More

    ದಾಖಲೆ ನಿರ್ಮಿಸಲಿದ್ದಾರೆ ಜೋಶಿ

    ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದಾದ್ಯಂತ ಬಿಜೆಪಿ ಪರ ಉತ್ತಮ ವಾತಾವರಣವಿದೆ. ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರು ಸತತ 5ನೇ ಬಾರಿ ಗೆದ್ದು ದಾಖಲೆ ನಿರ್ಮಿಸಲಿದ್ದಾರೆ ಎಂದು ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಸಂಚಾಲಕ ಡಾ. ಕ್ರಾಂತಿಕಿರಣ ವಿಶ್ವಾಸ ವ್ಯಕ್ತಪಡಿಸಿದರು.
    ನಗರದ ವಾರ್ಡ್. ನಂ.72ರ ಅಕ್ಕಿಪೇಟೆ, ಅಕ್ಕಸಾಲಿಗರ ಓಣಿ, ಬೆಳಮಕರ ಓಣಿ ಸುತ್ತಲಿನ ಪ್ರದೇಶದಲ್ಲಿ ಇತ್ತೀಚೆಗೆ ಮನೆ ಮನೆಗೆ ತೆರಳಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರ ಪರ ಮತಯಾಚನೆ ಮಾಡಿ ಅವರು ಮಾತನಾಡಿದರು.
    ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಕಾರ್ಯವೈಖರಿ ಎಲ್ಲರಿಗೂ ಮಾದರಿ. ತಮ್ಮ ಅಧಿಕಾರವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಂದ ಪ್ರಸ್ತುತ ಧಾರವಾಡ ಜಿಲ್ಲೆ ದೇಶದ ಭೂಪಟದಲ್ಲಿ ವಿಶೇಷ ಸ್ಥಾನ ಹೊಂದುವಂತಾಗಿದೆ. ವಿಶ್ವದಲ್ಲಿ ಭಾರತ ಇನ್ನಷ್ಟು ಉನ್ನತ ಮಟ್ಟಕ್ಕೇರಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕಿದೆ ಎಂದರು.
    ಮುಖಂಡರಾದ ಲೋಕೇಶ ಗುಂಜಾಳ, ವೀರಯ್ಯಸ್ವಾಮಿ ಸಾಲಿಮಠ, ಯಲ್ಲಪ್ಪ ದೇವಕ್ಕಿ, ಜಗದೀಶ ರಾಯನಾಳ, ಮಲ್ಲಿಕಾರ್ಜುನಯ್ಯ ಸಾಲಿಮಠ, ಮನಗೂಳಿ ತಮ್ಮಣ್ಣ, ರಾಜೇಶ ಹೆಬ್ಬಳ್ಳಿ, ಹುಚ್ಚಪ್ಪ ತೇರದಾಳ, ಚನ್ನಬಸಯ್ಯ ಹಿರೇಮಠ, ಬಸಯ್ಯ ಹಿರೇಮಠ, ಅಶೋಕ ದೇವಕ್ಕಿ, ಬಸವರಾಜ ಶಿರಸಂಗಿ, ಅಮೃತ ಹಿರೇಮಠ, ಪ್ರಕಾಶ ಕುಲಕರ್ಣಿ, ಪೂಜಾ ರಾಯ್ಕರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts