More

    ಕಳಸಾಪೂರ ಗ್ರಾಮದಲ್ಲಿ ಶಿವಾನುಭವ ಕಾರ್ಯಕ್ರಮ

    ಗದಗ: ತಾಲೂಕಿನ ಕಳಸಾಪೂರ ಗ್ರಾಮದ ಬಸವ ಕೇಂದ್ರದಲ್ಲಿ ಭಾನುವಾರ 1501ನೇ ಶಿವಾನುಭವ ಕಾರ್ಯಕ್ರಮ ಜರುಗಿತು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಸವ ಕೇಂದ್ರದ ಕಾರ್ಯಾಧ್ಯಕ್ಷ, ಕನ್ನಡ ಪರ ಹೋರಾಟಗಾರ ಮಲ್ಲಿಕಾರ್ಜುನ ಖಂಡಮ್ಮನವರ, ಬಸವಣ್ಣನವರು ಒಬ್ಬ ಶ್ರೇಷ್ಠ ಅನುಭವಿಗಳು ಮತ್ತು ನೈತಿಕ ಮೌಲ್ಯಗಳ ತಳಹದಿಯ ಮೇಲೆ ನಿರ್ಮಾಣಗೊಂಡ ಸಮಾನತೆಯ ಸಮಾಜವನ್ನು ಕಟ್ಟಲುಬಯಸಿದ್ದರು. ಈ ಮೌಲ್ಯಗಳನ್ನಾಧರಿಸಿದ ಸಮಾನತೆಯ ಸಮಾಜವನ್ನು ಸ್ಥಾಪಿಸಿದರು. ಮಹಿಳೆಯರಿಗೂ ಧಾಮಿರ್ಕ ಹಾಗೂ ಸಾಮಾಜಿಕ ಕರ್ತವ್ಯಗಳನ್ನು ಕೊಡಮಾಡಿದರು. ಕಾಯಕವನ್ನು ಆಧ್ಯಾತ್ಮಕರಿಸಿ ಕಾಯಕವೇ ಕೈಲಾಸವೆಂದು ಉಪದೇಶಿಸಿದರು. ಬಸವಣ್ಣನವರ ವಚನ ಸಾಹಿತ್ಯವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ವಿಶ್ವಮಾನವರಾಗಿ ಎಲ್ಲರನ್ನು ಪ್ರೀತಿಸೋಣ ಎಂದು ಬಸವರಾಜ ಖಂಡಮ್ಮನ್ನವರ ಹೇಳಿದರು.
    ಅನುಸೂಯಾ ಎಂ, ಜಯಶ್ರೀ ಕೆ, ಮಹೇಶ ಹಾದಿಮನಿ, ಶರಣಪ್ಪ ಹುಯಿಗೋಳ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts