ನವದೆಹಲಿ: ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಸ್ಟೀವ್ ಸ್ಮಿತ್ರನ್ನು ಅಣುಕಿಸಿದ್ದ ಇಶಾಂತ್ ಶರ್ಮಾರ ವ್ಯಂಗ್ಯವಾದ ಮುಖ ಇಂದಿಗೂ ಮೀಮ್ಸ್ಗಳಲ್ಲಿ ರಾರಾಜಿಸುತ್ತಿರುತ್ತದೆ. ಸ್ಮಿತ್ರನ್ನು ಅಣುಕಿಸುವ ಉದ್ದೇಶವಾದರೂ ಏನಿತ್ತು ಎಂಬುದನ್ನೂ ಇಶಾಂತ್ ಕೊನೆಗೂ ಬಹಿರಂಗ ಪಡಿಸಿದ್ದಾರೆ.
ಇದನ್ನೂ ಓದಿ: ಬಲಗೈ ಕ್ರಿಕೆಟಿಗ ಗಂಗೂಲಿ ಎಡಗೈ ಬ್ಯಾಟ್ಸ್ಮನ್ ಆಗಿದ್ದು ಹೇಗೆ ಗೊತ್ತೇ?
ನಾಲ್ಕ ಟೆಸ್ಟ್ ಸರಣಿಗಳ ಎರಡನೇ ಪಂದ್ಯವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿತ್ತು. ಪುಣೆಯಲ್ಲಿ ನಡೆದಿದ್ದ ಮೊದಲ ಪಂದ್ಯವನ್ನು ಸೋತಿದ್ದ ಭಾರತಕ್ಕೆ ಎರಡನೇ ಪಂದ್ಯ ಮಹತ್ವದ್ದಾಗಿತ್ತು. ಬೆಂಗಳೂರಿನಲ್ಲಿ ಮ್ಯಾಚ್ ನಡೆಯುತ್ತಿತ್ತು. ಸ್ಮಿತ್ ಬ್ಯಾಟಿಂಗ್ ಮಾಡುತ್ತಿದ್ದಾಗ ಇಶಾಂತ್ ಹಾಸ್ಯಾಸ್ಪದ ಹಾಗೂ ವ್ಯಂಗ್ಯವಾದ ಮುಖಭಾವ ನೀಡಿದ್ದರು. ಇದು ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ನಗೆಗಡಲಲ್ಲಿ ತೇಲಿಸಿತ್ತು. ಅಲ್ಲದೆ, ನಾಯಕ ಕೊಹ್ಲಿ ಸಹ ನಗೆ ಬೀರಿದ್ದರು.
ಬಿಸಿಸಿಐ ಟಿವಿಯ “ಓಪನ್ ನೆಟ್ಸ್ ವಿತ್ ಮಯಾಂಕ್” ಕಾರ್ಯಕ್ರಮದಲ್ಲಿ ಮಯಾಂಕ್ ಅಗರ್ವಾಲ್ರೊಟ್ಟಿಗೆ ಈ ವಿಚಾರವಾಗಿ ಮಾತನಾಡಿರುವ ಇಶಾಂತ್, ಅದೊಂದು ಪ್ರಮುಖವಾದ ಪಂದ್ಯವಾಗಿತ್ತು. ಜನರು ಭಾವನೆಗಳಿಗೆ ಒಳಗಾದಾಗ ಏನಾದರೂ ಮಾಡುತ್ತಾರೆ. ಹಾಗೇ ಬ್ಯಾಟ್ಸ್ಮನ್ ಅನ್ನು ಗೊಂದಲಕ್ಕೀಡುಮಾಡಲು ಏನು ಬೇಕಾದರೂ ಮಾಡಬಹುದು. ನಾನೇನೆ ಮಾಡಿದರು ಅದು ಬ್ಯಾಟ್ಸ್ಮನ್ ಸೋಲಿಸಲು. ಸ್ಮಿತ್ ಸಹ ಬೌಲರ್ಗಳನ್ನು ಸಾಕಷ್ಟು ಬಾರಿ ಗೊಂದಲಕ್ಕೀಡುಮಾಡಿದ್ದಾರೆ. ಒಂದು ವೇಳೆ ಸ್ಮಿತ್ ಔಟಾದರೆ ಪಂದ್ಯ ಗೆಲ್ಲುತ್ತೇವೆ ಎಂದು ಗೊತ್ತಿತ್ತು, ಅದಕ್ಕೆ ಗೊಂದಲಕ್ಕೀಡುಮಾಡುವ ಪ್ರಯತ್ನ ಮಾಡಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಫೈನಲ್ ಸೋತರೂ ನಿರಾಶೆಗೊಳ್ಳದೇ ನಗು ಬೀರಿದ್ದರ ಬಗ್ಗೆ ಕೊನೆಗೂ ಮಾತನಾಡಿದ ಸಂಗಕ್ಕರ!
ವಿರಾಟ್ ಕೊಹ್ಲಿ ಓರ್ವ ಅಗ್ರೆಸ್ಸಿವ್ ನಾಯಕ. ಅಗ್ರೆಸ್ಸಿವ್ ತೋರಬೇಕಾದಾಗಲೆಲ್ಲ ಅದನ್ನು ಇಷ್ಟ ಕೂಡ ಪಡುತ್ತಿದ್ದರು. ಯಾವುದಕ್ಕೂ ಅಡ್ಡಿ ಪಡಿಸುತ್ತಿರಲಿಲ್ಲ. ಬದಲಾಗಿ ಏನೇ ಮಾಡಬೇಕೆಂದರೂ ಮಾಡಿ ಆದರೆ, ಬ್ಯಾನ್ ಆಗೋ ರೀತಿ ಮಾಡ್ಕೋಬೇಡಿ ಎಂದು ಹೇಳುತ್ತಿದ್ದರು ಎಂದು ಇದೇ ವೇಳೆ ತಿಳಿಸಿದರು. (ಏಜೆನ್ಸೀಸ್)
ಒಂದು ವರ್ಷದಲ್ಲಿ ಕೋವಿಡ್-19 ನಿರೋಧಕ ಚುಚ್ಚುಮದ್ದು ಸಿದ್ಧವಾಗೋದು ಅಸಾಧ್ಯ