ಪಂಚಕುಲ (ಹರಿಯಾಣ): ತನ್ನ 22ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಯುವತಿಯೊಬ್ಬಳು ತನ್ನ ಸ್ನೇಹಿತೆಯೊಂದಿಗೆ ಜಾಲಿ ರೈಡ್ಗೆಂದು ತೆರಳಿ ಸಾವಿಗೀಡಾಗಿರುವ ದುರಂತ ಘಟನೆ ಹರಿಯಾಣದ 26ನೇ ವಲಯದ ಐಟಿಬಿಪಿ ಗೇಟ್ ಬಳಿ ನಡೆದಿದೆ.
ಅನು ಮೃತ ದುರ್ದೈವಿ. ಸ್ನೇಹಿತೆಯೊಂದಿಗೆ ಬೈಕ್ನಲ್ಲಿ ಸೋಮವಾರ ರಾತ್ರಿ ಜಾಲಿ ರೈಡ್ಗೆ ತೆರಳಿದ್ದಾಗ ಕೆಳಗೆ ಬಿದ್ದು ಮೃತಪಟ್ಟಿದ್ದಾಳೆ. ಸ್ನೇಹಿತೆಯು ವೇಗವಾಗಿ ಬೈಕ್ ಚಾಲನೆ ಮಾಡಿದ್ದೆ ಮಗಳ ಸಾವಿಗೆ ಕಾರಣ ಎಂದು ಹೇಳಿ ಸಂತ್ರಸ್ತ ಯುವತಿಯ ಪಾಲಕರು ಚಂಡಿಗಢದ ಮೌಲಿ ಜಾಗ್ರನ್ ನಿವಾಸಿಯಾಗಿರುವ ಆಕೆಯ ಸ್ನೇಹಿತೆ ಉಸ್ಮಾನ್ ವಿರುದ್ಧ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಡಿಪ್ರೆಷನ್ಗೆ ಕಾರಣ ಹುಡುಕಿದ ಕಂಗನಾ ರಣಾವತ್!
ಹರಿಯಾಣ ದೆರಾ ಬಸ್ಸಿಯ ಖೇರಿ ಗ್ರಾಮದ ನಿವಾಸಿಯಾದ ಅನು ಸೆಕ್ಟರ್ 15ರಲ್ಲಿ ಸಲೂನ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ನಿನ್ನೆ ಹುಟ್ಟುಹಬ್ಬವಿದ್ದರಿಂದ ಆಚರಣೆ ಮಾಡಿ ಅದೇ ಖುಷಿಯಲ್ಲಿ ಸ್ನೇಹಿತೆ ಉಸ್ಮಾನ್ ಜತೆಗೆ ಅನು ಜಾಲಿ ರೈಡ್ಗೆ ತೆರಳಿದ್ದಾಳೆ. ಉಸ್ಮಾನ್ ವೇಗವಾಗಿ ಬೈಕ್ ಚಲಿಸುತ್ತಾ ಸ್ಪೀಡ್ ಬ್ರೇಕರ್ ನೋಡದೆ ಅದರ ಮೇಲೆ ಬೈಕ್ ಹಾರಿಸಿದ್ದಾಳೆ. ಈ ವೇಳೆ ಆಯತಪ್ಪಿ ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಸೆಕ್ಟರ್ 6ರಲ್ಲಿರುವ ಆಸ್ಪತ್ರೆಗೆ ದಾಖಲಿಸಿದಾದರೂ ಅದಾಗಲೇ ಸಾವಿಗೀಡಾಗಿರುವ ಬಗ್ಗೆ ವೈದ್ಯರು ತಿಳಿಸಿದರು.
ಶವಪರೀಕ್ಷೆಯ ಬಳಿಕ ಅನು ಶವವನ್ನು ಪಾಲಕರಿಗೆ ಹಸ್ತಾಂತರಿಸಲಾಯಿತು. ಇದೀಗ ಆರೋಪಿ ಉಸ್ಮಾನಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಉಸ್ಮಾನ್ ವಿರುದ್ಧ ಬೇಜವಾಬ್ದಾರಿಯಿಂದ ಬೈಕ್ ಚಾಲನೆ ಮಾಡಿ ಸಾವಿಗೆ ಕಾರಣವಾದ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)
ಚಹಾಲ್ ಕಮಾಲ್: ಮಾರಕ ಬೌಲಿಂಗ್ ದಾಳಿಗೆ ಹೈದರಾಬಾದ್ ತತ್ತರ, ಆರ್ಸಿಬಿ ಶುಭಾರಂಭ!