ಕಂಪ್ಲಿ: ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ನವಜಾತ ಶಿಶುವಾರ ಕಾರ್ಯಕ್ರಮ ನಡೆಯಿತು. ಮಕ್ಕಳ ತಜ್ಞ ಸಾಗರ್ ವಿ.ಭರಮಕ್ಕನವರ್ ಮಾತನಾಡಿ, 21ವರ್ಷದ ನಂತರವೇ ಗರ್ಭ ಧರಿಸುವುದು ಸೂಕ್ತ. ಯುವತಿ, ಮಹಿಳೆ, ಗರ್ಭಿಣಿಯರು ಸಮತೋಲನಯುಕ್ತ ಪೌಷ್ಟಿಕ ಆಹಾರ ಸೇವಿಸುವಲ್ಲಿ ಜಾಗೃತಿ ತೋರಬೇಕು. ಗರ್ಭ ಧರಿಸಿದ ನಂತರ ಸರಿಯಾದ ಅವಧಿಗಳಲ್ಲಿ ಲಸಿಕೆ, ಚಿಕಿತ್ಸೆ, ತಪಾಸಣೆ ಪಡೆದುಕೊಳ್ಳಬೇಕು. ರಕ್ತಹೀನತೆ, ರಕ್ತದೊತ್ತಡ, ಮಧುಮೇಹ ನಿಯಂತ್ರಣಕ್ಕೆ ತಕ್ಕ ಚಿಕಿತ್ಸೆ ಪಡೆದುಕೊಳ್ಳಬೇಕು. ಅವಧಿ ಪೂರೈಸಿದ ಆರೋಗ್ಯಪೂರ್ಣ ಮಗುವಿನ ಜನನಕ್ಕಾಗಿ ಗರ್ಭಿಣಿಯರು ಸೂಕ್ತ ಜಾಗೃತಿ ತೋರಬೇಕು ಎಂದು ಹೇಳಿದರು.