More

    ಚಿರು ಸಾವು ಕಂಡು ನಿನ್ನೆಯಿಂದ ಹುಚ್ಚನಂತಾಗಿರುವೆ: ಜಗ್ಗೇಶ್​

    ಭಾನುವಾರ ಹೃದಯಾಘಾತದಿಂದ ನಿಧನರಾದ ಸ್ಯಾಂಡಲ್​ವುಡ್​ ನಟ ಚಿರಂಜೀವಿ ಸರ್ಜಾ ಅವರನ್ನು ನೆನೆದು ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ. ಅದರಲ್ಲೂ ಹಿರಿಯ ನಟ ಜಗ್ಗೇಶ್​, ತಮ್ಮ ಮತ್ತು ಚಿರಂಜೀವಿ ಸರ್ಜಾ ಅವರ ಸಂಬಂಧವನ್ನು ನೆನಪಿಸಿಕೊಂಡು ಸಾಕಷ್ಟು ಮಾತನಾಡಿದ್ದರು. ಅಷ್ಟೇ ಅಲ್ಲ, ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್​ ಅವರನ್ನು ಹೇಗೆ ಒಂದುಗೂಡಿಸಿದ್ದಾಗಿ ಹೇಳಿದ್ದರು.

    ಇದನ್ನೂ ಓದಿ: ಜೂನ್​ ತಿಂಗಳು ಸರ್ಜಾ ಕುಟುಂಬಕ್ಕೆ ಅಪಶಕುನವೇ? ಈ ಹಿಂದೆ ನಡೆದಿತ್ತೊಂದು ದುರಂತ!

    ಚಿರಂಜೀವಿ ಸರ್ಜಾ ಅವರ ಸಾವಿನಿಂದ, ನಿನ್ನೆಯಿಂದ ಹುಚ್ಚನಂತಾಗಿರುವೆ ಎಂದು ಜಗ್ಗೇಶ್​ ಟ್ವೀಟ್​ ಮಾಡಿದ್ದಾರೆ. ಚಿರಂಜೀವಿ ಸರ್ಜಾ ಅವರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ ನಡೆಯಲಿದ್ದು, ಅದಕ್ಕೂ ಮುನ್ನ ಅವರ ಮನೆಯಲ್ಲಿ ಕೆಲವು ಧಾರ್ಮಿಕ ವಿಧಿ-ವಿಧಾನಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಚಿರು ಅವರ ತಂದೆ ವಿಜಯಕುಮಾರ್​ ಅವರು ಮಗನ ವಿಧಿವಿಧಾನದಲ್ಲಿ ಭಾಗವಹಿಸಿರುವುದನ್ನು ನೋಡಿ ತಮಗೆ ದುಃಖ ತಡೆಯಲಾಗುತ್ತಿಲ್ಲ ಎಂದು ಜಗ್ಗೇಶ್​ ಹೇಳಿಕೊಂಡಿದ್ದಾರೆ.

    ಒಬ್ಬ ತಂದೆ ಮಗನ ಅಂತ್ಯಕ್ರಿಯೆ ವಿಧಿವಿಧಾನ ಮಾಡುವುದು ನೋಡಿ ದುಃಖ ತಡೆಯಲಾಗಲಿಲ್ಲಾ. ಬಾಳಿಬದುಕಬೇಕಿದ್ದ ಕಂದಮ್ಮ. ನೆನ್ನೆಯಿಂದ ಹುಚ್ಚನಂತಾಗಿರುವೆ, ಚಿರು ಸಾವುಕಂಡು! ಮೇಘಳ ನೋಡಿ ನನಗೂ ಪರಿಮಳನಿಗೆ ಅಳು ತಡೆಯಲಾಗಲಿಲ್ಲಾ. ಪರಿಮಳ ವಿಧಿಶಪಿಸಿ ಎದ್ದು ಹೋಗಿಬಿಟ್ಟಳು. ಹಾಳಾದ್ದು ಕರೊನಾ ಮನುಕುಲ ಸೇರದಂತೆ ಏಕಾಂಗಿ ಮಾಡಿಬಿಟ್ಟಿತು! ಓಂ ಶಾಂತಿ ಚಿರು ಕಂದ ಎಂದು ಜಗ್ಗೇಶ್​ ಟ್ವೀಟ್​ ಮಾಡಿದ್ದಾರೆ.

    ಇದನ್ನೂ ಓದಿ:ಷ್ಟಪಟ್ಟ ಸ್ಥಳದಲ್ಲೇ ಮಣ್ಣಾಗಲಿದ್ದಾರೆ ಚಿರು ಸರ್ಜಾ; ಅಂತ್ಯಸಂಸ್ಕಾರಕ್ಕೆ ನಡೆದಿದೆ ಸಿದ್ಧತೆ

    ಇನ್ನು, ಚಿರಂಜೀವಿ ಸರ್ಜಾ ಅವರ ಅಂತಿಮ ಸಂಸ್ಕಾರ ಕನಕಪುರ ರಸ್ತೆಯಲ್ಲಿರುವ ನೆಲಗುಳಿಯ ಧ್ರುವ ಸರ್ಜಾ ಅವರ ಬೃಂದಾವನ ಫಾರ್ಮ್​ ಹೌಸ್​ನಲ್ಲಿ ನಡೆಯಲಿದೆ. ಅಲ್ಲಿ ಭರದಿಂದ ಕೆಲಸಗಳು ನಡೆಯುತ್ತಿದ್ದು, ಇಂದು ಮಧ್ಯಾಹ್ನ ಚಿರು ಅವರ ಪಾರ್ತೀವ ಶರೀರವನ್ನು ಅಲ್ಲಿಗೆ ಕೊಂಡಯ್ಯಲಾಗುತ್ತದೆ.

    ಚಿರು ಅಂತ್ಯಕ್ರಿಯೆ: ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts