ಭುವನೇಶ್ವರ್: ಒಡಿಶಾದ ಜಾಜ್ಪುರ್ ಜಿಲ್ಲೆಯ ಕೌಖಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಮುಲಪಲಾದ ರಸ್ತೆ ಬದಿಯಲ್ಲಿ ಜನವರಿ 27ರಂದು ಸಂಶಯಾಸ್ಪದ ರೀತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿತ್ತು. ಈ ಪ್ರಕರಣ ಸಂಬಂಧ ಆರೋಪಿ ಹಾಗೂ ಯುವತಿಯ ಪ್ರಿಕರನನ್ನು ಬಂಧಿಸಲಾಗಿದ್ದು, ಯುವತಿ ಸಾಯುವ ಮುನ್ನ ಅವರಿಬ್ಬರು ಹೋಟೆಲ್ನಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ.
ಜನವರಿ 26ರಂದು ಪ್ರಿಯಕರ ರಾಕೇಶ್ ಮತ್ತು ಯುವತಿ ಜರಾಫುಲಾ ನಾಯಕ್ ತಂಗಿದ್ದ ಭುವನೇಶ್ವರ್ ಮೂಲದ ಹೋಟೆಲ್ ರೂಮ್ ಅನ್ನು ಜಾಜ್ಪುರ್ ಪೊಲೀಸರು ಸೀಜ್ ಮಾಡಿದ್ದಾರೆ. ಧರ್ಮಾ ವಿಹಾರದಲ್ಲಿರುವ ಶಿವಸಾಯಿ ಗೆಸ್ಟ್ಹೌಸ್ನ ನಂ-201ನೇ ರೂಮ್ನಲ್ಲಿ ಇಬ್ಬರ ತಂಗಿದ್ದರು. ಅವರಿದ್ದ ಕೊಠಡಿಯನ್ನು ಪೊಲೀಸ್ ತಂಡವೊಂದು ಪರಿಶೀಲಿಸಿ, ಕೆಲ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಜತೆಯಾಗಿ ಬಂದಿದ್ದ ವೈಜ್ಞಾನಿಕ ತಂಡ ಕೆಲವು ಸಾಕ್ಷ್ಯಾಧಾರಗಳನ್ನು ಕಲೆಹಾಕಿದೆ. ಹೋಟೆಲ್ ಆವರಣದಲ್ಲಿನ ಸಿಸಿಟಿವಿ ಮತ್ತು ನೋಂದಣಿ ಪುಸ್ತಕವನ್ನು ಸಹ ಪೊಲೀಸರು ಪರೀಕ್ಷಿಸಿದ್ದಾರೆ.
ಇದನ್ನೂ ಓದಿರಿ: ಸೆಕ್ಸ್ ವೇಳೆ ದುರಂತ ಸಾವಿಗೀಡಾದ ವ್ಯಕ್ತಿ: ಮರಣೋತ್ತರ ವರದಿಯಲ್ಲಿತ್ತು ಬೆಚ್ಚಿಬೀಳಿಸೋ ಸಂಗತಿ!
ಇನ್ನು ವಿಚಾರಣೆ ವೇಳೆ ಬಾಯ್ಬಿಟ್ಟಿರುವ ರಾಕೇಶ್, ಹೊಟೆಲ್ ರೂಮ್ನಲ್ಲಿ ಇಬ್ಬರು ದೈಹಿಕ ಸಂಪರ್ಕ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಮಾರನೇ ದಿನ ಬೆಳಗ್ಗೆ ಜರಾಫುಲ್ಲಾ ಪ್ರಜ್ಞೆಯಿಲ್ಲದ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿದ್ದಾನೆ. ಇದರಿಂದ ಗಾಬರಿಗೊಂಡ ಆತ ತಕ್ಷಣ ತನ್ನ ಸ್ನೇಹಿತ ಶೇಖರ್ ಎಂಬಾತನನ್ನು ಕರೆ ಮಾಡಿ ಕರೆಸಿಕೊಂಡಿದ್ದಾನೆ. ಬಳಿಕ ಬೈಕ್ನಲ್ಲಿ ಕೂರಿಸಿಕೊಂಡು ಹೋಗಿದ್ದಾರೆ. ಮಾರ್ಗ ಮಧ್ಯೆ ಆಕೆ ಮೃತಪಟ್ಟಿರುವುದು ತಿಳಿದು ಜಾಜ್ಪುರದ ಕೌಖಿಯಾ ಏರಿಯಾದ ರಸ್ತೆ ಬದಿಯಲ್ಲಿ ಶವ ಎಸೆದು ಅಲ್ಲಿಂದ ಪರಾರಿಯಾಗಿದ್ದಾಗಿ ರಾಕೇಶ್ ಬಾಯ್ಬಿಟ್ಟಿದ್ದಾನೆ. ಆದರೆ, ಜರಾಫುಲ್ಲಾ ಸಾವಿಗೆ ಕಾರಣ ಏನೆಂಬುದು ನಿಖರವಾಗಿ ತಿಳಿದುಬಂದಿಲ್ಲ.
ಘಟನೆ ಹಿನ್ನೆಲೆ ಏನು?
ಒಡಿಶಾದ ಜಾಜ್ಪುರ್ ಜಿಲ್ಲೆಯ ಕೌಖಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಮುಲಪಲಾದ ರಸ್ತೆ ಬದಿಯಲ್ಲಿ ಜನವರಿ 27ರಂದು ಯುವತಿಯ ಮೃತದೇಹವೊಂದು ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರಿಗೆ ಮೃತದೇಹವು ಯುವತಿ ಜರಾಫುಲಾ ನಾಯಕ್ ಎಂದು ಗುರುತಿಸಿದರು. ಪ್ರಕರಣ ಸಂಬಂಧ ಜಾಜ್ಪುರ್ ಪೊಲೀಸರು ಕಮಿಷನರೇಟ್ ಪೊಲೀಸ್ ಸಹಕಾರದೊಂದಿಗೆ ಸುಂದರ್ಪಾದ ಏರಿಯಾದಲ್ಲಿ ದಾಳಿ ನಡೆಸಿ ಆರೋಪಿ ಹಾಗೂ ಜರಾಫುಲ್ಲಾ ಪ್ರಿಯಕರ ರಾಕೇಶ್ ಬಂಧಿಸಲಾಯಿತು.
ಇದನ್ನೂ ಓದಿರಿ: ಪತ್ನಿ ತುಂಬಾ ಚೆಲ್ಲುಚೆಲ್ಲು, ಹುಟ್ಟುವ ಮಗುವಿನ ಡಿಎನ್ಎ ಪರೀಕ್ಷೆ ಮಾಡಿಸಬಹುದಾ?
ಜರಾಫುಲಾ ಮಯೂರ್ಬಂಜ್ ಜಿಲ್ಲೆಯ ನಿವಾಸಿ. ಆರ್ಡಿ ಮಹಿಳಾ ಯೂನಿವರ್ಸಿಟಿಯ ವಿದ್ಯಾರ್ಥಿನಿಯಾಗಿದ್ದ ಜರಾಫುಲಾ ಜನವರಿ 24ರಂದು ಆಕೆಯ ಚಕ್ರಧರ್ ಟೀಚರ್ ಮಗಳ ಬರ್ತಡೇ ಕಾರ್ಯಕ್ರಮಕ್ಕೆ ತೆರಳುವುದಾಗಿ ಮನೆಗೆ ಹೇಳಿ ಹೊರಟ್ಟಿದ್ದಳು. 25ರಂದು ಬರ್ತಡೇ ಸಮಾರಂಭ ನಡೆದಿತ್ತು. ಮಾರನೇ ದಿನ ಅಂದರೆ 26ನೇ ತಾರೀಖು ಬೆಳಗ್ಗೆ 11 ಗಂಟೆಗೆ ಚಕ್ರಧರ್, ಜಲಾಫುಲಾಳನ್ನು ಜಯದೇವ್ ವಿವಾರ್ ಸ್ಕ್ವೇರ್ಗೆ ಡ್ರಾಪ್ ಮಾಡಿದ್ದರು. ಖಾಸಗಿ ಬಸ್ ಮೂಲಕ ಊರಿಗೆ ಮರಳಲು ಮುಂದಾಗಿದ್ದಳು. ಹೊಟ್ಟೆ ನೋವಿದೆ ಆಸ್ಪತ್ರೆಗೆ ಹೋಗಿ ನಂತರ ಬಸ್ನಲ್ಲಿ ಊರಿಗೆ ಮರಳುತ್ತೇನೆಂದು ಹೇಳಿದ್ದಳು. ಆದರೆ, ಮಧ್ಯಾಹ್ನ 3 ಗಂಟೆಗೆ ಫೋನ್ ಮಾಡಿ, ಹೊಟ್ಟೆ ನೋವಿದೆ, ಫ್ರೆಂಡ್ಸ್ ಮನೆಯಲ್ಲಿ ಉಳಿದುಕೊಂಡಿರುವುದಾಗಿ ಮತ್ತು ನಾಳೆ ಬೆಳಗ್ಗೆ ಬರುವುದಾಗಿ ಹೇಳಿದಳು. ಅಂದು ರಾತ್ರಿಯಿಡಿ ಎಷ್ಟೇ ಫೋನ್ ಮಾಡಿದರು ಸ್ವೀಕರಿಸಲಿಲ್ಲ ಎನ್ನುತ್ತಾರೆ ಜರಾಫುಲ್ಲಾಳ ತಂದೆ ರಮಾಕಾಂತ್.
ಜರಾಫುಲಾಳ ಮೃತದೇಹ ಮಾರನೇ ದಿನ ಅಂದರೆ ಜ. 27ರಂದು ಮುಲಪಲಾದ ರಸ್ತೆಯ ಬದಿಯಲ್ಲಿ ಪತ್ತೆಯಾಗುತ್ತದೆ. ಮೃತದೇಹವನ್ನು ಪಕ್ಕದಲ್ಲಿ ಬಿದ್ದಿದ್ದ ಬ್ಯಾಗ್ನಲ್ಲಿದ್ದ ಮಾಹಿತಿ ಆಧಾರದಲ್ಲಿ ವಿಳಾಸವನ್ನು ಪತ್ತೆ ಹಚ್ಚಿ ಮಾಹಿತಿ ನೀಡಲಾಗುತ್ತದೆ. ಇದರಿಂದ ಶಾಕ್ ಆಗುವ ಕುಟುಂಬ ಶೋಕ ಸಾಗರದಲ್ಲಿ ಮುಳುಗುತ್ತದೆ. ತಕ್ಷಣವೇ ಸ್ಥಳೀಯ ಯುವಕನ ವಿರುದ್ಧ ಜರಾಫುಲಾಳ ತಂದೆ ಕೊಲೆ ಆರೋಪ ಮಾಡುತ್ತಾರೆ.
ಊರಿನಲ್ಲಿ ಪೈಪ್ಲೈನ್ ಕೆಲಸ ಮಾಡಿಕೊಂಡಿದ್ದ ರಾಕೇಶ್ ನನ್ನ ಮಗಳನ್ನು ಲವ್ ಮಾಡುತ್ತಿದ್ದ. ಲಾಕ್ಡೌನ್ ಬಳಿಕ ಯೂನಿವರ್ಸಿಟಿ ಬಿಟ್ಟು ಮಗಳು ಊರಿಗೆ ಬಂದಿದ್ದಾಗ ಇಬ್ಬರ ನಡುವೆ ಸಂಬಂಧ ಬೆಳೆದಿತ್ತು. ಇಬ್ಬರು ವಾಟ್ಸ್ಆ್ಯಪ್ ಮತ್ತು ವಿಡಿಯೋ ಕಾಲ್ ಮೂಲಕ ಮಾತನಾಡುತ್ತಿದ್ದರು ಎಂದು ರಮಾಕಾಂತ್ ದೂರಿದ್ದಾರೆ. ಅಲ್ಲದೆ, ಜರಾಫುಲ್ಲಾ ಭುವನೇಶ್ವರಕ್ಕೆ ಬಂದಾಗಲೆಲ್ಲ ರಾಕೇಶ್ ಜತೆ ಹೆಚ್ಚು ಸಮಯ ಕಳೆಯುತ್ತಿದ್ದಳಂತೆ.
ಆರೋಪಿ ರಾಕೇಶ್ ಸಿಕ್ಕಿಬಿದ್ದಿದ್ಹೇಗೆ?
ಸಂಶಯಾಸ್ಪದ ರೀತಿಯಲ್ಲಿ ಜರಾಫುಲಾಳ ಮೃತದೇಹ ಪತ್ತೆಯಾದ ಮೇಲೆ ಅನುಮಾನಗೊಂಡ ಪೊಲೀಸರು ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಾರೆ. ಇಬ್ಬರು ಯುವಕರು ಸ್ಕೂಟರ್ನಲ್ಲಿ ಬಂದು ಯುವತಿಯ ಮೃತದೇಹವನ್ನು ಎಸೆದು ಸ್ಕೂಟರ್ನಲ್ಲಿ ಪರಾರಿಯಾಗುವ ದೃಶ್ಯ ದಾಖಲಾಗಿರುತ್ತದೆ. ಸ್ಥಳೀಯರು ಸಹ ಇಬ್ಬರು ಯುವಕರು ಸ್ಕೂಟರ್ನಲ್ಲಿ ಬಂದಿದ್ದಾಗಿ ಹೇಳುತ್ತಾರೆ. ಪ್ರಕರಣ ದಾಖಲಿಸಿಕೊಂಡು ಅಖಾಡಕ್ಕೆ ಇಳಿದ ಜಾಜ್ಪುರ್ ಪೊಲೀಸರು ಆರೋಪಿ ರಾಕೇಶ್ನನ್ನು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ. ರಾಕೇಶ್ ಸ್ನೇಹಿತ ಶೇಖರ್ ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. (ಏಜೆನ್ಸೀಸ್)
ಸ್ಕೂಟರ್ನಲ್ಲಿ ಶವ ಕೂರಿಸ್ಕೊಂಡು ಬಂದು ರಸ್ತೆ ಬದಿ ಎಸೆದ ಯುವಕರು: ಬರ್ತಡೇ ಪಾರ್ಟಿಗೆ ಹೋದವಳು ದುರಂತ ಅಂತ್ಯ!