More

    ನ್ಯಾಯಾಧೀಶೆಗೆ ಬೆದರಿಕೆ, ನಾಲ್ವರ ಬಂಧನ

    ಕಾಸರಗೋಡು: ಬಿಜೆಪಿ ಮುಖಂಡ, ವಕೀಲ, ಆಲಪ್ಪುಳ ಮಾವೇಲಿಕ್ಕರ ನಿವಾಸಿ ರಂಜಿತ್ ಶ್ರೀನಿವಾಸನ್ ಕೊಲೆ ಪ್ರಕರಣದ ಅಪರಾಧಿಗಳಿಗೆ ಮರಣದಂಡನೆ ವಿಧಿಸಿದ ನ್ಯಾಯಾಧೀಶರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆಯೊಡ್ಡಿ, ಅವಹೇಳನಕಾರಿ ಪೋಸ್ಟ್ ರವಾನಿಸಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

    ಆಲಪ್ಪುಳ ಮಣ್ಣಾಂಚೇರಿ ಪಂಚಾಯಿತಿ ವ್ಯಾಪ್ತಿಯ ನಸೀರ್‌ಮೋನ್(47), ನವಾಸ್ ನೈನ(42), ತಿರುವನಂತಪುರದ ರಾಫಿ(38) ಹಾಗೂ ಅಂಬಲಪ್ಪುಳದ ಶಾಜಹಾನ್ ಬಂಧಿತರು. ಇವರಲ್ಲಿ ನವಾಸ್ ನೈನಾ ಮಣ್ಣಂಚೇರಿ ಪಂಚಾಯಿತಿ ಸಮಿತಿ ಎಸ್‌ಡಿಪಿಐ ಸದಸ್ಯ. ಮತೀಯ, ರಾಜಕೀಯ ದ್ವೇಷ ಹರಡಿಸುವ ಹಾಗೂ ಗಲಭೆ ಹುಟ್ಟುಹಾಕುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರಗಳು ಹಾಗೂ ಹೇಳಿಕೆ ರವಾನಿಸಿರುವ ಆರೋಪದನ್ವಯ 13 ಮಂದಿಯ ವಿರುದ್ಧ ತನಿಖೆ ನಡೆಸಲಾಗಿದ್ದು, ಆಲಪ್ಪುಳ ಜಿಲ್ಲೆಯಲ್ಲಿ ಐದು ಪ್ರತ್ಯೇಕ ಕೇಸು ದಾಖಲಿಸಲಾಗಿದೆ. ಪ್ರಕರಣದ ತನಿಖೆಗಾಗಿ ಪ್ರತ್ಯೇಕ ತಂಡವನ್ನೂ ರಚಿಸಲಾಗಿದೆ.

    ರಂಜಿತ್ ಶ್ರೀನಿವಾಸ್ ಕೊಲೆ ಪ್ರಕರಣದ ಎಲ್ಲ 15 ಅಪರಾಧಿಗಳಿಗೆ ಆಲಪ್ಪುಳ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ(ಪ್ರಥಮ)ದ ನ್ಯಾಯಾಧೀಶೆ ವಿ.ಜಿ.ಶ್ರೀದೇವಿ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts