ನವದೆಹಲಿ: ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ), ಜಾರಿ ನಿರ್ದೇಶನಾಲಯ (ಇಡಿ) ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಒಳಗೊಂಡ ಉನ್ನತ ಶ್ರೇಣಿಯ ತಂಡವು ಭಾರತದಿಂದ ಪರಾರಿ ಆಗಿರುವ ಮೋಸ್ಟ್ ವಾಂಟೆಡ್ ಆರೋಪಿಗಳ ಹಸ್ತಾಂತರ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಉದ್ದೇಶದಿಂದ ಬ್ರಿಟನ್ಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಮೋಸ್ಟ್ ವಾಂಟೆಡ್ ಪರಾರಿಯಾದವರಲ್ಲಿ ರಣಾ ಡೀಲರ್ ಸಂಜಯ್ ಭಂಡಾರಿ, ವಜ್ರದ ವ್ಯಾಪಾರಿ ನೀರವ್ ಮೋದಿ ಮತ್ತು ಕಿಂಗ್ಫಿಶರ್ ಏರ್ಲೈನ್ಸ್ ಪ್ರವರ್ತಕ ವಿಜಯ್ ಮಲ್ಯ ಸೇರಿದ್ದಾರೆ.
ಪರಾರಿಯಾದವರ ಅಪರಾಧದ ಆದಾಯವನ್ನು ಸ್ವಾಧಿನಪಡಿಸಿಕೊಳ್ಳಲು ವಿದೇಶದಲ್ಲಿರುವ ಅವರ ಆಸ್ತಿಗಳನ್ನು ಗುರುತಿಸುವ ಪ್ರಕ್ರಿಯೆಯನ್ನು ಭಾರತೀಯ ಹೈಕಮಿಷನ್ ಮೂಲಕ ಭಾರತ ಸರ್ಕಾರವು ಈಗಾಗಲೇ ಪ್ರಾರಂಭಿಸಿದೆ. ಮತ್ತು ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಯ ನೇತೃತ್ವದ ಉನ್ನತಮಟ್ಟದ ತಂಡವು ಪರಾರಿ ಆಗಿರುವವರ ಬ್ಯಾಂಕಿಂಗ್ ವಹಿವಾಟುಗಳ ವಿವರಗಳೊಂದಿಗೆ ಸ್ವಾಧಿನಪಡಿಸಿಕೊಂಡಿರುವ ಆಸ್ತಿಗಳ ಮಾಹಿತಿ ಪಡೆಯಲು ಯುಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.
ಸಂಜಯ್ ಭಂಡಾರಿ ಅವರು 2016ರಲ್ಲಿ ಬ್ರಿಟನ್ಗೆ ಪಲಾಯನ ಮಾಡಿದ್ದರು. ಇಡಿ ಮತ್ತು ಸಿಬಿಐ ಮಾಡಿದ ಕಾನೂನು ವಿನಂತಿ ಮೇರೆಗೆ ಬ್ರಿಟಿಷ್ ಸರ್ಕಾರ ಕಳೆದ ವರ್ಷ ಜನವರಿಯಲ್ಲಿ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮೋದಿಸಿತ್ತು.