More

    ಸ್ಟೀವ್​ ಸ್ಮಿತ್​ ಎದುರು ಹೀಗೇಕೆ ಮಾಡಿದೆ… ಕೊನೆಗೂ ಬಾಯ್ಬಿಟ್ರು ಇಶಾಂತ್…!​

    ನವದೆಹಲಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್​ ಪಂದ್ಯದಲ್ಲಿ ಸ್ಟೀವ್​ ಸ್ಮಿತ್​ರನ್ನು ಅಣುಕಿಸಿದ್ದ ಇಶಾಂತ್​ ಶರ್ಮಾರ ವ್ಯಂಗ್ಯವಾದ ಮುಖ ಇಂದಿಗೂ ಮೀಮ್ಸ್​ಗಳಲ್ಲಿ ರಾರಾಜಿಸುತ್ತಿರುತ್ತದೆ. ಸ್ಮಿತ್​ರನ್ನು ಅಣುಕಿಸುವ ಉದ್ದೇಶವಾದರೂ ಏನಿತ್ತು ಎಂಬುದನ್ನೂ ಇಶಾಂತ್​ ಕೊನೆಗೂ ಬಹಿರಂಗ ಪಡಿಸಿದ್ದಾರೆ.

    ಇದನ್ನೂ ಓದಿ: ಬಲಗೈ ಕ್ರಿಕೆಟಿಗ ಗಂಗೂಲಿ ಎಡಗೈ ಬ್ಯಾಟ್ಸ್‌ಮನ್ ಆಗಿದ್ದು ಹೇಗೆ ಗೊತ್ತೇ?

    ನಾಲ್ಕ ಟೆಸ್ಟ್​ ಸರಣಿಗಳ ಎರಡನೇ ಪಂದ್ಯವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿತ್ತು. ಪುಣೆಯಲ್ಲಿ ನಡೆದಿದ್ದ ಮೊದಲ ಪಂದ್ಯವನ್ನು ಸೋತಿದ್ದ ಭಾರತಕ್ಕೆ ಎರಡನೇ ಪಂದ್ಯ ಮಹತ್ವದ್ದಾಗಿತ್ತು. ಬೆಂಗಳೂರಿನಲ್ಲಿ ಮ್ಯಾಚ್​ ನಡೆಯುತ್ತಿತ್ತು. ಸ್ಮಿತ್​ ಬ್ಯಾಟಿಂಗ್​ ಮಾಡುತ್ತಿದ್ದಾಗ ಇಶಾಂತ್​ ಹಾಸ್ಯಾಸ್ಪದ ಹಾಗೂ ವ್ಯಂಗ್ಯವಾದ ಮುಖಭಾವ ನೀಡಿದ್ದರು. ಇದು ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿತ್ತು. ಅಲ್ಲದೆ, ನಾಯಕ ಕೊಹ್ಲಿ ಸಹ ನಗೆ ಬೀರಿದ್ದರು.

    ಬಿಸಿಸಿಐ ಟಿವಿಯ “ಓಪನ್​ ನೆಟ್ಸ್​ ವಿತ್​ ಮಯಾಂಕ್​” ಕಾರ್ಯಕ್ರಮದಲ್ಲಿ ಮಯಾಂಕ್​ ಅಗರ್ವಾಲ್​ರೊಟ್ಟಿಗೆ ಈ ವಿಚಾರವಾಗಿ ಮಾತನಾಡಿರುವ ಇಶಾಂತ್,​ ಅದೊಂದು ಪ್ರಮುಖವಾದ ಪಂದ್ಯವಾಗಿತ್ತು. ಜನರು ಭಾವನೆಗಳಿಗೆ ಒಳಗಾದಾಗ ಏನಾದರೂ ಮಾಡುತ್ತಾರೆ. ಹಾಗೇ ಬ್ಯಾಟ್ಸ್​ಮನ್​ ಅನ್ನು ಗೊಂದಲಕ್ಕೀಡುಮಾಡಲು ಏನು ಬೇಕಾದರೂ ಮಾಡಬಹುದು. ನಾನೇನೆ ಮಾಡಿದರು ಅದು ಬ್ಯಾಟ್ಸ್​ಮನ್​ ಸೋಲಿಸಲು. ಸ್ಮಿತ್​ ಸಹ ಬೌಲರ್​ಗಳನ್ನು ಸಾಕಷ್ಟು ಬಾರಿ ಗೊಂದಲಕ್ಕೀಡುಮಾಡಿದ್ದಾರೆ. ಒಂದು ವೇಳೆ ಸ್ಮಿತ್​ ಔಟಾದರೆ ಪಂದ್ಯ ಗೆಲ್ಲುತ್ತೇವೆ ಎಂದು ಗೊತ್ತಿತ್ತು, ಅದಕ್ಕೆ ಗೊಂದಲಕ್ಕೀಡುಮಾಡುವ ಪ್ರಯತ್ನ ಮಾಡಿದೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ: ವಿಶ್ವಕಪ್​ ಫೈನಲ್​​ ಸೋತರೂ ನಿರಾಶೆಗೊಳ್ಳದೇ ನಗು ಬೀರಿದ್ದರ ಬಗ್ಗೆ ಕೊನೆಗೂ ಮಾತನಾಡಿದ ಸಂಗಕ್ಕರ!

    ವಿರಾಟ್ ಕೊಹ್ಲಿ ಓರ್ವ ಅಗ್ರೆಸ್ಸಿವ್​ ನಾಯಕ. ಅಗ್ರೆಸ್ಸಿವ್​ ತೋರಬೇಕಾದಾಗಲೆಲ್ಲ ಅದನ್ನು ಇಷ್ಟ ಕೂಡ ಪಡುತ್ತಿದ್ದರು. ಯಾವುದಕ್ಕೂ ಅಡ್ಡಿ ಪಡಿಸುತ್ತಿರಲಿಲ್ಲ. ಬದಲಾಗಿ ಏನೇ ಮಾಡಬೇಕೆಂದರೂ ಮಾಡಿ ಆದರೆ, ಬ್ಯಾನ್​ ಆಗೋ ರೀತಿ ಮಾಡ್ಕೋಬೇಡಿ ಎಂದು ಹೇಳುತ್ತಿದ್ದರು ಎಂದು ಇದೇ ವೇಳೆ ತಿಳಿಸಿದರು. (ಏಜೆನ್ಸೀಸ್​)

    ಒಂದು ವರ್ಷದಲ್ಲಿ ಕೋವಿಡ್​-19 ನಿರೋಧಕ ಚುಚ್ಚುಮದ್ದು ಸಿದ್ಧವಾಗೋದು ಅಸಾಧ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts