More

    ದೇಸಿ ತಳಿಗಳ ಸಾಕಾಣಿಕೆಗೆ ಒತ್ತು

    ಕಡಬ: ಮೌಲ್ಯವರ್ಧಿತ ಉತ್ಪನ್ನ ನೀಡುವ ದೇಸಿ ತಳಿ ಗೋವುಗಳ ಸಾಕಾಣಿಕೆಯಿಂದ ಆರೋಗ್ಯ, ಮಣ್ಣು, ಪರಿಸರದ ಗುಣಮಟ್ಟ ಕಾಪಾಡಿಕೊಳ್ಳಲು ಸಾಧ್ಯ. ಮನುಷ್ಯ ಬಳಕೆಯ ಹಲವು ವಸ್ತುಗಳನ್ನು ದೇಸಿ ತಳಿ ಗೋವುಗಳಿಂದ ಉತ್ಪತ್ತಿಯಾಗಿ ಪಡೆಯಬಹುದಾಗಿದೆ. ಹಾಗಾಗಿ ರೈತರು ದೇಸಿ ತಳಿಗಳನ್ನು ಕಡಿಮೆ ಖರ್ಚಿನಲ್ಲಿ ಸಾಕುವುದರ ಮೂಲಕ ಹೆಚ್ಚು ಆದಾಯ ನೀರಿಕ್ಷಿಸಬಹುದು ಎಂದು ಬೆಂಗಳೂರು ಗಿರಿನಗರ ಗೋಪಾಲ ಟ್ರಸ್ಟ್ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಭಟ್ ಹೇಳಿದರು.

    ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದಲ್ಲಿ ಶನಿವಾರ ಬೆಂಗಳೂರು ಗಿರಿನಗರ ಗೋಫಲ ಟ್ರಸ್ಟ್ ಮತ್ತು ಕೊಯಿಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಮಲೆನಾಡು ಗಿಡ್ಡ ತಳಿ ಗೋವಿನ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯ ಒಂದು ದಿನದ ಮಾಹಿತಿ ಕಾರ್ಯಗಾರ ಮತ್ತು ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ದೇಸಿ ಗೋವು ತಳಿಗಳ ಹಾಲು, ಗೋಮೂತ್ರ, ಸೆಗಣಿಯಿಂದ ಮೌಲ್ಯವರ್ಧಿತ ಉತ್ಪನ್ನ ಬಳಕೆಯಿಂದ ಮನುಷ್ಯ, ಪರಿಸರದ ಮೇಲೆ ಯಾವುದೇ ದುಷ್ಪರಿಣಾಮವಿಲ್ಲ ಎಂಬುದನ್ನು ವಿಜ್ಞಾನವೂ ದೃಡಪಡಿಸಿದೆ. ಭವಿಷ್ಯದ ಉತ್ತಮ ಪರಿಸರ, ಆರೋಗ್ಯ ದೃಷ್ಟಿಯಿಂದ ದೇಸಿ ತಳಿಗಳ ಸಾಕಾಣಿಕೆಗೆ ರೈತರು ಹೆಚ್ಚು ಒತ್ತು ನೀಡಬೇಕು ಎಂದರು.

    ಬೆಂಗಳೂರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಪರ ನಿರ್ದೇಶಕ ಡಾ.ಪಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿದ್ದ ಗೋಫಲ ಟ್ರಸ್ಟ್‌ನ ತಿರುಮಲ ಪ್ರಸನ್ನ ಜೀವಾಮೃತ, ಸಾವಯವ ಗೊಬ್ಬರ, ಗೋಅರ್ಕ ತಯಾರಿಸುವ ವಿಧಾನ, ತಿಪಟೂರು ಬಿಳಿಗೆರೆ ಪಾರಂಪರಿಕ ವೈದ್ಯ ಗಂಗಾಧರ ಗೋವಿನ ಮೌಲ್ಯವರ್ಧಿತ ಉತ್ಪನ್ನಗಳ ಪ್ರಾತ್ಯಕ್ಷಿಕೆ, ಇರ್ದೆ-ಬೆಟ್ಟಂಪಾಡಿ ಶ್ರೀ ಸುರಭಿ ಪಂಚಗವ್ಯ ಶಾಲಾ ಗವ್ಯ ಸಿದ್ದ ಡಾ.ಶಶಿಶೇಖರ್ ಪಂಚಗವ್ಯ ಚಿಕಿತ್ಸೆ, ದೊಡ್ಡಬಳ್ಳಾಪುರ ಗೋಮಾತ ಸಹಕಾರಿ ಸಂಘ ಮತ್ತು ರಾಷ್ಟ್ರೋತ್ಥಾನ ಗೋಶಾಲಾ ಟ್ರಸ್ಟ್ ಅಧ್ಯಕ್ಷ ಡಾ.ಜೀವನ್ ಕುಮಾರ್ ಗೋವುಗಳ ಸಾಕಾಣಿಕೆಯ ಮಾಹಿತಿ, ರೈತರೊಂದಿಗೆ ಸಂವಾದ ನಡೆಸಿದರು.

    ಅತಿಥಿಗಳಿಂದ ಗೋಪೂಜೆ ನಡೆಯಿತು. ಸಿಬ್ಬಂದಿ ರೂಪಾಕ್ಷಿ, ಪವಿತ್ರಾ, ದಿವಾಕರ್, ಲೋಲಾಕ್ಷಮ್ಮ ಇದ್ದರು. ಕೊಲ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಉಪನಿರ್ದೇಶಕ ಡಾ.ಪ್ರಸನ್ನ ಹೆಬ್ಬಾರ್ ಪ್ರಸ್ತಾವಿಸಿ ಸ್ವಾಗತಿಸಿದರು. ಮುಖ್ಯ ಪಶುವೈದ್ಯಾಧಿಕಾರಿ ಡಾ.ಪುನಿತ್ ವಂದಿಸಿ, ಅಭಿವೃದ್ಧಿ ಅಧಿಕಾರಿ ಯು.ಶ್ರೀ ಕೃಷ್ಣ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts