ನವದೆಹಲಿ: ಬಿಜೆಪಿ ಜೊತೆ ಸೇರಿ ಬಿಹಾರದ ಮುಖ್ಯಮಂತ್ರಿಯಾಗಿ ಜೆಡಿಯು ನಾಯಕ ನಿತೀಶ್ ಕುಮಾರ್ ಅವರು 9ನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದರು. ಈ ಕುರಿತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ಕುಸಿದ ತಾಪಮಾನ!: ‘ಊಟಿ’ ಚಳಿಗೆ ಗಢಗಢ ನಡುಗುತ್ತಿರುವ ಜನ
#WATCH | Begusarai: On On JDU Chief Nitish Kumar resigning as the CM of Bihar and JD(U)-BJP alliance, Prashant Kishor, Poll Strategist says, "I have been saying this since starting that Nitish Kumar can swap anytime. This has become a part of his politics… He is a 'paltumaar'.… pic.twitter.com/V7LR9rcJ71
— ANI (@ANI) January 28, 2024
ಬಿಹಾರದ ಬಿಜೆಪಿ ಮತ್ತು ಇತರ ಜೆಡಿಯು ನಾಯಕರು ಕೂಡ ‘ಪಲ್ಟುಮಾರ್’ ಆಗಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಹಲವು ಆರೋಪ ಮಾಡುತ್ತಿದ್ದ ಬಿಜೆಪಿ ನಾಯಕರೇ ಇಂದು ಸ್ವಾಗತ ಮಾಡುತ್ತಿರುವುದು ನೋವಿನ ಸಂಗತಿ ಎಂದಿದ್ದಾರೆ.
ಈ ಕುರಿತು ಸುದ್ದಿಗಾರೊಂದಿಗೆ ಮಾತನಾಡಿರು ಅವರು, ಬಿಹಾರದಲ್ಲಿ ಜೆಡಿಯು-ಬಿಜೆಪಿ ಜೊತೆ ಮಾಡಿಕೊಂಡಿರುವ ಮೈತ್ರಿ ಹೆಚ್ಚು ದಿನ ಉಳಿಯುವ ಸಾಧ್ಯತೆ ಇಲ್ಲ. ಈ ಸರ್ಕಾರದ ಆಯುಷ್ಯ ಕೆಲವೇ ತಿಂಗಳುಗಳು. ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆವರೆಗೂ ನಿಲ್ಲುವ ಸಾಧ್ಯತೆ ಕಡಿಮೆ. ಸಾರ್ವತ್ರಿಕ ಚುನಾವಣೆ ಮುಗಿದ ಆರು ತಿಂಗಳೊಳಗೆ ಈ ಬದಲಾವಣೆ ಕಾಣಲಿದೆ. ಈ ವಿಷಯವನ್ನು ಲಿಖಿತವಾಗಿ ಸಾಬೀತು ಮಾಡುತ್ತೇನೆ ಎಂದು ಭವಿಷ್ಯ ನುಡಿದರು.
2022ರಲ್ಲಿ ಎನ್ಡಿಎ ಮೈತ್ರಿಕೂಟದಿಂದ ಹೊರಬಂದ ನಿತೀಶ್ ಕುಮಾರ್ ಆರ್ಜೆಡಿ ಜತೆಗೂಡಿ ಸರ್ಕಾರ ರಚಿಸಿದ್ದರು. ಇದೇ ರೀತಿ ಮುಂದುವರಿದರೆ ಲೋಕಸಭೆ ಚುನಾವಣೆಯಲ್ಲಿ 5 ಸ್ಥಾನ ಗೆಲ್ಲುವುದು ಕಷ್ಟ ಎಂದು ಪ್ರಶಾಂತ್ ಕಿಶೋರ್ ನೆನಪಿಸಿದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸತೀಶ್ ಯಾವುದೇ ಪಕ್ಷದೊಂದಿಗೆ ಸ್ಪರ್ಧಿಸಿದರೂ 20ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವುದಿಲ್ಲ ಎಂದರು. ಅದಕ್ಕಿಂತ ಹೆಚ್ಚು ಸ್ಥಾನ ಗೆದ್ದರೆ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಚಾಲೆಂಜ್ ಹಾಕಿದರು.
ಭಾನುವಾರ (ಇಂದು) ಸಂಜೆ 5 ಗಂಟೆಗೆ ಜೆಡಿಯು-ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಿದೆ. ಮುಖ್ಯಮಂತ್ರಿಯಾಗಿ ನಿತೀಶ್ ಜೊತೆಗೆ ಆರು ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಇವರಲ್ಲಿ ಮೂವರು ಬಿಜೆಪಿ ಹಾಗೂ ಉಳಿದವರು ಜೆಡಿಯು ಪಕ್ಷದವರು. 2015ರ ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ಗೆಲುವಿಗೆ ಪಾತ್ರ ವಹಿಸಿದ್ದ ಪ್ರಶಾಂತ್ ಕಿಶೋರ್ ಇದೀಗ ಅವರನ್ನೇ ‘ಪಲ್ಟುಮಾರ್’ ಎಂದು ಟೀಕೆ ಮಾಡಿದ್ದಾರೆ.
ಕಾಲೇಜು ಹಾಸ್ಟೆಲ್ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ ಮೃತ್ಯು