ಚೆನ್ನೈ: ಮುಂಬರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭಕ್ಕೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಇವೆ. ಮಾರ್ಚ್ 22 ರಂದು ಚೆನ್ನೈ ಎಂಎ ಚಿದಂಬರಂ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಲಿವೆ.
ಇದನ್ನೂ ಓದಿ: ದಾರಿತಪ್ಪಿಸುವ ಜಾಹೀರಾತು: ಬಾಬಾ ರಾಮದೇವ್ ಖುದ್ದು ಹಾಜರಿಗೆ ಸುಪ್ರೀಂಕೋರ್ಟ್ ಆದೇಶ!
ಈ ಮಹತ್ವದ ಪಂದ್ಯವನ್ನು ಕಣ್ತುಂಬಿಸಿಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಇದರ ನಡುವೆ ಟೀಂ ಇಂಡಿಯಾ ಸ್ಪಿನ್ ಮಾಂತ್ರಿಕ ಅಶ್ವಿನ್ ಒಂದು ಸಹಾಯವನ್ನು ಕೇಳಿದ್ದಾರೆ.
ಇನ್ನು ಮಾರ್ಚ್ 22 ರಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಟಿಕೆಟ್ ಪಡೆಯಲು ಹರಸಾಹಸ ಪಡೆಯುತ್ತಿದ್ದಾರೆ.
ಚೆನ್ನೈ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ನಡುವೆ ನಡೆಯಲಿರುವ ಉದ್ಘಾಟನಾ ಪಂದ್ಯ ನೋಡಲು ಭಾರಿ ಡಿಮ್ಯಾಂಡ್ ನಿರ್ಮಾಣವಾಗಿದೆ. ಈ ಪಂದ್ಯವನ್ನು ನೋಡಲು ಅಭಿಮಾನಿಗಳು ಟಿಕೆಟ್ಗಳಿಗಾಗಿ ಮಗಿಬಿದ್ದಿದ್ದಾರೆ. ಈ ಪೈಕಿ ಕ್ರಿಕೆಟಿಗ ಆರ್ ಅಶ್ವಿನ್ ಸಹ ಟಿಕೆಟ್ಗಾಗಿ ಪರದಾಡುತ್ತಿದ್ದು ಐಪಿಎಲ್ ಟಿಕೆಟ್ಗಾಗಿ ಸಿಎಸ್ಕೆ ಪ್ರಾಂಚೈಸಿಯನ್ನು ಮನವಿ ಮಾಡಿಕೊಂಡಿದ್ದಾರೆ.
ಟೀಮ್ ಇಂಡಿಯಾ ಆಟಗಾರ ಅಶ್ವಿನ್ ಟಿಕೆಟ್ಗಾಗಿ ಹರಸಾಹಸ ಪಡೆಯುತ್ತಿದ್ದಾರೆ. ಈ ಹೈವೋಲ್ಟೇಜ್ ಪಂದ್ಯಕ್ಕೆ ಟಿಕೆಟ್ಗಳಿಗೆ ಬಾರಿ ಬೇಡಿಕೆ ಇದ್ದು, ತಮ್ಮ ಮಕ್ಕಳಿಗೆ ಈ ಪಂದ್ಯ ನೋಡಲು ಟಿಕೆಟ್ ಕೊಡಿಸುವಂತೆ ಸಿಎಸ್ಕೆಗೆ ಮನವಿ ಮಾಡಿದ್ದಾರೆ.
ಅಶ್ಚಿನ್ ಟ್ವಿಟರ್ ಖಾತೆಯಲ್ಲಿ ಏನು ಬರೆದುಕೊಂಡಿದ್ದಾರೆ: ಚೆನ್ನೈನ ಚೆಪಾಕ್ನಲ್ಲಿ ನಡೆಯಲಿರುವ ಸಿಎಸ್ಕೆ vs ಆರ್ಸಿಬಿ ಮೊದಲ ಪಂದ್ಯಕ್ಕೆ ಟಿಕೆಟ್ ಬೇಡಿಕೆ ಹೆಚ್ಚಾಗಿದೆ. ನನ್ನ ಮಕ್ಕಳು ಉದ್ಘಾಟನಾ ಸಮಾರಂಭ ಮತ್ತು ಆಟವನ್ನು ನೋಡಲು ಬಯಸುತ್ತಿದ್ದಾರೆ. ಚೆನ್ನೈ ಐಪಿಎಲ್ ದಯವಿಟ್ಟು ಸಹಾಯ ಮಾಡಿ ಅಂತ ಬರೆದುಕೊಂಡಿದ್ದಾರೆ.
ಮುಕೇಶ್ ಅಂಬಾನಿ ಮಗನ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ಶಾರುಖ್-ಸಲ್ಮಾನ್ ಕಿತ್ತಾಟ: ಅಮೀರ್ ಖಾನ್ ಬಿಚ್ಚಿಟ್ಟ ರಹಸ್ಯ