ಬೆಂಗಳೂರು: ಆರ್.ಚಂದ್ರು ನಿರ್ದೇಶನ-ನಿರ್ಮಾಣದ ಬಹುನಿರೀಕ್ಷಿತ ಅದ್ಧೂರಿ ತಾರಾಗಣದ ಚಿತ್ರ ‘ಕಬ್ಜ’ ಹಲವು ವರ್ಷಗಳ ಕಾಲದ ಭೂಗತ ಲೋಕವನ್ನೇ ತೆರೆದಿಡಲು, ಆ ಮೂಲಕ ಸಿನಿಪ್ರಿಯರನ್ನು ರಂಜಿಸಲು ತೆರೆಯ ಮೇಲೆ ಬರಲಿದೆ.
ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಶ್ರೀಯಾ ಶರಣ್ ಸೇರಿ ಹಲವಾರು ಘಟಾನುಘಟಿ ತಾರೆಯರು ಅಭಿನಯಿಸುತ್ತಿರುವ ಈ ಚಿತ್ರ ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ ಮತ್ತು ಬೆಂಗಾಲಿ.. ಹೀಗೆ ಏಳು ಭಾಷೆಗಳಲ್ಲಿ ತೆರೆ ಕಾಣಲಿದೆ. ಆದರೆ ಈ ಚಿತ್ರದ ಕುರಿತು ವದಂತಿಯೊಂದು ಹರಿದಾಡುತ್ತಿದ್ದು, ಅದಕ್ಕೆ ನಿರ್ದೇಶಕ ಚಂದ್ರು ಸ್ಪಷ್ಟನೆ ನೀಡಿದ್ದಾರೆ.
“ಎಲ್ಲರಿಗೂ ನಮಸ್ಕಾರ.. ನಿನ್ನೆಯಿಂದ “ಸುದೀಪ್” ಅವರು “ಕಬ್ಜ” ಚಿತ್ರತಂಡದಿಂದ ಹೊರಗೆ ನಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ, ಆ ಸುದ್ದಿ ಸತ್ಯಕ್ಕೆ ದೂರವಾದದ್ದು. ಶ್ರೀ “ಕಿಚ್ಚ ಸುದೀಪ್” ಅವರು ಈಗಾಗಲೇ “ಕಬ್ಜ” ಚಿತ್ರೀಕರಣದಲ್ಲಿ ಪಾಲ್ಗೊಂಡು ನಟಿಸಿದ್ದಾರೆ. ಹಾಗಾಗಿ ದಯವಿಟ್ಟು ಈ ರೀತಿಯ ಸುಳ್ಳು ಸುದ್ದಿಗೆ ಯಾರು ಕಿವಿ ಕೊಡಬಾರದು..” ಎನ್ನುವ ಮೂಲಕ ಕಿಚ್ಚ ನಮ್ಮ ‘ಕಬ್ಜ’ದಲ್ಲೇ ಇದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಎಲ್ಲರಿಗೂ ನಮಸ್ಕಾರ,
— R.Chandru (@rchandru_movies) April 4, 2022
ನಿನ್ನೆಯಿಂದ "ಸುದೀಪ್" ಅವರು "ಕಬ್ಜ" ಚಿತ್ರತಂಡದಿಂದ ಹೊರಗೆ ನಡೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ, ಆ ಸುದ್ದಿ ಸತ್ಯಕ್ಕೆ ದೂರವಾದದ್ದು.
ಶ್ರೀ "ಕಿಚ್ಚ ಸುದೀಪ್" ಅವರು ಈಗಾಗಲೇ "ಕಬ್ಜ" ಚಿತ್ರೀಕರಣದಲ್ಲಿ ಪಾಲ್ಗೊಂಡು ನಟಿಸಿದ್ದಾರೆ. ಹಾಗಾಗಿ ದಯವಿಟ್ಟು ಈ ರೀತಿಯ ಸುಳ್ಳು ಸುದ್ದಿಗೆ ಯಾರು ಕಿವಿ ಕೊಡಬಾರದು.
ವಡೆಯರ್-ಪುರಾಣಿಕ್ ಜೋಡಿಯ ಚೊಚ್ಚಲ ಸಾಹಸ ‘ಡೊಳ್ಳು’ ಚಿತ್ರಕ್ಕೆ ಮತ್ತೆರಡು ಪ್ರಶಸ್ತಿ
ಉತ್ಸವದ ವೇಳೆಯೇ ದೇವಸ್ಥಾನದ ರಥದಿಂದ ಕಳಚಿ ಬಿದ್ದ ಕಳಶ; ಭಕ್ತರಲ್ಲಿ ತೀವ್ರ ಆತಂಕ!