರಿಸಿ

    ಕಂಪ್ಲಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಶಿವರಾಜಗೆ ಖಾಸಗಿ ಬಸ್ ಚಾಲಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ನಾನಾ ವಾಹನಗಳ ಚಾಲಕ, ಮಾಲೀಕರ ಸಂಘಗಳ ಪದಾಧಿಕಾರಿಗಳು ಬುಧವಾರ ಮನವಿ ಸಲ್ಲಿಸಿದವು.

    7 ಲಕ್ಷ ರೂಪಾಯಿ ಜುಲ್ಮಾನೆ ಮತ್ತು 10 ವರ್ಷ ಜೈಲು ಶಿಕ್ಷೆ ರದ್ದುಗೊಳಿಸಿ

    ಖಾಸಗಿ ಬಸ್ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಶರ್ಮಸ್ ವಲಿ ಮಾತನಾಡಿ, ರಾಜ್ಯದ ಗಡಿ ಭಾಗಗಳಲ್ಲಿರುವ ಸಾರಿಗೆ ಇಲಾಖೆಯ ಎಲ್ಲ ತಪಾಸಣೆ ಠಾಣೆಗಳನ್ನು ತೆಗೆದುಹಾಕಬೇಕು. ಮಿತಿ ಮೀರಿದ ಅಳತೆಗೆ ವಿಧಿಸುತ್ತಿರುವ 7 ಲಕ್ಷ ರೂಪಾಯಿ ಜುಲ್ಮಾನೆ ಮತ್ತು 10 ವರ್ಷ ಜೈಲು ಶಿಕ್ಷೆ ರದ್ದುಗೊಳಿಸಬೇಕು ಎಂದು ಆಗ್ರಹಿಸಲಾಯಿತು.

    ಇದನ್ನೂ ಓದಿ: ಭಾರತದ ಆಲ್ರೌಂಡರ್​ ದೀಪ್ತಿ ಶರ್ಮಗೆ ಐಸಿಸಿ ಮಾಸಿಕ ಕ್ರಿಕೆಟರ್​ ಪ್ರಶಸ್ತಿ

    ಕಪ್ಪು ಪಟ್ಟಿಯಲ್ಲಿರುವ ವಾಣಿಜ್ಯ ವಾಹನಗಳಿಗೆ ಎಫ್‌ಸಿ ಮತ್ತು ಪರ್ಮಿಟ್ ನವೀಕರಣ ಮಾಡಿಕೊಡಬೇಕು. ಡಿಎಸ್‌ಎ ಪ್ರಕರಣಗಳು ಎಲ್ಲೇ ದಾಖಲಾಗಿದ್ದರೂ ಅದನ್ನು ವಾಹನ ಮಾಲೀಕರು ಮೂಲ ಕಚೇರಿಯಲ್ಲೇ ಇತ್ಯರ್ಥಕ್ಕೆ ಅವಕಾಶ ಮಾಡಿಕೊಡಬೇಕು. ಗಂಗಾವತಿ ಬಳಿ ಇರುವ ಟೋಲ್ ಹತ್ತಿರ ಪೊಲೀಸರು ಲಾರಿಗಳನ್ನು ನಿಲ್ಲಿಸಿ ತೊಂದರೆ ಕೊಡುವುದನ್ನು ನಿವಾರಿಸಬೇಕು. ಗಂಗಾವತಿಯಿಂದ 40 ಕಿ.ಮೀ. ಒಳಗೆ ಮರಳಿ, ಹೇಮಗುಡ್ಡ, ಶಹಪುರ, ಹಿಟ್ನಾಳ ನಾಲ್ಕು ಟೋಲ್‌ಗಳಿದ್ದು ಸ್ಥಳೀಯ ಲಾರಿಗಳಿಗೆ ಇವುಗಳಿಂದ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts